v.s.hegde death-ಆಘಾತತಂದ ಸಾವುಗಳು

ದೇಶ, ರಾಜ್ಯದಾದ್ಯಂತ ಸಾವುಗಳ ಸರಪಳಿ ಮುಂದುವರಿದಿದೆ. ಶಾಸಕರು, ಸಂಸದರ ಸಾವು-ನೋವುಗಳ ನಡುವೆ ಸಹೃಯಿ ಅಧಿಕಾರಿಗಳಾಗಿದ್ದ ವಿ.ಎಸ್. ಹೆಗಡೆ ಕಾನಗೋಡು, ಎಲ್.ಐ.ಸಿ. ಉಪವ್ಯಸ್ಥಾಪಕ ಸತೀಶ್ ಶಾನಭಾಗ ಸಾವು ಹಲವರನ್ನು ಕಾಡಿವೆ. ಸಿದ್ಧಾಪುರದಲ್ಲಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳಾಗಿ ಕೆಲಸ ಮಾಡಿ ಇಲ್ಲಿಂದ ವರ್ಗಾವಣೆಯಾಗಿ, ಪದೋನ್ನತಿ ಹೊಂದಿದ್ದ ವಿ.ಎಸ್. ಹೆಗಡೆ ಜನಾನುರಾಗಿ ವ್ಯಕ್ತಿಯಾಗಿ, ಜನಪರವಾಗಿ ಕೆಲಸ ಮಾಡಿ ಇದೇ ವರ್ಷ ನಿವೃತ್ತಿಹೊಂದಿದ್ದರು. ಕರುಳು ಕ್ಯಾನ್ಸರ್ ಗೆ ತುತ್ತಾಗಿದ್ದ ಹೆಗಡೆ ಬೆಂಗಳೂರಿನಲ್ಲೇ ವಾಸ್ತವ್ಯ ಹೊಂದಿ ಅಲ್ಲಿಯೇ ಚಿಕಿತ್ಸೆ ಪಡೆಯುತಿದ್ದರು ಇಂದು ಬೆಳಿಗ್ಗೆ ನಿಧನರಾದ ಅವರ ಪಾರ್ಥಿವಶರೀರ ಇಂದು ರಾತ್ರಿ ಶಿರಸಿ ಕಾನಗೋಡಿಗೆ ಬರಲಿದ್ದು ನಾಳೆ ಮುಂಜಾನೆ 9.30 ಕ್ಕೆ ಅಂತ್ಯಸಂಸ್ಕಾರ ನಡೆಯಲಿದೆ ಎಂದು ತಿಳಿಸಲಾಗಿದೆ.

ಎಲ್.ಐ.ಸಿ. ಗೆ ಹಾನಿ- ಎಲ್.ಐ.ಸಿ.ಏಜೆಂಟರಾಗಿ ಸೇವೆ ಸಲ್ಲಿಸಿದ್ದ ಷಣ್ಮುಖ ಮಡಿವಾಳ ಿದೇ ವಾರ ನಿಧನರಾಗಿದ್ದಾರೆ. ಅವರು ಕರೋನಾ ಕ್ಕೆ ತುತ್ತಾಗಿರುವ ವಿಚಾರ ಅವರ ಅಂತ್ಯ ಸಂಸ್ಕಾರದ ನಂತರ ಸುದ್ದಿಯಾಗಿದೆ. ಖುಷಿಯ ಸಂಗತಿ ಎಂದರೆ ಷಣ್ಮುಖ ಮಡಿವಾಳರ ಪ್ರಾಥಮಿಕ ಸಂಪರ್ಕದ ವ್ಯಕ್ತಿಗಳು, ಶವ ಸಂಸ್ಕಾರದಲ್ಲಿ ಪಾಲ್ಗೊಂಡ ಬಹುತೇಕ ಎಲ್ಲರ ರ್ಯಾಪಿಡ್ ಟೆಸ್ಟ್ ಮಾದರಿಯಲ್ಲಿ ಕರೋನಾ ದೃಢಪಟ್ಟಿಲ್ಲ.

ಸಿದ್ಧಾಪುರ ಸಾಯಿನಗರದ ಎಲ್.ಐ.ಸಿ. ಏಜೆಂಟ್ ಷಣ್ಮುಖ ಸಾವಿನ ಮಾರನೇ ದಿನ ಇದೇ ಸಾಯಿನಗರದ ನಿವಾಸಿ, ಸಾಗರ ಎಲ್.ಐ.ಸಿ. ಕಛೇರಿಯ ಉಪ ವ್ಯವಸ್ಥಾಪಕ ಸತೀಶ್ ಶಾನಭಾಗ ನಿಧನ ಹಲವರ ಶೋಕಕ್ಕೆ ಕಾರಣವಾಗಿದೆ. ಉತ್ತಮ ವ್ಯಕ್ತಿ- ಮಿತಭಾಷಿಯಾಗಿದ್ದ ಸತೀಶ ಶಾನಭಾಗ ಹೃದಯಾಘಾತದಿಂದ ಮೃತಪಟ್ಟಿರುವುದು ಹಲವರ ನೋವಿಗೆ ಕಾರಣವಾಗಿದೆ.

ಎಸ್.ಪಿ.ಬಿ.- ಹಲವು ದಿವಸಗಳ ದೀರ್ಘ ಅನಾರೋಗ್ಯದಿಂದ ಬಳಲಿದ ಗಾಯಕ ಎಸ್. ಪಿ.ಬಿ. ನಿಧನ ನಾಡನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಎಸ್.ಪಿ. ಬಾಲಸುಬ್ರಮಣ್ಯಂ ಹಲವು ಭಾಷೆಗಳ ಶ್ರೇಷ್ಠ ಗಾಯಕರಾಗಿ ನಾಲ್ಕು ಸಾವಿರಕ್ಕೂ ಹೆಚ್ಚಿನ ಚಿತ್ರಗಳಿಗೆ ಹಾಡಿರುವುದು ಅವರ ಸಾಧನೆಗೆ ಸಾಕ್ಷಿ.

ಸಿದ್ದಾಪುರ: ತಾಲೂಕಿನ ಬಾಳೇಸರ ಸಮೀಪದ ಕಲ್ಮನೆಯ ನಾಗವೇಣಿ ಪರಮೇಶ್ವರ ಭಟ್ಟ (82) ಗುರುವಾರ ನಿಧನಹೊಂದಿದರು.
ಅವರಿಗೆ ಮೂವರು ಪುತ್ರರು,ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಬಳಗವಿದೆ.

ಎಸ್.ಪಿ.ಬಿ. ಬಾಲಸುಬ್ರಹ್ಮಣ್ಯಂ ಶರೀರ ಹೊರಟುಹೋದರೂ
ಶಾರೀರ ನಮ್ಮ ನಡುವೆ ಇರುತ್ತದೆ : ಅರವಿಂದ ಕರ್ಕಿಕೋಡಿ
ಕಾರವಾರ: ಗಾಯಕ ಡಾ. ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ನಿಧನ ಕನ್ನಡಕ್ಕೆ ಬಹು ದೊಡ್ಡ ನಷ್ಟ. ಬಹುಭಾಷಾ ಗಾಯಕರಾದರೂ ಕನ್ನಡವನ್ನೇ ಉಸಿರಾಡುತ್ತಿದ್ದ ಅವರು ಈ ಭಾಷೆಯ ಬಗ್ಗೆ ವಿಶೇಷ ಅಭಿಮಾನ ಹೊಂದಿದ್ದರು ಎಂದು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಅವರು ಸಂತಾಪ ಸೂಚಿಸಿದ್ದಾರೆ.
ಯುವ ಗಾಯಕರಿಗೆ ಸ್ಪೂರ್ತಿಯ ಚಿಲುಮೆಯಾಗಿದ್ದ ಎಸ್.ಪಿ.ಬಿ. ಅವರು ತನಗೆ ಮುಂದಿನ ಜನ್ಮವೊಂದಿದ್ದರೆ ಕರ್ನಾಟಕದಲ್ಲೇ ಹುಟ್ಟುತ್ತೇನೆ ಅನ್ನುವ ಅವರ ಹೃದಯಭಾವ ಕನ್ನಡಿಗರನ್ನು ಭಾವುಕರನ್ನಾಗಿಸುತ್ತಿತ್ತು. ಬಾಲಸುಬ್ರಹ್ಮಣ್ಯಂ ಅವರನ್ನು ಈ ನೆಲ ಸದಾ ಸ್ಮರಿಸುತ್ತದೆ. ಅವರ ಶರೀರ ಹೊರಟು ಹೋದರೂ ಶಾರೀರ ನಮ್ಮ ನಡುವೆ ಸದಾ ಇರುತ್ತದೆ ಎಂದು ಅರವಿಂದ ಕರ್ಕಿಕೋಡಿ ಅಭಿಪ್ರಾಯಪಟ್ಟಿದ್ದಾರೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಎನ್.ಪಿ. ಗಾಂವ್ಕರ್‌ ಇನ್ನಿಲ್ಲ

ಉತ್ತರ ಕನ್ನಡ ಡಿ.ಸಿ.ಸಿ. ಬ್ಯಾಂಕಿನ ಮಾಜಿ ಎಂ.ಡಿ. ,ನಿರ್ಧೇಶಕ ನಾಗೇಶ್‌ ಪಿ.ಗಾಂವ್ಕರ್‌ ಮಂಗಳವಾರ ನಿಧನರಾಗಿದ್ದಾರೆ. ಕರಾವಳಿ ತೀರದಿಂದ ವಲಸೆ ಬಂದು ಶಿರಸಿಯಲ್ಲಿ ನೆಲೆನಿಂತು ಡಿ.ಸಿ.ಸಿ....

ಒಕ್ಕಲಿಗರ ಸಂಘದಿಂದ ಸರ್ಕಾರ ಬೀಳಿಸುವ ಎಚ್ಚರಿಕೆ!

ಜಾತಿ ಗಣತಿ ವರದಿ ಹಿಂಪಡೆಯದಿದ್ದರೆ ಸರ್ಕಾರ ಉಳಿಯಲ್ಲ: ಒಕ್ಕಲಿಗರ ಸಂಘ ಎಚ್ಚರಿಕೆ ಇಂದು ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಚಪ್ಪಗೌಡ...

yakshagana- ಕಲಾ ಸಂಸ್ಕಾರದಿಂದ ಬದುಕಿನ ಮೌಲ್ಯ ವೃದ್ಧಿ:- ಶಂಕರ ಭಟ್

ಸಿದ್ದಾಪುರ:- ಯಕ್ಷಗಾನ ಹಲವು ಕಲೆಗಳ ಸಂಗಮವಾಗಿದ್ದು ದುಷ್ಟ ಶಿಕ್ಷೆ ಶಿಷ್ಟ ರಕ್ಷೆ ಮುಂತಾದ ಅನೇಕ ತತ್ವ – ಸಿದ್ಧಾಂತಗಳು ಇದರಲ್ಲಿ ಅಡಕವಾಗಿವೆ. ಈ ಕಲೆಯ...

ಪೂಜೆ, ಪುನಸ್ಕಾರ ಅಂಬೇಡ್ಕರ್‌ ಸಿದ್ಧಾಂತಕ್ಕೆ ವಿರುದ್ಧ…!

ದೇವರಿಗಿಂತ ಹೆಚ್ಚಾಗಿ ಕೆಲಸ,ಮಾನವೀಯತೆ ನಂಬುತಿದ್ದ ಡಾ. ಬಿ.ಆರ್.‌ ಅಂಬೇಡ್ಕರ್‌ ವೈದಿಕ ಪೂಜೆ, ಪುನಸ್ಕಾರಗಳಂಥ ಕಂದಾಚಾರಗಳನ್ನು ವಿರೋಧಿಸುತಿದ್ದರು. ಅಂಥ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್‌ ಅಂಬೇಡ್ಕರ್‌...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *