ಬಿಳಗಿ ಸೀಮೆಯ ಮಾರಿಕಾಂಬಾ ಜಾತ್ರೆ & ಬಿಳಗಿಯ ವೈಶಿಷ್ಟ್ಯ

ಬಿಳಗಿಯಲ್ಲಿ ಮಾರಿಕಾಂಬಾ ಜಾತ್ರೆ ಮುಕ್ತಾಯವಾಗಿದೆ. ಈ ಬಿಳಗಿ ಸುಮಾರು 200-300 ವರ್ಷಗಳ ಹಿಂದೆ ರಾಜಧಾನಿಯಾಗಿ ಮೆರೆದಿದ್ದ ಪ್ರದೇಶ.
ಅಘನಾಶಿನಿ ನದಿಯ ತೊಪ್ಪಲಿನ ಈ ಪ್ರದೇಶದ ಪಾಕೃತಿಕ ವೈಶಿಷ್ಟ್ಯ, ಜನಜೀವನ, ವಿಭಿನ್ನವಾಗಿದೆ.ರಾಜರ ಕಾಲದ ಜೈನಬಸದಿ ಇಲ್ಲಿದ್ದು 22,23,24 ನೇ ತೀರ್ಥಂಕರರ ಮೂರ್ತಿಗಳು ಇಲ್ಲಿವೆ. ಇದೇ ಪ್ರದೇಶದಲ್ಲಿ ಗೋಲ್‍ಭಾವಿ, ವಿರೂಪಾಕ್ಷ ದೇವಾಲಯಗಳೆಲ್ಲಾ ಇವೆ.

200 ವರ್ಷಗಳಿಗೂ ಹಿಂದೆ ಬಿಳಗಿಯಲ್ಲಿ ಸಾಮಂತರಾಗಿದ್ದ
ಅರಸರು ಕಟ್ಟಿದ ನಿರ್ಮಾಣಗಳು, ಸ್ವತಂತ್ರ ಭಾರತದಲ್ಲಿ ಇಲ್ಲಿ ಸ್ಥಾಪನೆಯಾದ ವಿದ್ಯಾಸಂಸ್ಥೆಗಳು, ಸಹಕಾರಿ ಸಂಘಗಳು,ಜೇನು ಸೊಸೈಟಿ ಹೀಗೆ ಇತ್ತೀಚಿನ 200-300 ವರ್ಷಗಳಿಂದ ಪ್ರಮುಖ ಕೇಂದ್ರವಾಗಿದ್ದ ಬಿಳಗಿ ಈಗಲೂ ವಿಭಿನ್ನ ಜಾತಿ-ಸಮೂದಾಯ, ಧಾರ್ಮಿಕ ಮತಾವಲಂಬಿಗಳು ಇರುವ ಪ್ರದೇಶ.
ಬಿಳಗಿ ಕೇಂದ್ರವನ್ನಾಗಿಟ್ಟುಕೊಂಡು ನೋಡಬಹುದಾದ ರಾಜಕಾರಣಿಗಳು,ಸಾಧಕರು, ಬೆಳೆಗಳು,ಉದ್ಯಮಿಗಳು ಹೀಗೆ ಎಲ್ಲಾ ಕ್ಷೇತ್ರದಲ್ಲಿ ಕಾಣುವ ಬಿಳಗಿಕೇಂದ್ರದ ಸೀಮೆಗಳು ಈಗಿನ 10 ಗ್ರಾಮ ಪಂಚಾಯತ್ ಗಳಲ್ಲಿ ವಿಸ್ತರಿಸಿವೆ.
ಇಲ್ಲಿಯ ದುರ್ಗಾಂಬಾ ಮತ್ತು ಮಾರಿಕಾಂಬಾ ದೇವಾಲಯಗಳು ಈ ಭಾಗದ ಜನರ ಭಕ್ತಿಯ ಕೇಂದ್ರಗಳು.
ದುರ್ಗಾಂಬಾ ಮತ್ತು ಮಾರಿಕಾಂಬಾ ದೇವಾಲಯಗಳಿಗೆ ಒಂದೇ ಆಡಳಿತ ಸಮಿತಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿರುವ ಪುರಾತನ ದೇವಾಲಯಗಳು ಇಲ್ಲಿಯ ಪ್ರಾಚೀನ ಪಳಯುಳಿಕೆಗಳ ನಿರ್ವಹಣೆಯನ್ನು ಕೇಂದ್ರದ ಪ್ರಾಚ್ಯವಸ್ತು ಇಲಾಖೆ ಮಾಡುತ್ತಿದೆ. ಐತಿಹಾಸಿಕ ಮಹತ್ವದಿಂದ ಬಿಳಗಿ ಪ್ರಸಿದ್ಧವಾಗಿದ್ದರೆ ಈ ಐತಿಹಾಸಿಕ ಪ್ರಾಮುಖ್ಯತೆ ಇಲ್ಲಿಯ ಜನಜೀವನಕ್ಕೂ ತೊಂದರೆಮಾಡಿದೆ. ಇಲ್ಲಿಯ ಕೆಲವು ವಾಸದ ಮನೆಗಳ ದುರಸ್ಥಿ, ಹೊಸನಿರ್ಮಾಣಕ್ಕೆ ಅನುಕೂಲ ಕಲ್ಫಿಸದ ಪ್ರಾಚ್ಯವಸ್ತು ಇಲಾಖೆ ನೀತಿ-ನಿಯಮಗಳು ಜನರಿಗೆ ಅನಾನುಕೂಲ ಮಾಡಿವೆ.
ಸರ್ಕಾರ ಮತ್ತು ಗ್ರಾಮ ಪಂಚಾಯತ್ ನಿರ್ವಹಿಸುತ್ತಿರುವ ಇಲ್ಲಿಯ ಐತಿಹಾಸಿಕ ಪಳಯುಳಿಕೆಗಳನ್ನು ನೋಡುವವರೂ ಕಡಿಮೆ. ಪ್ರಚಾರದ ಕೊರತೆ, ಸ್ಥಳಿಯರ ಅರಿವಿನ ಕೊರತೆ ಹೀಗೆ ಐತಿಹಾಸಿಕ ಹಿನ್ನೆಲೆಯ ಈ ಕೇಂದ್ರ ಅಭಿವೃದ್ಧಿಯ ಹಿನ್ನೆಲೆಯಲ್ಲೂ ಹಿಂದಿದೆ.ದೇವರು, ಧರ್ಮ, ನಂಬಿಕೆ ಆಧಾರದಲ್ಲೇ ಬದುಕುತ್ತಿರುವ ಈ ಪ್ರದೇಶದ ಜನ ವೆಚ್ಚದಾಯಕ ಜಾತ್ರೆ-ಹಬ್ಬಗಳನ್ನೂ ರೂಢಿ-ಸಂಪ್ರದಾಯದಂತೆ ನಡೆಸುತ್ತಾರೆ. ಲಕ್ಷಾಂತರ ಜನರು ಪಾಲ್ಗೊಳ್ಳುವ ಬಿಳಗಿ ಜಾತ್ರೆಯಲ್ಲಿ ಜಾತ್ರಾ ಆಕರ್ಷಣೆಗಳಾಗಿ ಮನೋರಂಜನಾ ಸಾಧನಗಳು, ಮನೋರಂಜನಾ ಕಾರ್ಯಕ್ರಮಗಳು ನಡೆಯುತ್ತಿವೆ. ಶಿಸ್ತು-ಪರಿಸರ ಪೂರಕ ಉತ್ಸವದ ಹಿನ್ನೆಲೆಯಲ್ಲಿ ಜಾತ್ರಾ ಸಮೀತಿ ಪ್ಲಾಸ್ಟಿಕ್ ನಿರ್ಬಂಧ ಹೇರಿರುವುದು, ವಾಹನ ನಿಲುಗಡೆ, ಸಂಚಾರಿ ವ್ಯವಸ್ಥೆಗಳನ್ನು ಬಿಗಿಮಾಡಿರುವುದು ಈ ಜಾತ್ರೆಯ ವಿಶೇಶವಾಗಿತ್ತು.
ಬಿಳಗಿ ಮಾರಿಕಾಂಬಾ ದೇವಾಲಯಕ್ಕೂ ಇಲ್ಲಿಯ ರಾಜರ ಆಡಳಿತಕ್ಕೂ ಸರಿಸುಮಾರು ಸಮಾನ ಚರಿತ್ರೆಯಿದೆ. ಬಿಳಗಿ ಮಾಂಡಳೀಕರ ಕಾಲದಲ್ಲಿ ಪೂಜಿಸಲ್ಪಡುತಿದ್ದ ಮಾರಿಕಾಂಬೆಗೆ ಆ ನಂತರ ಸೀಮೆಯ ವ್ಯಾಪ್ತಿ ದೊರೆತು ಈ ಜಾತ್ರೆಯೂ ಪ್ರಸಿದ್ಧವಾಯಿತು ಎನ್ನಲಾಗುತ್ತಿದೆ. ದೇವಾಲಯದ ಆಡಳಿತಮಂಡಳಿ. ಜಾತ್ರಾಮಹೋತ್ಸವದ ಅಧ್ಯಕ್ಷತೆಗಳ ವಿಚಾರದಲ್ಲಿ ಇತ್ತೀಚಿನ 40-50 ವರ್ಷಗಳಿಂದಲೂ ವೈದಿಕರು, ವೈದಿಕೇತರ ಹಿಂದುಳಿದ ವರ್ಗಗಳ ನಡುವೆ ಸಂಘರ್ಷದ್ದೂ ಲಾಗಾಯ್ತಿನ ಇತಿಹಾಸವೇ ಇದೆ.

ಇಂದು ವಿದ್ಯುಕ್ತವಾಗಿ ಮುಗಿದ ಬಿಳಗಿ ಮಾರಿಕಾಂಬಾ ಜಾತ್ರೆ
ಕಳೆದ ಒಂದು ವಾರದಿಂದ ನಡೆದ ತಾಲೂಕಿನ ಬಿಳಗಿ ಶ್ರೀಮಾರಿಕಾಂಬಾ ಜಾತ್ರಾ ಮಹೋತ್ಸವ ಇಂದು ವಿದ್ಯುಕ್ತವಾಗಿ ಮುಕ್ತಾಯವಾಯಿತು.
ವಾಹನ ನಿಲುಗಡೆ ವ್ಯವಸ್ಥೆ,ಪ್ಲಾಸ್ಟಿಕ್ ಮುಕ್ತ ಉತ್ಸವಗಳಿಂದಾಗಿ ಸಾರ್ವಜನಿಕರಿಗೆ ತುಸು ಕಿರಿಕಿರಿಯಾದರೂ ಸ್ವಚ್ಛತೆ,ನಿರ್ವಹಣೆಗಳ ಹಿನ್ನೆಲೆಯಲ್ಲಿ ಜಾತ್ರೆಯ ಯಶಸ್ಸು ಅಭೂತಪೂರ್ವ ಎನ್ನುವಂತಿತ್ತು.
ಶನಿವಾರ,ರವಿವಾರಗಳಂದು ಹೆಚ್ಚಿನ ಜನರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು. ವ್ಯಾಪಾರ,ವ್ಯವಹಾರ, ಗಳಿಕೆ ಹಿನ್ನೆಲೆಯಲ್ಲಿ ಜಾತ್ರೆ ಯಶಸ್ವಿ ಎನ್ನಲಾಗಿದೆ. ಸ್ಥಳಿಯರು,ಪೊಲೀಸರು ಮತ್ತು ಸಂಘಟಕರ ಪ್ರಯತ್ನಗಳಿಂದಾಗಿ ಜಾತ್ರೆಯಲ್ಲಿ ಅಹಿತಕರ ಘಟನೆಗಳಾಗಿಲ್ಲ ಎನ್ನುವ ಮೆಚ್ಚುಗೆ ವ್ಯಕ್ತವಾಗಿದೆ. ಕಳೆದ ಮಂಗಳವಾರದ ಮಧ್ಯರಾತ್ರಿ ಆಚರಣೆಗಳ ನಂತರ ಹಿಂದಿನ ಬುಧವಾರ ಬೆಳಿಗ್ಗೆ ಜಾತ್ರೆಯ ಗದ್ದುಗೆಗೆ ಬಂದಿದ್ದ ಮಾರಿಕಾಂಬೆ ಈ ಬುಧವಾರದ ಮುಂಜಾನೆವೇಳೆಗೆ ವಿಸರ್ಜನೆಯಾಗಿದ್ದಾಳೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮಂಜುಗುಣಿ ಜಾತ್ರೆ ಸಂಪನ್ನ, ಕದಂಬೋತ್ಸವ ೨೫ಕ್ಕೆ ಚಾಲನೆ,ಶಿವದರ್ಶನ! samajamukhi.net news round 12-04-25

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಿದ್ಧಾಪುರ ಆಯೋಜಿಸಿರುವ ಶಿವದರ್ಶನ ಪ್ರವಚನ ಮಾಲಿಕೆಹಾಗೂ ಭಗವದ್ಗೀತೆಯ ಸಂದೇಶ ʼದ್ವಾದಶ ಜ್ಯೋತಿರ್ಲಿಂಗಗಳ ದಿವ್ಯ ದರ್ಶನ ಕಾರ್ಯಕ್ರಮ ಏ.೧೪ ರ...

ಇಂದಿನ ಸುದ್ದಿ…samajamukhi.net-news-round 11-04-25 ಒಕ್ಕಲಿಗರ ಬೃಹತ್‌ ಸಮಾವೇಶ,ಬೇಸಿಗೆ ಶಿಬಿರ ಪ್ರಾರಂಭ,ಕೃಷಿ ಇಲಾಖೆಯಸೌಲತ್ತು ವಿತರಣೆ,ಬಿ.ಜೆ.ಪಿ.ಗೆ ಜಾಡಿಸಿದ ಭೀಮಣ್ಣ

ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟಿಸಿದ ಬಿ.ಜೆ.ಪಿ. ಕಾಂಗ್ರೆಸ್‌ ನಾಯಕರು ಮತ್ತು ಪಕ್ಷವನ್ನು ಗುರಿಯಾಗಿಸಿ ದೂಷಿಸಿದ್ದಾರೆ. ಬಿ.ಜೆ.ಪಿ. ಮುಖಂಡರ ಬಾಯಿಂದ ಮುಸ್ಲಿಂ ವಿರೋಧದ ಜೊತೆಗೆ...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *