ಭೀಮ ಗಧೆಗೆ ಮೂರು ಚೂರಾದ ಬಿ.ಜೆ.ಪಿ.! -part-01-

ಜಾತಿ,ಸಂಘ,ಪರಿವಾರಗಳ ಬೆಂಬಲದಿಂದ ಬಿ.ಜೆ.ಪಿ.ಯಲ್ಲಿ ಪ್ರಶ್ನಾತೀತ ನಾಯಕರೆಂಬಂತೆ ಪ್ರತಿಷ್ಠಾಪಿತರಾಗಿರುವ ಬಿ.ಜೆ.ಪಿ.ಯ ಹಿರಿಯ ನಾಯಕ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ತವರು ನೆಲ ಉತ್ತರ ಕನ್ನಡದಲ್ಲಿ ಹೆಜ್ಜೆ ಹೆಜ್ಜೆಗೂ ವಿರೋಧ ವ್ಯಕ್ತವಾಗುತ್ತಿದೆ. ಯಾವ ಶ್ರಮವೂ ಇಲ್ಲದೆ ಎ.ಬಿ.ವಿ.ಪಿ.ಯಿಂದ ಬಿ.ಜೆ.ಪಿ.ಗೆ ಎಂಟ್ರಿ ಹೊಡೆದಿದ್ದ ಕಾಗೇರಿ ವಿಶ್ವೇಶ್ವರ ಹೆಗಡೆ ಕಾಗ್ರೆಸ್‌ ವಿಫಲತೆ, ಕಾಂಗ್ರೆಸ್‌ ನ ವೈದಿಕ ಮನುವಾದಿಗಳ ಅಂದರ್‌ ಕಿ ಮಚ್ಚುವಾಳ್ಳಿತನಗಳಿಂದ ಅನಾಯಾಸವಾಗಿ ಆಯ್ಕೆಯಾಗಿದ್ದು ಬರೀ ಒಂದೆರಡು ಬಾರಿಯಲ್ಲ… ಅನಾಮತ್ತು ೬ ಸಾರಿ,

ಆನಂತರ ಏಳನೇ ಬಾರಿ ಭೀಮಣ್ಣರೆದುರು ರೋಚಕ ಸೋಲಿಗೆ ಶರಣಾದ ಕಾಗೇರಿ ಮುಸ್ಲಿಂ ವಿರೋಧದಿಂದಲೇ ಆಯ್ಕೆಯಾಗುತಿದ್ದ ಅನಂತಕುಮಾರ ಹೆಗಡೆಯವರನ್ನು ಹಿಂದೆ ಸರಿಸಿ ಸಂಸದರಾಗಿಬಿಟ್ಟರು. ಹೀಗೆ ಸಂಸದರಾಗಲು ಸಜ್ಜನ ಕಾಗೇರಿ ಬಳಸಿದ್ದು ನೂರಾರು ಕೋಟಿ ಎಂದರೆ… ಬಿ.ಜೆ.ಪಿ., ಸಂಘ, ರಾಷ್ಟ್ರೀಯತೆಯ ಸೋಗಿನಲ್ಲಿ ಕಾಗೇರಿ ಗಳಿಸಿದ ಸಂಪತ್ತು ಎಷ್ಟಿರಬಹುದು ಎಂಬುದೂ ಊಹೆಗೂ ನಿಲುಕದ ವಿಚಾರ. ಹೀಗೆ ರಾಷ್ಟ್ರೀಯತೆ, ಹಿಂದುತ್ವ, ಪ್ರಾಮಾಣಿಕತೆಯ ಸೋಗಿನಲ್ಲಿ ಸಂಘಿಗಳು ಗಳಿಸಿರುವ ಹಣ ಇಡಿಗೆ ಸಿಗುವಂತಾದರೆ ಅದೂ ಭಾರತದ ಬಜೆಟ್ಟನ್ನೂ ಮೀರಿಸಬಹುದು ಆದರೆ ಸಂಘದ ನಯವಂಚಕ ನಂ೧ ಫೇಕು ಮತ್ತವರ ದುಷ್ಟಕೂಟ ಸಿ.ಬಿ.ಐ. ಇಡಿಗಳನ್ನು ದುಷ್ಟಸಂಘಿಗಳ ವಿರುದ್ಧ ಬಳಸಲ್ಲ!

ಇದು ಭಾರತದ ದುರಂತ… ಇಲ್ಲಿ ಮಹಾವಂಚಕ ದೇಶಪ್ರೇಮ, ಹಿಂದುತ್ವ, ರಾಷ್ಟ್ರೀಯತೆಯ ಸೋಗಿನಲ್ಲಿ ಹಗಲುದರೋಡೆ ಮಾಡಬಹುದು! ಸೇನೆ- ಸೈನಿಕರ ಪರವಾದ ಮೊಸಳೆಕಣ್ಣೀರಿನಿಂದ ಚುನಾವಣೆ ಗೆಲ್ಲಬಹುದು!!!! ಈ ವಿಶ್ವ ದುರಂತದೆದುರು ಉತ್ತರ ಕನ್ನಡ ಬಿ.ಜೆ.ಪಿ.ಯಲ್ಲಿ ಕ್ಷೋಭೆ ಭುಗಿಲೆದ್ದಿದೆ. ಕಾಗೇರಿಯವರ ಯಜಮಾನಿಕೆ, ಪಾಳೇಗಾರಿಕೆ, ವಿರೋಧಿಸುವ ಕಾರವಾರದ ರೂಪಾಲಿ ನಾಯ್ಕ ಕಾಗೇರಿಯ ಬ್ರಾಮ್ಹಣ ಲಾಭಿ ವಿರೋಧಿಸಿ ಯಡಿಯೂರಪ್ಪ ಕುಟುಂಬ ಬಳಸಿ ಬಿ.ಜೆ.ಪಿ. ರಾಜ್ಯ ಉಪಾಧ್ಯಕ್ಷೆಯಾಗಿದ್ದಾರೆ. ಸಿದ್ಧಾಪುರದ ಕೆ.ಜಿ.ನಾಯ್ಕ ಕಾಗೇರಿವರು ಸಚಿವ-ಸಭಾಪತಿ ಆಗಿದ್ದಾಗಲೇ ಅವರ ವಿರುದ್ಧ ತೊಡೆ ತಟ್ಟಿ ಸಿದ್ಧಾಪುರದಲ್ಲಿ ನಿಮ್ಮ ಮನುವಾದಿ ಧೂರ್ತತನಕ್ಕೆ ಅವಕಾಶವಿಲ್ಲ ಎಂದು ಸೆಡ್ಡು ಹೊಡೆದಿದ್ದಾರೆ.

ಈ ಕಾಗೇರಿ ವಿರೋಧಿ ಬಿ.ಜೆ.ಪಿ. ಬಣವನ್ನು ಪಳಗಿಸುತ್ತಿರುವ ಶಾಸಕ ಭೀಮಣ್ಣ ನಾಯ್ಕ ಪ್ರತಿನಿತ್ಯ ಅವರ ವಿಶ್ವಾಸ ಗಳಿಸುತ್ತಾ ಬಿ.ಜೆ.ಪಿ. ಕೋಟೆಯ ಕಲ್ಲು ಕೀಳುತಿದ್ದಾರೆ… ಈ ರಾಜಕೀಯ ಮೇಲಾಟಗಳ ನಡುವೆ ಬಿ.ಜೆ.ಪಿ.ಯಲ್ಲಿ ಆಂತರಿಕ ಕಲಹ ಪ್ರಾರಂಭವಾಗಿ ಸಂಸದ ಕಾಗೇರಿಯ ಹಿಂಬಾಲಕರೆಲ್ಲಾ ಒಬ್ಬೊಬ್ಬರಾಗಿ ಕೈ ವಶವಾಗುವ ಲಕ್ಷಣ ನಿಚ್ಚಳವಾಗುತ್ತಿದೆ ಎನ್ನಲಾಗುತ್ತಿದೆ.

ಕಾಗೇರಿ ಶಾಸಕ, ಸಚಿವ, ಸಂಸದರಾಗಿದ್ದಾಗಲೆಲ್ಲಾ ಎಲ್ಲರಿಗೂ ಭಾವನಾಗಿ ಮಾತನಾಡಿಸುತ್ತಾ ಎಲ್ಲರ ಮೂಗಿಗೂ ತುಪ್ಪ ಸವರುತಿದ್ದರು. ಈ ಸಂಘದ ಕುಟಿಲತೆ ಅರ್ಥಮಾಡಿಕೊಳ್ಳುತ್ತಿರುವ ಬಿ.ಜೆ.ಪಿ.ಯ ಅನೇಕರು ಮೂಗಿಗೆ ತುಪ್ಪ ಸವರುವವರಿಗಿಂತ ಮಾಂಸದೂಟ ಬಡಿಸುವವರೇ ಲೇಸು ಎನ್ನುತಿದ್ದಾರೆ ಈಗ.! (conti…….)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಅಕ್ಷತಾ ಸಾವು… ಆಶಯ ಮಾತಿನ ನೋವು……

ಸಿದ್ದಾಪುರದಲ್ಲಿ ಶೋಕ…. rcb ಕಲ್ತುಳಿತದ ಶವ ಸಿದ್ಧಾಪುರಕ್ಕೆ……. ಅಕ್ಷತಾ ಅಂಬಳ್ಳಿ ಅಂತ್ಯ ಕ್ರೀಯೆಗೆ ತಯ್ಯಾರಿ breaking…… rcb ಕಲ್ತುಳಿತದ ಪ್ರತ್ಯಕ್ಷ ಅನುಭವ…… ಆಶಯ ಅಂಬಳ್ಳಿ...

ಕಾಗೇರಿ ವ್ಯಂಗ್ಯಕ್ಕೆ ಕಾಂಗ್ರೆಸ್‌ ಉತ್ತರ……! ಭೀಮ ಗಧೆಗೆ ಮೂರು ಚೂರಾದ ಬಿ.ಜೆ.ಪಿ.! -part-04-

ಬಿ.ಜೆ.ಪಿ. ಮಟ್ಟಿಗೆ ಉತ್ತರ ಕನ್ನಡದ ವರಿಷ್ಠರಾದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾಧ್ಯಮಗೋಷ್ಠಿ ನಡೆಸುವುದರಲ್ಲಿ ಮಾಧ್ಯಮಗಳಿಗೆ ಬೇಕಾದಷ್ಟೇ ಚುಟುಕಾಗಿ ಉತ್ತರಿಸುವುದರಲ್ಲಿ ನಿ಼ಷ್ಣಾತರು. ಆಗಾಗ ಮಾಧ್ಯಮಗೋಷ್ಠಿ...

ನಾಯಕರಿಗೆ ಇಂಬು, ಕಾರ್ಯಕರ್ತರಿಗೆ ಚೊಂಬು!!! ಭೀಮ ಗಧೆಗೆ ಮೂರು ಚೂರಾದ ಬಿ.ಜೆ.ಪಿ.! -part-03-

ಬಿ.ಜೆ.ಪಿ. ಸೋಲಿಸಲು ಸಾಧ್ಯವಿಲ್ಲ, ಕಾಂಗ್ರೆಸ್‌ ಗೆ ಅಧಿಕಾರವಿಲ್ಲದೆ ಅಲ್ಲಿಯ ಕಾರ್ಯಕರ್ತರು ಅನಿವಾರ್ಯವಾಗಿ ಬಿ.ಜೆ.ಪಿ. ಸೇರುತ್ತಾರೆ. ಹೀಗಾದರೆ ನೀವೆಲ್ಲಾ ಕಾಂಗ್ರೆಸ್‌ ನಲ್ಲಿದ್ದು ಏನು ಪ್ರಯೋಜನ? ಎಂದು...

ಭೀಮ ಗಧೆಗೆ ಮೂರು ಚೂರಾದ ಬಿ.ಜೆ.ಪಿ.! part-02- ವೀಶ್ವೇಶ್ವರ ಹೆಗಡೆಗೆ ಮೃಧುವಾಗೇ ತಿವಿಯುತ್ತಿರುವ ಗ್ಯಾರಂಟಿಯಣ್ಣ!

ಮೇಲ್ವರ್ಗದ ಓಲೈಕೆ, ವೈದಿಕ ತುಷ್ಟೀಕರಣಗಳ ಬಿ.ಜೆ.ಪಿ. ಅನಿವಾರ್ಯವಾದಾಗ, ಮೇಲ್ನೋಟಕ್ಕೆ ಪ್ರದರ್ಶನಕ್ಕೆ ಅಹಿಂದ್‌ ಗಳನ್ನು ಬಳಸುವುದನ್ನು ಬಿಟ್ಟರೆ ಅದು ತನ್ನ ಅಜೆಂಡಾ ಉಳ್ಳವರ ಪರ ನೀತಿಯನ್ನು...

don,t do it- ಮಗುವಿನೊಂದಿಗೆ ಪೋಷಕರ ಅಪಾಯಕಾರಿ ಸೆಲ್ಫಿ; ಸ್ಮಾರ್ಟ್ ಸಿಸಿಟಿವಿಯಿಂದ ತಪ್ಪಿದ ಸಂಭಾವ್ಯ ದುರಂತ!

ಗೋಕರ್ಣ: ಪೊಲೀಸರ ಈ ಮುನ್ನೆಚ್ಚರಿಕಾ ಕ್ರಮ ಗೋಕರ್ಣದಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ. ಪೊಲೀಸರು ತಮ್ಮನ್ನು ಕ್ಯಾಮರಾ ಮೂಲಕ ನೋಡುತ್ತಿದ್ದಾರೆ ಎಂದು ದಂಪತಿಗೆ ತಿಳಿದಿರಲಿಲ್ಲ. ಮಗುವಿನೊಂದಿಗೆ ಪೋಷಕರ...

Latest Posts

ಅಕ್ಷತಾ ಸಾವು… ಆಶಯ ಮಾತಿನ ನೋವು……

ಸಿದ್ದಾಪುರದಲ್ಲಿ ಶೋಕ…. rcb ಕಲ್ತುಳಿತದ ಶವ ಸಿದ್ಧಾಪುರಕ್ಕೆ……. ಅಕ್ಷತಾ ಅಂಬಳ್ಳಿ ಅಂತ್ಯ ಕ್ರೀಯೆಗೆ ತಯ್ಯಾರಿ breaking…… rcb ಕಲ್ತುಳಿತದ ಪ್ರತ್ಯಕ್ಷ ಅನುಭವ…… ಆಶಯ ಅಂಬಳ್ಳಿ ಮಾತು….. ಬೆoಗಳೂರಿನ ಚಿನ್ನಸ್ವಾಮಿ ಕ್ರೀಡಾoಗಣ ದಲ್ಲಿ ಕಲ್ತುಳಿತಕ್ಕೆ ಒಳಗಾಗಿ ಜೀವತೆತ್ತ ಅಕ್ಷತಾ ಪೈ ಶವ ಸಿದ್ಧಾಪುರಕ್ಕೆ ಆಗಮಿಸಿದೆ. ಮೃತ ಅಕ್ಷತಾ ಪತಿ ಆಶಯ ನಿನ್ನೆ ಅಲ್ಲಿದ್ದರು. ನಿನ್ನೆಯ ಘಟನೆಯ...

Recommended For You

About the Author: Kanneshwar Naik

2 Comments

Leave a Reply

Your email address will not be published. Required fields are marked *