ದೀವರ ಹಸೆ ಚಿತ್ತಾರ ಜಗದಗಲ,ಮುಗಿಲಗಲ!

ಮಲೆನಾಡಿನ ದೀವರ ಮನೆಯ ಗೋಡೆಯಲ್ಲಿ ಕಂಗೊಳಿಸುತ್ತಿದ್ದ ಹಸೆ ಚಿತ್ತಾರವನ್ನು ವಿದೇಶಿ ನೆಲದಲ್ಲಿ ಪರಿಚಯಿಸಿದ ಕೀರ್ತಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಶಿರವಂತೆ ಗ್ರಾಮದ ಚಂದ್ರಶೇಖರ್‍ರಿಗೆ ಸಲ್ಲುತ್ತದೆ.
ಸುಮಾರು 14 ವರ್ಷಗಳಿಂದ ಹಸೆ ಚಿತ್ತಾರ ಮತ್ತು ಭತ್ತದ ತೆನೆಯ ತೋರಣ, ಮತ್ತಿತರ ಕರಕುಶಲ ಕಲೆಯಲ್ಲಿ
ತಮ್ಮನ್ನು ತೊಡಗಿಸಿಕೊಂಡು ಅದನ್ನು ಉಳಿಸಿ ಬೆಳೆಸುವ ವಿಶೇಷ ಪ್ರಯತ್ನವನ್ನು
ಇವರು ನಡೆಸುತ್ತಾ ಬಂದಿದ್ದಾರೆ.
ಚಿತ್ರಸಿರಿ ಎಂಬ ಸ್ವಯಂ ಸಂಘಟನೆಯ ಮೂಲಕ ಈಗಾಗಲೇ ಸಮಾಜದ ವಿವಿಧ ಸಂಘಟನೆಯ ಮೂಲಕ ಸಾಮಾಜಿಕ ಕಾರ್ಯಗಳಲ್ಲಿಯೂ ಕೂಡ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಹಸೆ ಚಿತ್ತಾರ ನನ್ನನ್ನು ಈ ಮಟ್ಟಕ್ಕೆ ಬೆಳೆಸಿದೆ, ಉಸಿರಿರುವವರೆಗೂ ಈ ಕಲೆಯನ್ನು ಬೆಳೆಸುವ ಜವಾಬ್ಧಾರಿ ನನ್ನದಾಗಿದೆ ಎನ್ನುತ್ತಾರೆ, ಚಂದ್ರಶೇಖರ್.
ಚಿಕ್ಕಂದಿನಿಂದಲೂ ಚಿತ್ರಕಲೆಯಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ಇವರು, ಹಳ್ಳಿ ಮನೆಗಳಲ್ಲಿ ಬಿಡಿಸುತ್ತಿದ್ದ ಹಸೆಚಿತ್ತಾರವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಸುಮಾರು 14 ವರ್ಷಗಳ ಹಿಂದೆ ನಾ. ಡಿಸೋಜಾರವರು ದೀಪಾವಳಿ ವಿಶೇಷಾಂಕದಲ್ಲಿ ನಶಿಸಿ ಹೋಗುತ್ತಿದ್ದ ಹಸೆ ಚಿತ್ತಾರದ ಬಗ್ಗೆ ಲೇಖನ ಬರೆದಿದ್ದರು.
ಆ ಲೇಖನ ಹಸೆಯನ್ನು ಕಲಿಯಲು ಪ್ರೇರಣೆ ನೀಡಿತು. ಅಲ್ಲಿಂದ ಶುರುವಾಯ್ತು ನೋಡಿ ಹಸೆ ಚಿತ್ತಾರದ ಪಯಣ. ಹಸೆ ಚಿತ್ತಾರ ಮತ್ತು ಭತ್ತದ ತೆನೆಯ ತೋರಣಗಳು ಇವೆರಡು ಪ್ರಕೃತಿ ಪ್ರೇರಿತ ಕಲೆಗಳು ದೀಪಾವಳಿಯ ದಿನದಂದು ಗದ್ದೆಯಿಂದ ಭತ್ತದ ತೆನೆಯನ್ನು ತಂದು ಮನೆಯ ಬಾಗಿಲುಗಳಿಗೆ ತೋರಣವಾಗಿ ಅಲಂಕರಿಸಲಾಗುತಿತ್ತು. ತೋರಣದ ಹಣಿಕೆ ಅದರ ಮಾದರಿ ಹಾಗೂ ಸೂಕ್ಷ್ಮತೆ ಇವರನ್ನು ಆಕರ್ಷಿಸಿತು. ಆಧುನಿಕರಣದ ಕಾರಣಕ್ಕಾಗಿ ಗ್ರಾಮೀಣ ಹೆಣ್ಣುಮಕ್ಕಳು ಈ ಕಲೆಯನ್ನು ಮರೆಯಲಾರಂಭಿಸಿದರು. ಇದು ಚಂದ್ರಣ್ಣನವರನ್ನು ಆತಂಕಗೊಳಿಸಿತು.
ಈ ಕಾರಣಕ್ಕಾಗಿ ಭತ್ತದ ತೆನೆಯ ತೋರಣ ಮತ್ತು ವಿವಿಧ ಮಾದರಿಯ ಕಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಭತ್ತದ ಈ ಕಲೆಗೆ ಕೈ ಹಾಕಿದರು. ನಿರ್ಲಕ್ಷಿತ ಹಾಗೂ ಸ್ತ್ರೀ ಪ್ರಧಾನಿತ ಈ ಕುಶಲಕಲೆಗೆ ಚಂದ್ರಣ್ಣ ಯಾವಾಗ ಅಂಟಿಕೊಂಡರೊ ಜನ ಅವರನ್ನು ಜರಿದರು. ಆದರೆ ಚಂದ್ರಣ್ಣ ಬಗ್ಗಲಿಲ್ಲ. ಬಾತುಕೋಳಿ, ಗುಬ್ಬಿಗಳ ಮನೆಯ ಚಿತ್ತಾರ ತೋರಣ ಮುಂತಾದವುಗಳು ಇಲ್ಲಿ ಮೂಡಿದವು.
ಟೀಕಿಸಿದ ಜನರೇ ಬೆರಗಾದರು. ಭಲೆ ಭಲೆ ಎಂದರು. ದೇಶದಾದ್ಯಂತ ಈ ಚಿತ್ತಾರಗಳು ಗೋಡೆಯನ್ನು ಅಲಂಕರಿಸಿದವು. ಚಂದ್ರಣ್ಣ ಬೆಳೆದರು, ಅಷ್ಟೇ ಅಲ್ಲ ಕಲೆಯನ್ನು ಬೆಳೆಸಿದರು. ಒಂದು ಕಾಲದಲ್ಲಿ ಅತ್ಯಂತ ಸಾಂಪ್ರದಾಯಿಕ ಕಲೆಯಾಗಿದ್ದ ಹಸೆ ಚಿತ್ತಾರವು ಆಧುನಿಕ ಸಂದರ್ಭದಲ್ಲಿ ನಶಿಸುವ ಆತಂಕವನ್ನು ಎದುರಿಸತೊಡಗಿತು.
ಮಲೆನಾಡಿನ ದಟ್ಟ ಸಾಮೂದಾಯಿಕ ಈ ಕಲಾಪರಂಪರೆಗೆ ಒದಗಿದ ಈ ಆತಂಕ ಆ ಸಮುದಾಯದ ಎಲ್ಲರನ್ನು ಬೆಚ್ಚಿ ಬೀಳಿಸಿತು. ಇದೇ ಸಂದರ್ಭದಲ್ಲಿ ಹಸೆ ಚಿತ್ತಾರಕ್ಕೆ ಕಾಲಿಟ್ಟ ಚಂದ್ರಣ್ಣ ಅದರ ಮೂಲಾಂಶಗಳನ್ನು ಉಳಿಸಿಕೊಂಡು ಆಧುನಿಕ ಸಂದರ್ಭದಲ್ಲಿ ಹೊಸಬಗೆಯ ವಿನ್ಯಾಸದ ಮೂಲಕ ಉಳಿಸಿ ಬೆಳೆಸುವ ವಿಶೇಷ ಪ್ರಯತ್ನವನ್ನು ಮಾಡಿದರು. ಗೋಡೆಯ ಮೇಲೆ
ಬರೆಯುತ್ತಿದ್ದ ಹಸೆ ಚಿತ್ತಾರವನ್ನು ಮೊದಲ ಬಾರಿಗೆ ಬಟ್ಟೆಯ ಮೇಲೆ ತರಲಾಯಿತು. ಪ್ರಾಕೃತಿಕ ಬಣ್ಣ ಹಾಗೂ ರಾಸಾಯನಿಕ ಬಣ್ಣಗಳನ್ನು ಉಪಯೋಗಿಸಿ ಹಸೆ ಚಿತ್ತಾರವನ್ನು ಬಟ್ಟೆ, ಗಾಜು, ಬಿದಿರಿನ ತಡಿಕೆ, ಈಚಲು ಚಾಪೆಯ ಮೇಲೆ ಚಿತ್ರಿಸಿದರು. ಹೊಸಹೊಸ ಬಗೆಯ ಪ್ರಯತ್ನವನ್ನು ಮಾಡಿದರು.ವಿದ್ವಾಂಸರನ್ನು, ಕಲಾವಿದರನ್ನು ಕರೆದು ಚರ್ಚಿಸಿ ತಮ್ಮ ಪ್ರಯೋಗಗಳನ್ನು ಪ್ರದರ್ಶಿಸಿದರು. ತಪ್ಪಾದಲ್ಲಿ ತಿದ್ದಿಕೊಂಡರು.
ವಿರೋಧವನ್ನು ತಾಳಿಕೊಂಡರು. ಸೃಜನಶೀಲತೆಯ ಬೆರಗಿನಲ್ಲಿ ಹಸೆ ಚಿತ್ತಾರದ ಹೊಸ ಸಾಧ್ಯತೆಗಳತ್ತ ಮುಖ ಮಾಡಿದರು. ಈ ಚಿತ್ತಾರಗಳು ನನ್ನ ಆವಿಷ್ಕಾರವಲ್ಲ. ನಮ್ಮ ಅವ್ವ -ಮುದೆವ್ವರಂತಹವರ ಸಾವಿರಾರು ತಾಯಂದಿರ ಸತತ ಕೂತೂಹಲ ಮತ್ತು ತಾಳ್ಮೆಯ ಪ್ರತೀಕ. ಅವುಗಳನ್ನು ನಾನು ಮುಂದುವರೆಸಿಕೊಂಡು ಹೋಗುತ್ತೇನೆ ಅಷ್ಟೆ ಎಂದು ವಿನಮ್ರವಾಗಿ ಹೇಳುತ್ತಾರೆ.
ಈ ಸೃಜನಶೀಲತೆಯ ರೂಪವೇ 416 ಮೂಲೆಯ ಆರತಿ ಚಿತ್ತಾರದ ಆವಿಷ್ಕಾರ. ಇತ್ತೀಚೆಗೆ ಹೊಸ ಪ್ರಯೋಗವಾಗಿ ಮರದ ತುಂಡುಗಳನ್ನು ಕತ್ತರಿಸಿ ಹಸೆಯ ರೀತಿಯಲ್ಲಿ ರಚಿಸಿರುವುದು. ಸಾಮಾನ್ಯವಾಗಿ 4 ಅಡಿ ಉದ್ದ ಮಾತ್ರ ನೇಯುತ್ತಿದ್ದ ಭತ್ತದ ತೆನೆಯ ತೋರಣವನ್ನು 1111 ಅಡಿ ರಚಿಸಿ ಸೈ ಅನ್ನಿಸಿಕೊಂಡರು. ಇದರಲ್ಲಿ ಅರಳೀ ಎಲೆ, ವಿಸ್ತರಿಸಿದ ಬಾಳೆ ಎಲೆ ಮತ್ತು ವಿವಿಧ ಆಕಾರ ನೀಡಿ ಹೊಸ ಬಗೆಯಲ್ಲಿ ವಿನ್ಯಾಸಗೊಳಿಸಿದರು.
ಈ ಮೂಲಕ ಜನರಲ್ಲಿ ಕಲೆಯ ಬಗ್ಗೆ ಗೌರವ ಹಾಗೂ ಕುತೂಹಲ ಬರುವಂತೆ ನೋಡಿಕೊಳ್ಳುವ ಪ್ರಯತ್ನ ಮಾಡಿದರು. ಇವರ ಸಾಹಸ ಇಷ್ಟಕ್ಕೆ ಮುಗಿಯಲಿಲ್ಲ. ಈ ಸಾಂಪ್ರದಾಯಿಕ ಕಲೆಗಳನ್ನು ಜನರಿಗೆ ತಲುಪಿಸಲು ಹೊರ ರಾಜ್ಯಗಳಾದ ಕಲ್ಕತ್ತಾ, ಮಧುರೈ ಅಷ್ಟೇ ಅಲ್ಲದೆ ಹೊರ ದೇಶಗಳಾದ ಜಪಾನ್ ದುಬೈಗಳಲ್ಲಿ ಪ್ರದರ್ಶನ ನೀಡಲಾಯಿತು. ಇದಕ್ಕೆಲ್ಲಾ ಕೆಲವು ಹಿರಿಯರ ಪ್ರೋತ್ಸಾಹ ಮತ್ತು ಸಹಕಾರ ನೀಡಿದ್ದನ್ನು ಚಂದ್ರಣ್ಣ ನೆನೆಪುಮಾಡಿಕೊಳ್ಳುತ್ತಾರೆ.
ಆರ್ಥಿಕವಾಗಿ ಅಷ್ಟೇನೂ ಬಲವಿಲ್ಲದ ಚಂದ್ರಣ್ಣ ಅವರ ಕಣ್ಣುಗಳಲ್ಲಿ ಹಸೆ ಚಿತ್ತಾರದ ಬಗ್ಗೆ ಸಾವಿರ ಕನಸುಗಳಿವೆ. ಜಾಗತಿಕ ಮಟ್ಟದಲ್ಲಿ ಗುರುತು ಮೂಡಿಸುವಂತಹ ‘ಹಸೆ ಹಳ್ಳಿ’ ಎಂಬ ಅದ್ಭುತ ಯೋಜನೆಯನ್ನು ರೂಪಿಸಲಾಗಿದೆ. ಸುಮಾರು 12 ಎಕರೆ ಪ್ರದೇಶದಲ್ಲಿ ಹಸೆ ಚಿತ್ತಾರದ ಮನೆಗಳು, ಕೃತಕ ಗುಡ್ಡದ ಮನೆ, ಗಿಡಮೂಲಿಕೆಗಳ ತೋಟ, ಸಾವಯವ ಕೃಷಿ ಮುಂತಾದ ಹಳ್ಳಿಯ ವಾತಾವರಣವನ್ನು ಸೃಷ್ಠಿಸಲಾಗುವುದು. ಅಂದಾಜು 8 ರಿಂದ 10 ಕೋಟಿ ರೂ. ಯೋಜನೆ ಇದಾಗಿದೆ. ಕನಸುಗಳಂತೂ ಇದೆ. ಚಂದ್ರಣ್ಣ ಇದನ್ನು ಸಾಧಿಸಬಹುದೆಂದು ನಮಗೂ ಅನ್ನಿಸುತ್ತದೆ. ದೀವರ ಜನಾಂಗದ ಕಲೆ ಎಂದೆ ಕರೆಸಿಕೊಳ್ಳುವ ಹಸೆ ಚಿತ್ತಾರ ಹಿಂದಿನಿಂದಲೂ ಅವಜ್ಞೆಗೊಳಗಾಗುತ್ತಾ ಬಂದಿದೆ. ವಿಶಾಲ ಉದ್ಯೋಗವಾಗಿ ಬೆಳೆಯುವ ಸಾಧ್ಯತೆಯನ್ನು ಹೊಂದಿರುವ ಹಸೆ ಚಿತ್ತಾರಕ್ಕೆ ಸರ್ಕಾರದ ನೆರವಿನ ಅಗತ್ಯವಿದೆ. ಸರ್ಕಾರ ಉತ್ತಮ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟು, ಕಲಾವಿದರಿಗೆ ಪ್ರೋತ್ಸಾಹ ನೀಡಬೇಕಾಗಿದೆ. ಈಗಾಗಲೇ ಚಂದ್ರಣ್ಣ ಚಿತ್ರಸಿರಿ ಸಂಘಟನೆಯಿಂದ ಸಾಕಷ್ಟು ಜನರಿಗೆ ತರಬೇತಿ ನೀಡಿ ಉದ್ಯೋಗ ಸೃಷ್ಠಿಸಿದ್ದಾರೆ. ಕಲೆಯ ಜೊತೆಗೆ ಸಂಸ್ಕøತಿಯನ್ನು ಉಳಿಸುವ ಪ್ರಯತ್ನ ಮಾಡುತ್ತಿದ್ದಾರೆ. (ಮೋ.ಚ.ಶಿವಮೊಗ್ಗ) ಚಿತ್ರಸಿರಿ ಬಂದ್ರಶೇಖರ್ ರ ಸಂಪರ್ಕ ಸಂಖ್ಯೆ-9449698979

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

forest land issue… ಅರಣ್ಯ ಭೂಮಿ ಹಕ್ಕು: ಅಧಿಕಾರಿಗಳ ನಿರ್ಲಕ್ಷ, ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲು ಎಚ್ಚರಿಕೆ!

ಸಿದ್ದಾಪುರ ತಾಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅರಣ್ಯ ಭೂಮಿ ಸಾಗುವಳಿ ಹಕ್ಕು ಅರ್ಜಿ ಪಡೆಯುವ ಪ್ರಕ್ರೀಯೆ ನಾಮಕಾವಾಸ್ಥೆ ನಡೆದಿದ್ದು ಇದಕ್ಕೆ ೧೫ ದಿವಸಗಳ...

ಮುಂಗಾರು ಪೂರ್ವ ಬರ ಸಿಡಿಲು….. ಕೋಟ್ಯಾಂತರ ಹಾನಿ! ಎಚ್ಚೆತ್ತ ಜಿಲ್ಲಾಡಳಿತ…

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸೇರಿದಂತೆ ಮಲೆನಾಡಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಅಪಾರ ಹಾನಿ ಮಾಡಿದೆ. ಒಣ ಬಿಸಿಲಿನಿಂದ ಕಂಗೆಟ್ಟ ಜನಜೀವನಕ್ಕೆ ಮಳೆ...

ರಮಾನಂದ ನಾಯಕ ನಿಧನ ಗಣ್ಯರ ಕಣ್ಣೀರು, ನಾಳೆ ಅಂತ್ಯಕ್ರೀಯೆ

ಉತ್ತರ ಕನ್ನಡ ಜಿಲ್ಲೆಯ ಹಿರಿಯ ರಾಜಕಾರಣಿ ಮೊದಲ ಜಿಲ್ಲಾ ಪರಿಷತ್‌ ಅಧ್ಯಕ್ಷ ರಮಾನಂದ ನಾಯಕ ಇಂದು ಅಸ್ತಂಗತರಾದರು. ಅಂಕೋಲಾ ತಾಲೂಕಿನ ಹಿಚ್ಕಡದ ಪ್ರತಿಷ್ಠಿತ ಕುಟುಂಬದ...

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಈ ಆದೇಶ ಹೊರಡಿಸಿದೆ. ವಿಧಾನ ಸೌಧ ಬೆಂಗಳೂರು: ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಜೂನ್ 3...

Recommended For You

About the Author: Kanneshwar Naik

1 Comment

Leave a Reply

Your email address will not be published. Required fields are marked *