ಶ್ರೀಸಾಮಾನ್ಯನ ಕೋಪಕ್ಕೆ ಗುರಿಯಾಗಿರುವ ಮಾಧ್ಯಮ, ಬೇಸರ

ಪ್ರಜಾವಾಣಿ ಬಿಟ್ಟರೆ ಕನ್ನಡದಲ್ಲಿ ಮತ್ತ್ಯಾವ ಪತ್ರಿಕೆಯೂ ಓದಲು ಅರ್ಹವಲ್ಲ ಎಂದು ವಿಶ್ಲೇಶಿಸಿರುವ ಹಿರಿಯ ಪತ್ರಕರ್ತ ಶಶಿಧರ ಭಟ್ ಓದುಗರು ಮನಸ್ಸು ಮಾಡಿದರೆ ಒಳ್ಳೆಯ ಪತ್ರಿಕೆಯನ್ನು ಬೆಳೆಸಬಹದುಎಂದರು. ಸಿದ್ಧಾಪುರ ಬಾಲಭವನದಲ್ಲಿ ನಡೆದ ಆಧಾರ ಸಂಸ್ಥೆ ಆಯೋಜಿಸಿದ್ದ ಬರೆದಂತೆ ಬದುಕಿದ ರವೀಂದ್ರಭಟ್‌ ಬದುಕು ಬರಹ,ಬದ್ಧತೆ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರನ್ನು ಸನ್ಮಾನಿಸಿ ಮಾತನಾಡಿದ ಅವರು ಆಧುನಿಕ ವ್ಯವಸ್ಥೆ ಪರಸ್ಫರರ ಮೇಲೆ ಅನುಮಾನ ಹುಟ್ಟುಹಾಕುತ್ತಿದೆ ಸಾರ್ವಜನಿಕರನ್ನು ನಿರ್ಧೇಶಿಸಬೇಕಿದ್ದ ಮಾಧ್ಯಮಗಳು ಜನಸಾಮಾನ್ಯರ ದೂಷಣೆ,ಕೋಪಕ್ಕೆ ಗುರಿಯಾಗಿರುವುದು ವಿಪರ್ಯಾಸ ಎಂದರು.

ಕಾರ್ಯಕ್ರಮದಲ್ಲಿ ದಿ. ರವೀಂದ್ರಭಟ್‌ ರ ಬದ್ಧತೆ ಬಗ್ಗೆ ಮಾತನಾಡಿದ ಸಮಾಜಮುಖಿ ಕನ್ನೇಶ್‌ ಕೋಲಶಿರ್ಸಿ ಜಿಯೋ ಏಕಸ್ವಾಮ್ಯತ್ವದ ಬಗ್ಗೆ ವಿರೋಧಿಸಿದ್ದ ರವೀಂದ್ರ ಭಟ್‌ ಸ್ಥಿತಪ್ರಜ್ಞೆಯಿಂದ,ಪ್ರಾಮಾಣಿಕವಾಗಿ ಬದ್ಧತೆಯಿಂದ ಸೇವೆ ಸಲ್ಲಿಸಿ ಹೊಸ ಪೀಳಿಗೆಗೆ ಮಾದರಿಯಾಗಿದ್ದರು ಎಂದು ಪ್ರಶಂಸಿಸಿದರು.

O

ರವೀಂದ್ರ ಭಟ್‌ ರ ಬರಹದ ಬಗ್ಗೆ ಮಾತನಾಡಿದ ಪ್ರಜಾವಾಣಿ ಪತ್ರಿಕೆಯ ಸಂಪಾದಕ ರವೀಂದ್ರಭಟ್‌ ಐನಕೈ ಕನ್ನಡದಲ್ಲಿ ಶುದ್ಧವಾಗಿ ಬರೆಯಲು ಬಾರದ ಹೊಸ ಪೀಳಿಗೆಯ ನಡುವೆ ರವೀಂದ್ರಭಟ್‌ ತಾಲೂಕಾ ವರದಿಗಾರರಾಗಿ ಪತ್ರಿಕಾಲಯದಲ್ಲಿ ತಿದ್ದಲು ಅವಕಾಶ ನೀಡದ ಸುಧೀರ್ಘ ಕಾಲ ಪ್ರಜಾವಾಣಿಯ ಪ್ರಮುಖ ವರದಿಗಾರರಾಗಿ ಛಾಪು ಮೂಡಿಸಿದ್ದರು ಎಂದರು.

ಕಾರ್ಯಕ್ರಮಕ್ಕೆ ಪತ್ರಕರ್ತ ದಿವಾಕರ ನಾಯ್ಕ ಸ್ವಾಗತಿಸಿದರು. ಆಧಾರ ಸಂಸ್ಥೆಯ ಅಧ್ಯಕ್ಷ ನಾಗರಾಜ್‌ ನಾಯ್ಕ ಮಾಳ್ಕೋಡು ಅಧ್ಯಕ್ಷತೆ ವಹಿಸಿ ಪ್ರಾಸ್ಥಾವಿಕ ಮಾತನಾಡಿದರು. ಸುರೇಶ್‌ ಮಡಿವಾಳ ನಿರೂಪಿಸಿದರು. ಗಣಪತಿ ಹುಲಿಮನೆ ವಂದಿಸಿದರು.

ಈ ಕಾರ್ಯಕ್ರಮದ ಅಂಗವಾಗಿ ಹಿರಿಯ ಪತ್ರಕರ್ತರಾದ ಶಿವಾನಂದ ಹೊನ್ನೆಗುಂಡಿ ಮತ್ತು ಜಿ.ಜಿ. ಹೆಗಡೆ ಬಾಳಗೋಡು ರನ್ನು ಸನ್ಮಾನಿಸಿ ಗೌರವಿಸಲಾಯಿತು. ರವೀಂದ್ರ ಭಟ್‌ ಬಳಗುಳಿಯವರ ಪುತ್ರ ಕಾರ್ತಿಕ ಉಪಸ್ಥಿತರಿದ್ದರು.

  • ಅಂತರ್ಮುಖಿಯಾದ ನನ್ನ ತಮ್ಮ ಅನೇಕ ವಿಷಯ,ವಿಚಾರಗಳನ್ನು ಅಂತರಂಗದಲ್ಲಿಟ್ಟುಕೊಂಡು ಬೇಯುತ್ತಾ ಬದುಕು ಸಾಗಿಸಿದರು.ಅವರು ನನ್ನ ನಡುವೆ ಸಹೋದರತ್ವಕ್ಕಿಂತ ಸ್ನೇಹಶೀಲತೆ ವಿಶೇಶವಾಗಿತ್ತು.-ಶಶಿಧರ ಭಟ್‌
  • ಮೂರುವರ್ಷ ಅರೆಕಾಲಿಕ ವರದಿಗಾರರಾಗಿ ದುಡಿಯುವುದು ಅಪರೂಪವಾಗಿರುವ ಈ ದಿನಗಳಲ್ಲಿ ಮೂವತ್ತು ವರ್ಷ ತಾಲೂಕಾ ವರದಿಗಾರರಾಗಿ ಸೇವೆ ಸಲ್ಲಿಸಿದ ರವೀಂದ್ರ ಭಟ್‌ ಬಳಗುಳಿ ಅಪರೂಪದ ಸರಳ,ಸಜ್ಜನ ಬದ್ಧತೆಯ ಪತ್ರಕರ್ತರಾಗಿ ಪತ್ರಿಕೆಯ ಆಸ್ತಿಯಾಗಿದ್ದರು.
  • ಈ ಕಾರ್ಯಕ್ರಮ ನನ್ನ ಬರವಣಿಗೆಯ ದಿನಗಳನ್ನು ನೆನಪಿಸಿತು.-ಶಿವಾನಂದ ಹೊನ್ನೆಗುಂಡಿ
  • ವಿ.ಜೆ. ಬಟ್ಟರು ನನ್ನ ಗುರುಗಳಾಗಿದ್ದರು ಹಾಗಾಗಿ ಶಶಿಧರ ಮತ್ತು ರವೀಂದ್ರ ಭಟ್ಟರ ಮೇಲೆ ನನಗೆ ವಿಶೇಶ ಪ್ರೀತಿ ಇತ್ತು.-ಜಿ.ಜಿ. ಹೆಗಡೆ ಬಾಳಗೋಡು

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *