a uniqe structure of malnaadu house-ಆರ್.ಆರ್. ಹೆಗಡೆ ಮತ್ತವರ ಐನಕೈ ಭವಂತಿ ಮನೆ

ಸಿದ್ಧಾಪುರದ ಕ್ಯಾದಗಿಯ ಐನಕೈ ಬಹುಪ್ರಸಿದ್ಧ ಗ್ರಾಮ. ಈ ಗ್ರಾಮದ ಅನೇಕರು ಹೊರ ಊರು,ಪರ ರಾಜ್ಯಗಳಿಗೆಲ್ಲಾ ಹೋಗಿ ಶ್ರಮದಿಂದ ಹೆಸರು ಮಾಡಿದ್ದಾರೆ. ಇಂಥ ಐನಕೈನ ವೆಂಕಟರಾಮಯ್ಯ ಎನ್ನುವವರು ಸುಮಾರು ನೂರು ವರ್ಷದ ಕೆಳಗೆ ಆ ಭಾಗದ ಪ್ರಮುಖರು.

ಅವರು ತಮ್ಮ ಬುದ್ಧಿ-ಶ್ರಮ ಬಳಸಿ ಸ್ವಾತಂತ್ರ್ಯಾ ನಂತರ ಸಿದ್ಧಾಪುರ ಮತ್ತು ಕುಮಟಾಗಳನ್ನು ಸಂಪರ್ಕಿಸುವ ಬಿಳಗಿ ಸೇತುವೆ ನಿರ್ಮಾಣಕ್ಕೆ ಕಾರಣವಾದರು. ಈ ಸಮಾಜಮುಖಿ ವೆಂಕಟಸುಬ್ಬಯ್ಯನವರ ಮಗ ರಾಮಪ್ಪ ಹೆಗಡೆ,ಅವರೂ ಜಮೀನ್ಧಾರರಾಗಿ ಅಪ್ಪ. ಮನೆಯ ಹೆಸರು ಉಳಿಸುತ್ತಲೇ ಸಾಮಾಜಿಕ ಕಾರ್ಯಕರ್ತರಾಗಿ ದುಡಿದರು.

ಅವರಿಗೆ ಐದು ಜನ ಗಂಡು ಮಕ್ಕಳು ಇತಿಹಾಸಕಾರ ರಾಜರಾಮ ಹೆಗಡೆ, ಪತ್ರಕರ್ತ ರಂಗಕರ್ಮಿ ರಮಾನಂದ ಹೆಗಡೆ (ಐನಕೈ) ಸೇರಿದ ಻಻ಅನೇಕ ಸಹೋದರರು, ಸಹೋದರಿಯರು, ಸೊಸೆಯಂದಿರು, ಮಕ್ಕಳ ಈ ತುಂಬುಕುಟುಂಬ ಸುಶಿಕ್ಷಿತ ಜನರ ಮನೆ. ಇವರ ಹಳೆಯ ಮನೆ ಭವಂತಿ ಮನೆಯಾಗಿದ್ದು ಮಲೆನಾಡಿನ ಸೋಗೆಮುಚ್ಚಿದ ಬೆಚ್ಚಗಿನ ಮನೆಯಾಗಿದ್ದನ್ನು ನಾವೆಲ್ಲಾ ಕಂಡವರು. ಆನಂತರ ಆರ್.ಆರ್.ಹೆಗಡೆ ಹೊಸಮನೆ ಕಟ್ಟತೊಡಗಿದಾಗ ಭವಂತಿಮನೆಯ ಕಾಲ ಮುಗಿಯಿತು ಎಂದುಕೊಂಡವರೇ ಹೆಚ್ಚು.

ಆದರೆ, ಈಗಿನ ಆಧುನಿಕ ತಂತ್ರಜ್ಞಾನದ ನೂತನ ಗೃಹ ಕೂಡಾ ಹಳೆಯ ಭವಂತಿ ಮನೆಯ ಬಹುತೇಕ ವಿಶೇಶಗಳನ್ನು ಮೇಳೈಸಿಕೊಂಡೇ ನಿರ್ಮಾಣವಾಗಿದೆ. ನಮ್ಮ ಎಂದಿನ ರೂಢಿಯಂತೆ ಐನಕೈ ಮನೆಗೆ ಹೋದಾಗ ಟಿ.ಎಸ್.ಎಸ್. ನಿಂದ ನಿವೃತ್ತರಾದಂತೆ, ಚಿಕ್ಕ ಶಸ್ತ್ರಚಿಕಿತ್ಸೆಯ ನಂತರ ಚೇತರಿಸಿಕೊಂಡವರಂತೆ ಓದಿನಲ್ಲಿ ಮುಳುಗಿದ್ದ ಆರ್.ಆರ್. ಹೆಗಡೆವರನ್ನು ಆಕಸ್ಮಿಕ, ಻಻ಅನಿರೀಕ್ಷಿತ ಎನ್ನುವಂತೆ ಮಾತಿಗೆಳೆದವು. ಹಿರಿಯ ಗೆಳೆಯ ಸುರೇಂದ್ರ ದಫೇದಾರ್ ಚಿತ್ತೀಕರಿಸಿದ ಈ ವಿಡಿಯೋ ಐನಕೈ ಮತ್ತು ಅವರ ಮನೆಯನ್ನು ಪರಿಚಯಿಸಬಹುದೆನ್ನುವ ವಿಶ್ವಾಸದಿಂದ ಇಲ್ಲಿ ಜೋಡಿಸಿದ್ದೇವೆ. ಅಂದಹಾಗೆ… ಹಳೆ ನೆನಪು, ವೈಶಿಷ್ಟ್ಯ ಉಳಿಸಿಕೊಂಡ ಐನಕೈ ಭವಂತಿಮನೆಯ ಉಪಮೆಯೊಂದಿಗೆ ಈ ಕುಟುಂಬದ ಸಾಮಾಜಿಕ ಕೆಲಸ, ಕೊಡುಗೆ ಕೂಡಾ ಪುನರ್ ಮನನಕ್ಕೆ ಯೋಗ್ಯ. ಯಾಕೆಂದರೆ ಸರಿಸುಮಾರು ಒಂದು ಶತಮಾನದ ಹಿಂದಿನಿಂದ ಈ ಭಾಗಕ್ಕೆ ಸಂಪರ್ಕ ರಸ್ತೆ, ಸೇತುವೆ, ಆರೋಗ್ಯ ವ್ಯವಸ್ಥೆಗಳ ಹಿಂದಿನ ಕೈ ಈ ಐನಕೈ. ಈ ಕುಟುಂಬಕ್ಕೆ ಆಕಾಲದಲ್ಲಿ ಬಲಗೈ ಯಂತಿದ್ದವರು ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ದೊಡ್ಮನೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *