ಎರಡು ಪ್ರತ್ಯೇಕ ಚೆಕ್ ಬೌನ್ಸ್ ಪ್ರಕರಣ ಗಳಲ್ಲಿ ಆರೋಪಿಗಳಿಗೆ ದಂಡ ಮತ್ತು ಶಿಕ್ಷೆ ವಿಧಿಸಿದ ಸಿದ್ದಾಪುರ ಜೆ.ಎಂ.ಎಫ್.ಸಿ ಕೋರ್ಟ್

ಸಿದ್ದಾಪುರ ಜೆ.ಎಂ.ಎಫ್.ಸಿ.ಕೋರ್ಟನಲ್ಲಿ ಶ್ರೀ ವಿನಾಯಕ ಸೌಹಾರ್ದ ಸಹಕಾರಿ ಯಿಂದ ದಾಖಲಿಸಲ್ಪಟ್ಟ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಆರೋಪಿಗಳಾದ ಸಂತೋಷ ಹುಚ್ಚಪ್ಪ ನಾಯ್ಕ ಮತ್ತು ಲೋಕೇಶ್ ಬಂಗಾರ್ಯ ನಾಯ್ಕ ರಿಗೆ ದಂಡ ಮತ್ತು ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶ ನೀಡಿದೆ.


ಪ್ರಕರಣದ ಹಿನ್ನೆಲೆ.
ಸಿದ್ದಾಪುರದ ಶ್ರೀ ವಿನಾಯಕ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ. ನ ಸಿದ್ದಾಪುರ ಶಾಖೆಯಲ್ಲಿ ಅಕ್ಟೋಬರ್ 2023 ರಲ್ಲಿ ಲೋಕೇಶ್ ಬಂಗಾರ್ಯ ನಾಯ್ಕ ತೆಂಗಿನಮಕ್ಕಿ ಮಾವಿನ ಗುಂಡಿ . ಸಂತೋಷ ಹುಚ್ಚಪ್ಪ ನಾಯ್ಕ ಜೀಕಿನಮಡಕಿ ಮಾವಿನಗುಂಡಿ ಮತ್ತು ಇತರರ ಜಾಮೀನು ನೀಡಿ ಹಿಟಾಚಿ ಖರೀದಿಸಲು ರೂಂ.45,00,000/- ಸಾಲ ಪಡೆದುಕೊಂಡು ಸಾಲದಾತ ಸಂಸ್ಥೆಗೆ ಮಾಹಿತಿ ನೀಡದೇ ಹಿಟಾಚಿ ಯನ್ನು ಗೌಪ್ಯವಾಗಿ ಮಾರಾಟ ಮಾಡಿ, ಸಾಲದ ಹಣ ಪಾವತಿಸದೇ ದುರುಪಯೋಗ ಮಾಡಿಕೊಂಡು ಸಂಸ್ಥೆಗೆ ಮೋಸ ಮಾಡಿದ್ದರು. ಸಂಸ್ಥೆಯಿಂದ ಸಾಲ ವಸೂಲಿಗೆ ಮುಂದಾದಾಗ ಇವರ ದುಷ್ಕೃತ್ಯ ಬೆಳಕಿಗೆ ಬಂದಿದೆ.


ಇವರ ವಿರುದ್ಧ ವಂಚನೆಯ ಪ್ರಕರಣ ದಾಖಲಿಸಲು ಮುಂದಾದಾಗ ಆರೋಪಿಗಳಾದ ಸಾಲಗಾರ ಮತ್ತು ಜಾಮೀನುದಾರು ತಾವು ಹಿಟಾಚಿಯನ್ನು ಮಹಾರಾಷ್ಟ್ರ ವ್ಯಕ್ತಿಗಳ ಮೂಲಕ ದುಬೈಗೆ ಮಾರಾಟ ಮಾಡಿರುವುದಾಗಿಯೂ ತಮ್ಮ ವಿರುದ್ಧ ಪ್ರಕರಣ ದಾಖಲಿಸ ಬಾರದಾಗಿಯೂ ಮನವಿ ಮಾಡಿಕೊಂಡು ಪೂರ್ತಿ ಸಾಲ ಮರುಪಾವ್ತಿ ಮಾಡುವುದಾಗಿ ರಾಜಿ ಒಪ್ಪಂದ ಮಾಡಿಕೊಂಡಿದ್ದರು. ರಾಜಿ ಒಪ್ಪಂದದಂತೆ ಲೋಕೇಶ ಬಂಗಾರ್ಯ ನಾಯ್ಕ 14,96,000/-ಮತ್ತು ಸಂತೋಷ ಹುಚ್ಚಪ್ಪ ನಾಯ್ಕ ರೂ.31,00,000/- ಮೊತ್ತ ಗಳಿಗೆ ತಮ್ಮ ತಮ್ಮ ಬ್ಯಾಂಕ್ ಖಾತೆಗಳ ಚೆಕ್ ಗಳನ್ನ ಬರೆದು ಸಹಿ ಮಾಡಿ ಕೊಟ್ಟಿದ್ದರು.


ಸಹಕಾರಿ ಇವರನ್ನು ನಂಬಿ ಚೆಕ್ ಕಲೆಕ್ಷನ್ ಗೆ ಹಾಕಲಾಗಿ, ಎರಡೂ ಚೆಕ್ ಗಳು ಅಪನಗದೀಕರಣ ಗೊಂಡು ಪರತ್ ಬಂದಿರುತ್ತವೆ. ತದನಂತರ ಸಹಕಾರಿಯ ಪ್ರಧಾನ ವ್ಯವಸ್ಥಾಪಕ ಶ್ರೀಧರ್ ಎಂ ಹೆಗಡೆ ಇವರು ಲೋಕೇಶ್ ಮತ್ತು ಸಂತೋಷ ಇಬ್ಬರ ವಿರುದ್ದ ಪ್ರತ್ಯೇಕ ಚೆಕ್ ಬೌನ್ಸ್ ಪ್ರಕರಣ ಗಳನ್ನು ದಾಖಲಿಸಿ, ದಾಖಲೆಗಳನ್ನು ಸಲ್ಲಿಸಿ,ಸಾಕ್ಷಿ, ಹೇಳಿಕೆ ನೀಡಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ .ಉಮೇಶ ಎಂ ಪಿ ಆರೋಪಿಗಳ ಅಪರಾಧ ಸಾಬೀತಾಗಿರುವ ಕಾರಣ ದಿನಾಂಕ 04/10/2025ರಂದು ಶಿಕ್ಷೆಯ ಆದೇಶ ಹೊರಡಿಸಿದ್ದಾರೆ.
ಲೋಕೇಶ್ ಬಂಗಾರ್ಯ ನಾಯ್ಕ ರಿಗೆ 1ವರ್ಷ ಜೈಲು ಶಿಕ್ಷೆ ಮತ್ತು ರೂ15,16,000/- ದೂರುದಾರ ಸಹಕಾರಿಗೆ ಪರಿಹಾರ, 5,000/-ಸರಕಾರಕ್ಕೆ ದಂಡ ಪಾವತಿಸ ತಕ್ಕದ್ದು ತಪ್ಪಿದಲ್ಲಿ, 3 ತಿಂಗಳು ಜೈಲು.
ಸಂತೋಷ್ ಹುಚ್ಚಪ್ಪ ನಾಯ್ಕ ರಿಗೆ 1ವರ್ಷ ಜೈಲು ಶಿಕ್ಷೆ ಮತ್ತು ರೂ31,20,000/- ಸಹಕಾರಿಗೆ ಪರಿಹಾರ, 5,000/-ಸರಕಾರಕ್ಕೆ ದಂಡ ಪಾವತಿಸ ತಕ್ಕದ್ದು ತಪ್ಪಿದಲ್ಲಿ, 3 ತಿಂಗಳು ಜೈಲು.
ಈ ರೀತಿ ಆದೇಶ ಮಾಡಲಾಗಿದೆ.
ಸಹಕಾರಿಯ ಪರವಾಗಿ ಆರ್ ಎಸ್ ಹೆಗಡೆ (ವಕೀಲರು) ಪ್ರಕರಣ ನಡೆಸಿದ್ದರು.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *