ವ್ಯಕ್ತಿ- ಈಶ್ವರಪ್ಪ, ಅಂತ್ಯದಲ್ಲಿ ಜ್ಞಾನೋದಯ!

ಈ ವರ್ಷ ಹೆಚ್ಚು ಚರ್ಚೆ-ವಿವಾದಕ್ಕೆ ಒಳಗಾದ ರಾಜ್ಯದ ನಾಯಕರೆಂದರೆ… ಅದು ಈಶ್ವರಪ್ಪ, ಕುಮಾರಸ್ವಾಮಿ, ಸಿ.ಟಿ.ರವಿ ಇತ್ಯಾದಿಗಳು.

ಕುಮಾರಸ್ವಾಮಿ ಪರಂಪರೆ ಇರುವ ನಾಯಕ, ಕುಮಾರಸ್ವಾಮಿ ಯಾರೊಂದಿಗೂ ಸೇರಬಲ್ಲರು, ಯಾರೊಂದಿಗೂ ಜಗಳಕ್ಕೆ ನಿಲ್ಲಬಲ್ಲರು! ಕರ್ನಾಟಕದ ಅತ್ತ್ಯುತ್ತಮ ಮುಖ್ಯಮಂತ್ರಿಗಳಲ್ಲಿ ಒಬ್ಬರಾಗಿರುವ ಕುಮಾರಸ್ವಾಮಿ ರಾಜಕೀಯ ಅವಸಾನ ಹೊಂದಿದರು ಎಂದು ಅನೇಕರು ಭಾವಿಸಿದ್ದರು. ಆದರೆ ಆಗಿದ್ದು ಬೇರೆ.

ಬಿ.ಜೆ.ಪಿ.ಗೆ ಬಹುಮತ ಸಿಗದ ಹಿನ್ನೆಲೆಯಲ್ಲಿ ಕಿರೀಟ ಕಳೆದುಕೊಂಡ ಚಕ್ರವರ್ತಿಯಂತಾಗಿರುವ ಮತಾಂಧ ಮೋದಿ ಕುಮಾರಸ್ವಾಮಿಯಂಥವರ ಕಾಲು ಹಿಡಿಯುವ ಮಟ್ಟಕ್ಕೆ ಇಳಿಯಬೇಕಾದ ಅನಿವಾರ್ಯತೆಯನ್ನು ಇಂಡಿಯಾದ ಜನತೆ ಕರುಣಿಸಿದ್ದಾರೆ. ಇದೊಂದೇ ಕಾರಣಕ್ಕೆ ಭಸ್ಮಾಸುರ ಸಂಘಿಗಳ ಸಂಘ ಮಾಡಿದ ಕುಮಾರಸ್ವಾಮಿಯಂಥವರು ಬಚಾವಾಗಿದ್ದಾರೆ. ಏನೇ ಇರಲಿ ಒಕ್ಕಲಿಗರೆಂದರೆ ಒಂದು ಜಾತಿಯಲ್ಲ ಅದು ಕೃಷಿಕರ ಗುಂಪು ಅಂಥ ಜನಸಾಮಾನ್ಯರ ಗುಂಪಿನ ನಾಯಕ ಕುಮಾರಸ್ವಾಮಿ ಬಂಗಾರಪ್ಪನವರಂತೆ ದುರಂತ ನಾಯಕರಾಗುವ ಅಪಾಯದಿಂದ ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ. ಅವರ ಅವಕಾಶ ಅವರನ್ನು ರಾಷ್ಟ್ರೀಯ ನಾಯಕರನ್ನಾಗಿಸಬಹುದು ಆದರೆ ಅನಿವಾರ್ಯತೆಗೆ ಜಾತ್ಯಾತೀತತೆ ಹಾಗೆಂದರೆಏನು? ಯಾರು ಜಾತ್ಯಾತೀತರು? ಎಂದೆಲ್ಲಾ ಕೇಳಿದ್ದ ಕುಮಾರಸ್ವಾಮಿ ಮುಂದೆ ಮೋದಿ ಯಾರು? ಅವರ ಸಂಘ ದೇಶಪ್ರೇಮಿಯೆ? ಮೋದಿ ಇಂಥ ನಾಟಕಕಾರ ಎಂದು ನನಗೆ ಗೊತ್ತಿರಲಿಲ್ಲ ಎನ್ನುವ ದಿನಗಳು ದೂರವಿಲ್ಲ.

ಈಶ್ವರಪ್ಪ…. ಕರಾವಳಿಯ ಎರಡು ಜನ ಬಿ.ಜೆ.ಪಿ. ಅಭ್ಯರ್ಥಿಗಳು ಆ ಪಕ್ಷದ ಬಿ.ಫಾರಂ ಗಾಗಿ ನೂರಾರು ಕೋಟಿ ಹಣ (ಲಂಚ) ನೀಡಿರುವ ಗುಟ್ಟು ಈಗ ಬಹಿರಂಗವಾಗಿದೆ. ರೈತ ನಾಯಕ ಯಡಿಯೂರಪ್ಪ ಬಿ.ಜೆ.ಪಿ. ಜೊತೆ ವಿರಸ ಕಟ್ಟಿಕೊಂಡು ಬಿ.ಜೆ.ಪಿ.ಯನ್ನು ಮುಳುಗಿಸಿ ಮತ್ತೆ ಬಿ.ಜೆ.ಪಿ ಯನ್ನು ದಡ ಮುಟ್ಟಿಸಿದ್ದಾರೆ. ಸುಳ್ಳು, ಕಪಟತನ, ಮುಖವಾಡ, ನಟನೆಗೆ ಹೆಸರಾಗಿರುವ ಮೋದಿ ಪರಿವಾರ ಮೊದಲು ಯಡಿಯೂರಪ್ಪನವರನ್ನು ನೀನ್ಯಾರು? ಎಂದು ಕೇಳಿ ಹೊಡೆತ ತಿಂದಿದೆ. ಇದೇ ಯಡಿಯೂರಪ್ಪನವರ ವಿರುದ್ಧ ಸಿ.ಟಿ.ರವಿ, ಈಶ್ವರಪ್ಪನಂತಹ ಮತಿವಿಕಲರನ್ನು ಎತ್ತಿಕಟ್ಟಿದ್ದ ಸಂಘದ ನಾಯಕರು ಯಡಿಯೂರಪ್ಪನ ಜಾತಿ ಪರಿವಾರದ ವಿರುದ್ಧ ಸಮರ ಸಾರಿ ಶರಣಾಗಿದ್ದಾರೆ. ಈಶ್ವರಪ್ಪ, ಸಿ.ಟಿ.ರವಿ, ಪ್ರತಾಪಸಿಂಹರಂಥ ಮೂರನೇ ದರ್ಜೆಯ ಬಾಯಿಬಡುಕರನ್ನು ಎತ್ತಿ ಕಟ್ಟಿದ್ದ ಮಹಾಬ್ರಾಹ್ಮಣ ನಯವಂಚಕ ಸಂಘಿ ಬಿ.ಎಲ್.‌ ಸಂತೋಷ್‌ ಈಗ ಬಿಲ ಸೇರುವಂತಾಗಲು ಮೋದಿ ಸಂಘ ಕಟ್ಟಿದ ಮತಾಂಧತೆಯ ಕುಟಿಲತೆ ಕಾರಣ. ಈ ಪರಿವಾರದ ಒಳಜಗಳದಲ್ಲಿ ಬಲಿಪಶುವಾದವನು ವಿವೇಕವಿಲ್ಲದ ಸಂಘಿ ಈಶ್ವರಪ್ಪ ಬಿ.ಜೆ.ಪಿ. ಮತ್ತು ಆರೆಸ್ಸೆಸ್‌ ಪರಿವಾರ ಈಶ್ವರಪ್ಪನಂಥ ಕಳಪೆ ಹಿಂದುಳಿದವರನ್ನು ಕುಣಿಸಿ ಕೋಡಂಗಿಗಳನ್ನಾಗಿಸಿ ಮೂಲೆಗುಂಪು ಮಾಡುತ್ತಿರುವುದು ಇದೇ ಮೊದಲೇನಲ್ಲ. ಈಶ್ವರಪ್ಪ ಜೀವನವಿಡೀ ಸಂಘ, ರಾಷ್ಟ್ರೀಯತೆ, ಹಿಂದುತ್ವ ಎಂದು (ಬೊಗಳಿ) ಸಂಘದ ಪರಿಚಾರಿಕೆ ಮಾಡಿ ಈಗ ಕುರುಬರು, ಹಿಂದುಳಿದವರು

ಎನ್ನುತ್ತಿರುವುದು ಬಿ.ಜೆ.ಪಿ.ಯ ಇಂತಹ ಅವಿವೇಕಿ ಒ.ಬಿ.ಸಿ . ಗಳಿಗೆ ಪಾಠವಾಗಬೇಕು.

ಯಾಕೆಂದರೆ ಬ್ರಾಹ್ಮಣ ಮೋದಿಯಂತಹ ನಯವಂಚಕ ಆಶಾಢಭೂತಿಗಳು ಸಂಘ, ಬಿ.ಜೆ.ಪಿ.ಯಲ್ಲಿ ಹಿಂದುಳಿದವರ ಮುಖವಾಡ ಹಾಕಿ ಹಿಂದುಳಿದವರನ್ನು ಹಾಳು ಮಾಡುತ್ತವೆ. ಬಿ.ಬಿ. ಶಿವಪ್ಪ, ಈಶ್ವರಪ್ಪ ನಂತರ ಶ್ರೀನಿವಾಸ ಪೂಜಾರಿ ಹೀಗೆ ಮೂರ್ಖ ಅನಕ್ಷರಸ್ಥ ಫೇಕು ಅನುಯಾಯಿಗಳು ತಮ್ಮ ಸ್ವಾರ್ಥಕ್ಕೆ ಹಿಂದುಳಿದವರ ಹಿತ ಬಲಿಕೊಡುತ್ತಿರುತ್ತಾರೆ. ಈಶ್ವರಪ್ಪ ಪ್ರಹಸನ ಸಂಘಿ, ಬಿ.ಜೆ.ಪಿ. ನಯವಂಚನೆಯ ಬೃಹತ್‌ ಕಾದಂಬರಿಯ ಒಂದು ಪುಟವಷ್ಟೇ. ಮುಂದಿನ ಸರದಿಯಲ್ಲಿ ಅಣ್ಣಾಮಲೈ, ಕುಮಾರಸ್ವಾಮಿ, ಪ್ರತಾಪ ಸಿಂಹ, ಸಿ.ಟಿ. ರವಿ, ಹಾಲಪ್ಪ, ಕಾರಜೋಳ, ಅವನ್ಯಾವನೋ ಚಲವಾದಿ ನಾರಾಯಣ ಸ್ವಾಮಿ ಇಂಥವರೆಲ್ಲಾ ಸೇರಲಿದ್ದಾರೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ನಾಗತಿಹಳ್ಳಿ ಚಂದ್ರಶೇಖರ್ – ರಮೇಶ್ ಅರವಿಂದ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *