ಮಿಶ್ರ ಕೃಷಿಯಲ್ಲಿ ಲಾಭ ಪಡೆಯುತ್ತಿರುವ ಸುನಿಲ್‍ಕುಮಾರ

ಆಧುನಿಕ ಅನುಕೂಲ, ತಂತ್ರಜ್ಞಾನಕ್ಕಾಗಿ ಮಹಾನಗರಕ್ಕೆ ಹೋಗಬೇಕು, ಕೃಷಿಗೆ ಗ್ರಾಮ ಸೇರಬೇಕು ಎನ್ನುವ ಸಾಮಾನ್ಯ ಗ್ರಹಿಕೆಯೊಂದಿದೆ. ಆದರೆ ಕಾಲ ಈ ಗೃಹಿಕೆ,ಗಾದೆ,ಪರಿಸ್ಥಿತಿಗಳನ್ನು ಬದಲಿಸುತ್ತಿದೆ. ನಗರದಲ್ಲಿ, ನಗರದ ಮನೆಯ ಟಾರಸಿಮೇಲೆ ಕೃಷಿ ಮಾಡಿ ಲಾಭ ಕಂಡವರಿದ್ದಾರೆ. ಗ್ರಾಮೀಣ ಪರಿಸರದಲ್ಲಿದ್ದೂ ಎಲ್ಲಾ ಆಧುನಿಕ ಅನುಕೂಲಗಳೊಂದಿಗೆ ಸುಖವಾಗಿದ್ದವರಿದ್ದಾರೆ. ಇಂಥ ಅಪವಾದಗಳಲ್ಲಿ ಸಂಪಕಂಡದ ಸುನಿಲ್ ನಾಯ್ಕ ಒಬ್ಬರು. ಆಟೋಮೊಬೈಲ್ ಡಿಪ್ಲೊಮಾ ಓದಿ ವಿಜ್ಞಾನ, ತಂತ್ರಜ್ಞಾನ ಎಂದು ನಗರ ಸೇರದೆ, ಹುಟ್ಟೂರಲ್ಲೇ ಕೃಷಿಯಲ್ಲಿ ಖುಷಿ ಕಂಡಿದ್ದಾರೆ.
ಇವರ ತೋಟದಲ್ಲಿ ಬೊನ್ಸಾಯಿ ಕಾಳುಮೆಣಸಿನ ಬಳ್ಳಿಗಳಿವೆ. ಅಗರ್ವುಡ್ ಮರಗಳಿವೆ, ಯಾಲಕ್ಕಿ ಗಿಡಗಳಿವೆ ಹೀಗೆ ಮಿಶ್ರ ಕೃಷಿಯಲ್ಲಿ ಎಲ್ಲವನ್ನೂ ಬೆಳೆಯುತ್ತಾ ಪ್ರಯೋಗಶೀಲರಾಗಿ ಕೃಷಿಯಲ್ಲಿ ತೊಡಗಿಕೊಂಡ ಇವರಿಗೆ ಕಾಳುಮೆಣಸು, ಯಾಲಕ್ಕಿ, ಅಡಿಕೆಯಷ್ಟೇ ಆದಾಯ ಕೊಡುತ್ತಿವೆ. ಅಗರ್‍ವುಡ್ ಕೈ ಹಿಡಿಯಬಹುದೆಂದು ಕಾಯುತಿದ್ದಾರೆ. ಮಂಗನಕಾಟದಲ್ಲಿ ಏಲಕ್ಕಿ ಬೆಳೆದ್ದು ಹೇಗೆ ಎಂದರೆ ಬ್ಲೂಟೂತ್ ಮೂಲಕ ತೋಟದಲ್ಲಿ ಸೈರನ್ ಕೂಗಿಸಿ ಮಂಗ ಓಡಿಸುತ್ತೇವೆ ಎನ್ನುತ್ತಾರೆ.
ಅವರ ತೋಟಗಳಲ್ಲಿ ಸಾಂಪ್ರದಾಯಿಕ ಮಾದರಿಯೊಂದಿಗೆ ಆಧುನಿಕ ಅನುಕೂಲಗಳನ್ನೂ ಅಳವಡಿಸಿದ್ದಾರೆ. ಹನಿ ನೀರಾವರಿ ನೀರಿಗಿಂತ ಸ್ಪಿಂಕ್ಲರ್ ನೀರಿನಿಂದ ಭೂಮಿ ಹೆಚ್ಚು ಹಸಿಯಾಗುತ್ತದೆ ಎನ್ನುವ ಸುನಿಲ್ ಕುಮಾರ್ ಅಪ್ಪ-ಅಮ್ಮ ಶಿಕ್ಷಕ-ಶಿಕ್ಷಕಿಯರಾದರೂ ಸರ್ಕಾರಿ ನೌಕರಿ ದೂರದೂರಿನ ಕೆಲಸಕ್ಕೆ ಕೈ ಚಾಚದೆ ಕೃಷಿಗೆ ಒಗ್ಗಿಕೊಂಡು ಯುವಕೃಷಿಕನಾಗಿ ಹೆಸರುಮಾಡುತಿದ್ದಾರೆ.
ಈ ವರ್ಷದ ಬರ-ಮಳೆಗಳು ಎಲ್ಲರಂತೆ ಇವರನ್ನೂ ಬಾಧಿಸಿವೆ ಆದರೆ ಕೃಷಿಯಲ್ಲಿ ಏರು-ಪೇರು ಸಾಮಾನ್ಯ ಎನ್ನುವ ಸುನಿಲ್ ಒಂದುವರ್ಷ ಕಡಿಮೆಯಾದರೆ ಮತ್ತೊಂದು ವರ್ಷ ಹೆಚ್ಚಾಗುತ್ತದೆ ಎನ್ನುವ ಆತ್ಮವಿಶ್ವಾಸದ ಮಾತನ್ನಾಡುತ್ತಾರೆ.
ಕೃಷಿಯಲ್ಲಿ ನಗದಿತ-ನಿಯಮಿತ ಆದಾಯವಿಲ್ಲ ಆದರೆ ಕೃಷಿ ಕೊಡುವ ಖುಷಿ ಬೇರೆ ಎಲ್ಲೂ ಸಿಗುವುದಿಲ್ಲ ಎನ್ನುವ ಇವರು ಕೃಷಿ-ಆಧಾರಿತ ಮತ್ತು ಪೂರಕ ಚಿಕ್ಕ ಉದ್ಯಮಗಳಿಂದ ಗ್ರಾಮೀಣ ಪ್ರದೇಶದಲ್ಲಿ ಜನ ಉಳಿಯುವಂತೆ ಮಾಡಬಹುದೆನ್ನುವ ಸುನಿಲ್‍ಕುಮಾರ ಮಲೆನಾಡಿನ ನೀರು, ವಾತಾವರಣ ಬಳಸಿಕೊಂಡು ಇಲ್ಲಿರದಿದ್ದರೆ ಈ ನೈಸರ್ಗಿಕ ಅನುಕೂಲಗಳಿಂದ ವಂಚಿತರಾಗಬೇಕಾಗುತ್ತದೆ ಎನ್ನುತ್ತಾ ಕೃಷಿಯ ಬಗ್ಗೆ ಆಸಕ್ತಿ ತುಂಬಿದ ತಂದೆ-ತಾಯಿಯರ ಸಹಕಾರ, ಆಶೀರ್ವಾದಗಳಿಂದ ಹೀಗಿರಲು ಸಾಧ್ಯವಾಗಿದೆ ಎನ್ನುವದನ್ನು ಮರೆಯದೇ ಹೇಳುತ್ತಾರೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಇಂದಿನ ಸುದ್ದಿ…samajamukhi.net-news-round 11-04-25 ಒಕ್ಕಲಿಗರ ಬೃಹತ್‌ ಸಮಾವೇಶ,ಬೇಸಿಗೆ ಶಿಬಿರ ಪ್ರಾರಂಭ,ಕೃಷಿ ಇಲಾಖೆಯಸೌಲತ್ತು ವಿತರಣೆ,ಬಿ.ಜೆ.ಪಿ.ಗೆ ಜಾಡಿಸಿದ ಭೀಮಣ್ಣ

ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟಿಸಿದ ಬಿ.ಜೆ.ಪಿ. ಕಾಂಗ್ರೆಸ್‌ ನಾಯಕರು ಮತ್ತು ಪಕ್ಷವನ್ನು ಗುರಿಯಾಗಿಸಿ ದೂಷಿಸಿದ್ದಾರೆ. ಬಿ.ಜೆ.ಪಿ. ಮುಖಂಡರ ಬಾಯಿಂದ ಮುಸ್ಲಿಂ ವಿರೋಧದ ಜೊತೆಗೆ...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

ಸ್ತ್ರೀ & ಕವಿತೆ ಇಲ್ಲದಿದ್ದರೆ… ಬದುಕಿಲ್ಲ

ಕವಿತೆ ಜೀವಪರ ಕಾವ್ಯ ಕ್ಷಮಿಸುವ,ಸಹಿಸುವ,ಹೋರಾಟಕ್ಕೆ ಉತ್ತೇಜಿಸುವ ಶಕ್ತಿ ಹೊಂದಿದೆ ಎಂದು ಸಾಹಿತಿ ಕೆ.ಬಿ. ವೀರಲಿಂಗನಗೌಡ ಹೇಳಿದ್ದಾರೆ. ಸಿದ್ಧಾಪುರದ ಕ.ಸಾ.ಪ. ಇಲ್ಲಿಯ ಹೊಸೂರಿನ ಎಂ.ಕೆ. ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *