ಜಲಸಾಹಸದ ಹೊನ್ನೆಮರಡುವಿನ ನಾರೀಶಕ್ತಿ ನೊಮಿಟೋ ಸ್ವಾಮಿ ಸಾಹಸ ಪ್ರಸಂಗ

ಜಲ,ಮರ,ಗಾಳಿ,ಬೆಟ್ಟಗಳನ್ನು ಬಳಸಿ ಸಾಹಸ ಪ್ರದರ್ಶಿಸುವ ರೋಮಾಂಚಕಾರಿ ಕ್ರೀಡೆಗೆ ಈಗ ಎಲ್ಲೆಡೆ ಮನ್ನಣೆ. ಇಂಥ ಸಾಹಸಗಳ ಕಾರಣದಿಂದ ಪ್ರಖ್ಯಾತವಾದ ಸ್ಥಳಗಳಲ್ಲಿ ಹೊನ್ನೆಮರಡು ಒಂದು.
ಶಿವಮೊಗ್ಗ ಮತ್ತು ಉತ್ತರಕನ್ನಡ ಜಿಲ್ಲೆಯ ಗಡಿಯಲ್ಲಿರುವ ಈ ಹೊನ್ನೆಮರಡು ಜಲಸಾಕ್ಷರತೆ,ಜಲಸಾಹಸ ಸೇರಿದ ಪಾಕೃತಿಕ ಆಕರ್ಷಣೆ ಮತ್ತು ಜ್ಞಾನದ ಕೇಂದ್ರ. ಇಂಥ ಕೇಂದ್ರ ಕಟ್ಟಿರುವ ಸ್ವಾಮಿ ದಂಪತಿಗಳು ಈ ಹೊನ್ನೆಮರುಡುವಿನ ಮೂಲಕ ಈ ಭಾಗದ ಪ್ರಕೃತಿ, ಪರಿಸರವನ್ನು ವಿಶ್ವಕ್ಕೆ ಪರಿಚಯಿಸಿದವರು. ಜಲಸಾಹಸದ ತರಬೇತಿ, ಚಾರಣ ಶಿಬಿರಗಳನ್ನು ನಡೆಸುವ ಸ್ವಾಮಿ,ಅವರ ನಿಷ್ಠೂರತೆ,ಸರಳತೆಗೆ ಪ್ರಸಿದ್ಧರು. ಇವರ ಪತ್ನಿ ನೊಮಿಟೋ. ನೊಮಿಟೋ ಜಲಸಾಹಸ ಯಾತ್ರೆಗೆ ಈಗ ಬೆಳ್ಳಿ ಹಬ್ಬದ ಹರ್ಷ. ಸ್ವಾಮಿಯವರೊಂದಿಗೆ ಸೇರಿ ನೊಮಿಟೋ ಹೊನ್ನೆಮರಡುವಿನಲ್ಲಿ ಜಲಸಾಹಸ ಶಿಬಿರಗಳು ಹೊರಗಡೆ ಸೈಕಲ್ ಯಾನ ನಡೆಸುತ್ತಾರೆ ಎಂಬುದು ಹೊರಜಗತ್ತು ನೋಡಿರುವ ಸತ್ಯ, ವಾಸ್ತವವೇನೆಂದರೆ ನೊಮಿಟೋ ಪ್ರಾರಂಭಿಸಿದ, ಪ್ರಾರಂಭಿಸುವ ಈ ಸಾಹಸದ ಯೋಚನೆ,ಯೋಜನೆಗಳನ್ನು ಹೊತ್ತೊಯ್ಯುವವರು ಅವರ ಪತಿ ಸ್ವಾಮಿ. ಕಳೆದ ಎರಡೂವರೆ ದಶಕಗಳಿಂದ ಹೊನ್ನೆಮರಡು ಕೇಂದ್ರವಾಗಿಸಿಕೊಂಡು ಈ ದಂಪತಿಗಳು ನಡೆಸಿರುವ ಸಾಹಸಗಳ ಚರಿತ್ರೆ ದೊಡ್ಡದು. ತಂಡಮಾಡಿಕೊಂಡು ನದಿಗುಂಟ ಸಾಗುವುದು, ಕಾಡು, ನೆಲ, ಜಲಗಳ ‘ಅರಿವು’ ತಿಳಿಸುವ ಜೊತೆಗೆ ಅವುಗಳ ಸಂರಕ್ಷಣೆಗೆ ಸ್ವಾಮಿ ದಂಪತಿಗಳು ಮಾಡುವ ಕೆಲಸ ಒಂದು ಹೋರಾಟ.
ಈ ದಂಪತಿಗಳ ಈ ಕೆಲಸ, ಸಾಹಸ ನೋಡಿ ಕಾಡಿನ ಮೂಲೆ ಹೊನ್ನೆಮರುಡುವಿಗೆ ದೇಶವಿದೇಶಗಳಿಂದ ಬಂದ ಜನರಿದ್ದಾರೆ. ಯಾರೇ ಬರಲಿ ಪ್ಲಾಸ್ಟಿಕ್, ಕಸ, ರಗಳೆ, ಇತ್ಯಾದಿ ನಿಷೇಧ. ಕಾಡನ್ನು ಅರಿಯುವವರು ಸಹಜ, ಸರಳ ಇರಬೇಕೆಂದು ಬಯಸುವ ಈ ದಂಪತಿಗಳು ಈ ಭಾಗಕ್ಕೆ ಸ್ವಚ್ಛ, ಶುದ್ಧ ಪರಿಸರದ ಅರಿವನ್ನು ಮೂಡಿಸಿದ್ದಾರೆ. ಹೀಗೆ ದಾಖಲೆಗೆ ಸಿಗುವ, ಸಿಗಲಾರದ ಅನೇಕ ಬದ್ಧತೆಯ ಕೆಲಸಮಾಡುವ ಈ ಸ್ವಾಮಿ ದಂಪತಿಗಳನ್ನು ಅವರ ಕೆಲಸ ಸಾಧನೆಗಳಿಗಾಗಿ ನಾಡಿನ ಅನೇಕ ಸಂಸ್ಥೆಗಳು ಗುರುತಿಸಿವೆ. ಕಳೆದ ವರ್ಷ ನೊಮಿಟೋ ಕೇಂದ್ರ ಸರ್ಕಾರದ ನಾರೀಶಕ್ತಿ ಗೌರವ ಪುರಸ್ಕಾರ ಪಡೆಯುವ ಮೂಲಕ ಕೇಂದ್ರ ನೊಮಿಟೋ ರನ್ನು ಗುರುತಿಸಿದೆ. ಚಿತ್ರದುರ್ಗದ ಮುರಘಾಮಠ ನೀಡುವ ಪ್ರತಿಷ್ಠಿತ ಬಸವಶ್ರೀ ಪ್ರಶಸ್ತಿ ಹೊನ್ನೆಮರಡು ಸ್ವಾಮಿಯವರಿಗೆ ದೊರೆತಿದೆ. ಹೊನ್ನೆಮರುಡುವನ್ನು ಜಗತ್ತಿಗೆ ಪರಿಚಯಿಸಿದ ಈ ದಂಪತಿಗಳನ್ನು ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ಅಭಿನಂದಿಸಿ,ಗೌರವಿಸುವ ಮೂಲಕ ಜಗತ್ತಿಗೆ ಪರಿಚಯಿಸಿವೆ.ಮಲೆನಾಡಿನ ಪರಿಸರ, ಕಲೆ, ವೈಶಿಷ್ಟ್ಯ, ಅನನ್ಯತೆಗಳನ್ನು ಜಗತ್ತಿಗೆ ಪರಿಚಯಿಸಿ ಆಮೂಲಕ ಸ್ಥಳಿಯ ಆಸಕ್ತರೂ ಆದಾಯ, ಅಭಿನಂದನೆ, ವೃತ್ತಿ ಮಾಡುವಂತೆ ಪ್ರೇರೇಪಿಸಿದ ನಿಜ ನಾರೀಶಕ್ತಿ ನೊಮಿಟೋ ಮತ್ತು ಸ್ವಾಮಿ(ಜಿ.ಎನ್.) ದಂಪತಿಗಳಿಗೆ ಸಮಾಜಮುಖಿ ಅಭಿನಂದಿಸುತ್ತದೆ. (ಸಾಗರದ ಹೊನ್ನೆಮರಡು ಸಾಗರದಿಂದ 20.ಕಿ.ಮೀ. ಸಿದ್ಧಾಪುರದಿಂದ 14 ಕಿ.ಮೀ. ಜೋಗದಿಂದ 15 ಕಿ.ಮೀ.ಒಳಗೆ) ಸಂಪರ್ಕ ಸಂಖ್ಯೆ-9448485508

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ...

ಭುವನಗಿರಿ ತೇರು & ಕೋಲಶಿರಸಿಯಲ್ಲಿ ಜೋರು!

ಸಿದ್ಧಾಪುರ, ಇಲ್ಲಿಯ ಪ್ರಸಿದ್ಧ ಕ್ಷೇತ್ರ ಭುವನಗಿರಿಯ ಮಹಾ ರಥೋತ್ಸವ ಫೆ.೨ಮತ್ತು ಮೂರರಂದು ನಾನಾ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ. ಕೋಲಶಿರ್ಸಿಯಲ್ಲಿ— ಇಲ್ಲಿಯ ಕೋಲಶಿರ್ಸಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ...

ಸುಳಿಮುರಕಿ ದುರಂತ…ಹಣ-ಹಣ, ಜಣಜಣಹಣಕ್ಕಾಗಿ ಹೋಯ್ತು ಎರಡು ಜೀವ..!! 

ಬಂಗಾರದ ಹಲ್ಲಿನ ಬಾಂಬೆಸ್ಟೋರಿಯ ಅಪ್ಪನ ಮಗ ಕುಖ್ಯಾತ! ಆತ ಮಾಡದ ಅಡ್ಡ ಕಸುಬುಗಳಿಲ್ಲ,, ಸಾರಾಯಿ, ಗಾಂಜಾ, ಕಳ್ಳನಾಟಾ ಒಂದೆ-ಎರಡೆ…!  ದುಡ್ಡಿನ  ಮೋದದಪಮ್ಯಾ ಮೂವತ್ತು ದಾಟುವ...

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು ದಾಖಲಾಗಿದ್ದು ಬೇಸಿಗೆಯ ಬಿಸಿಗೆ ತತ್ತರಿಸುತ್ತಿರುವ ಮಲೆನಾಡಿಗರಿಗೆ ಈ ಕಾಯಿಲೆ ತಲೆ ಬಿಸಿ ಹೆಚ್ಚಿಸಿದೆ. ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭವಾದ ಕ್ಯಾಸನೂರು ಮಂಗನ ರೋಗ ಈ ವರ್ಷ ಕೂಡಾ ಶಿವಮೊಗ್ಗ ಜಿಲ್ಲೆಯಲ್ಲೇಅರ್ಧಶತಕ...

Recommended For You

About the Author: Kanneshwar Naik

Leave a Reply

Your email address will not be published. Required fields are marked *