deshpande 75- ೨೫ ರಿಂದ ೭೫ ರ ವರೆಗೆ ಚುರುಕಿನ ನಡಿಗೆ

ಆರ್.ವಿ.ದೇಶಪಾಂಡೆ ರಾಜ್ಯ ರಾಜಕಾರಣದ ಮಹತ್ವದ ಹೆಸರು. ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ-ಮುಂಡಗೋಡು ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಆಯ್ಕೆಯಾಗಿ ವಿಧಾನಸಭೆ ಪ್ರವೇಶಿಸಿದ ಆರ್.ವಿ.ದೇಶಪಾಂಡೆ ತಿರುಗಿ ನೋಡಿದ್ದೇ ಇಲ್ಲ. ಕಾಂಗ್ರೆಸ್‌ ನಿಂದ ಜನತಾದಳ, ಲೋಕಶಕ್ತಿ,ಮರಳಿ ಕಾಂಗ್ರೆಸ್‌ ದೇಶಪಾಂಡೆ ಹೋದ ಕಡೆ ಅಧಿಕಾರ ಬರುತ್ತೋ,ಅಧಿಕಾರ ಅರಸಿ ದೇಶಪಾಂಡೆ ಹೋದಾಗಲೆಲ್ಲಾ ಅವಕಾಶ ದೊರೆಯುತ್ತೋ ಎನ್ನುವುದೇ ಒಗಟು. ಹಳಿಯಾಳದ ಯುವ ವಕೀಲ ರಘುನಾಥ ವಿಶ್ವನಾಥ ದೇಶಪಾಂಡೆ ೨೫ ರ ಹರೆಯದಲ್ಲೇ ರಾಜಕೀಯ ಪ್ರವೇಶಿಸಿದರು ಅಂದಿನಿಂದ ಈವರೆಗೆ ದೇಶಪಾಂಡೆ ೫ ದಶಕಗಳ ಕಾಲ ರಾಜ್ಯ ರಾಜಕಾರಣದ ಭಾಗವಾಗಿ ಈವರೆಗೆ ೮ ಬಾರಿ ಶಾಸಕರಾಗಿ, ಸಚಿವರಾಗಿ, ಪಕ್ಷದ ರಾಜ್ಯ ಅಧ್ಯಕ್ಷರಾಗಿ, ವಿರೋಧಪಕ್ಷದ ನಾಯಕರಾಗಿ ಚಾಪು ಮೂಡಿಸಿದ್ದಾರೆ.

೫೦ ವರ್ಷಗಳ ತಮ್ಮ ರಾಜಕೀಯದ ಸುದೀರ್ಘ ಅವಧಿಯಲ್ಲಿ ಹಲವು ಬಾರಿ ತಾವು ಬಯಸಿದ ಖಾತೆ ಪಡೆದು ಹೆಸರು ಮಾಡಿದ್ದಾರೆ. ಹಳಿಯಾಳ ಕ್ಷೇತ್ರ, ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಅಭಿವೃದ್ಧಿ ಕೆಲಸಗಳ ಕಾಮಗಾರಿ ಫಲಕಗಳ ಮೇಲೆ ತಮ್ಮ ಹೆಸರು ಛಾಪಿಸಿರುವ ದೇಶಪಾಂಡೆ ತಮ್ಮ ಗುರುವಿಗಾಗಿ ತಮ್ಮ ಕ್ಷೇತ್ರ-ಹುದ್ದೆಗಳನ್ನೆಲ್ಲಾ ಬಿಟ್ಟುಕೊಟ್ಟ ಧೀಮಂತ. ಜನತಾದಳದಿಂದ ರಾಮಕೃಷ್ಣ ಹೆಗಡೆಯವರನ್ನು ಉಚ್ಛಾಟಿಸಿದ್ದಾಗ ಗುರು ಹೆಗಡೆಯವರೊಂದಿಗೆ ಜನತಾದಳ ಬಿಟ್ಟುಬಂದ ದೇಶಪಾಂಡೆ ಗುರುವಿಗಾಗಿಮಿಡಿದ ಶಿಷ್ಯ.

ರಾಜಕೀಯ ಗರಡಿಯ ಬಿಗಿಪಟ್ಟುಗಳ ೫೦ ವರ್ಷದ ಸುವರ್ಣ ಅನುಭವಕ್ಕೂ ತಮ್ಮ ಬದುಕಿನ ಅಮೃತಮಹೋತ್ಸವಕ್ಕೂ ಸರಿಯಾಗಿ ೭೫ ವರ್ಷಗಳ ಅವಧಿಯಲ್ಲಿ ೫೦ ವರ್ಷ ನಿರಂತರ ರಾಜಕಾರಣ ಮಾಡಿರುವ ದೇಶಪಾಂಡೆ ಈಗಲೂ ದಣಿದಿಲ್ಲ. ಸರ್ಕಾರ ಬರಲಿ, ಅಧಿಕಾರ ಇರಲಿ, ಇಲ್ಲದಿರಲಿ ಸರ್ಕಾರ, ಪಕ್ಷದ ವಲಯದಲ್ಲಿ ವರ್ಚಸ್ವಿ ನಾಯಕರಾಗಿ ಹೆಸರುಮಾಡಿರುವ ಇವರ ವಿಶೇಶವೆಂದರೆ ಪಕ್ಷ,ಸಿದ್ಧಾಂತಗಳ ಬಗ್ಗೆ ಮಾತನಾಡುತ್ತಾರೆಯೆ ವಿನ: ದೇಶಪಾಂಡೆ ಯಾರ ವಯಕ್ತಿಕ ವಿಚಾರದಲ್ಲಿ ಮಾತನಾಡುವ ವ್ಯಕ್ತಿಯಲ್ಲ. ಜಿಲ್ಲೆಯ ತಂತ್ರಗಾರಿಕೆಯ ಮೇಲ್ವರ್ಗ, ಬಹುಸಂಖ್ಯಾತ ಹಿಂದುಳಿದ ವರ್ಗ ಎಲ್ಲರ ನಡುವೆ ಅಲ್ಪಸಂಖ್ಯಾತನಾಗಿ ಜನಪ್ರತಿನಿಧಿಯಾಗುತ್ತಾ ಎಲ್ಲರ ಅಚ್ಚರಿಗೆ ಕಾರಣವಾದ ದೇಶಪಾಂಡೆ ಈಗ ತಮ್ಮ ಮಗ ಪ್ರಶಾಂತ್‌ ದೇಶಪಾಂಡೆ ಮೂಲಕ ರಾಜಕೀಯ ಪ್ರಯೋಗಕ್ಕಿಳಿಯುವ ಯೋಚನೆಯಲ್ಲಿದ್ದಾರೆ. ನಿರಂತರ ಅಧಿಕಾರ,ಅನುಕೂಲಗಳ ಸುಖ ಕಂಡರೂ ಅದನ್ನು ಅಮಲಾಗಿಸಿಕೊಳ್ಳದ ದೇಶಪಾಂಡೆ ಈಗಲೂ ತಮ್ಮ ಸಂಸ್ಥೆ, ಟ್ರಸ್ಟ ಗಳ ಮೂಲಕ ಸಮಾಜಸೇವೆಯಲ್ಲಿದ್ದಾರೆ. ಕೋವಿಡ್‌ ಅವಧಿ, ಪ್ರವಾಹ ಪರಿಸ್ಥಿತಿಗಳಲ್ಲಿ ಪರ್ಯಾಯ ಸರ್ಕಾರದ ರೀತಿ ಕೆಲಸ ಮಾಡಿರುವ ದೇಶಪಾಂಡೆ ಅಪ್ಪ ಮಕ್ಕಳು ತಮ್ಮ ಕುಟುಂಬದ ೫ ದಶಕಗಳ ರಾಜಕೀಯ ಪರಂಪರೆಯ ಮುಂದುವರಿಕೆಗೆ ಪಣ ತೊಟ್ಟಂತಿದೆ. ಅಸಂಖ್ಯ ವರ್ಷಗಳ ರಾಜಕೀಯ ಶಕ್ತಿಯಿಂದ ತಮ್ಮ ವಲಯ ಬೆಳೆಸಿಕೊಂಡಿರುವ ಮಾಜಿ ಸಚಿವ ದೇಶಪಾಂಡೆ ಮಾರ್ಚ್‌ ೧೬ ರಂದು ತಮ್ಮ ೭೫ ನೇ ಜನ್ಮದಿನ ಆಚರಿಸಿಕೊಳ್ಳುತಿದ್ದಾರೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ...

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

kolsirsi vss issue…part -04 ನಾನೇ ಹೊಣೆ ನಾನೇ ಜವಾಬ್ದಾರಿ ಎಂದ ಸಿಇಒ ಮಾಳವಿ….

ಕೋಲ ಶಿರಸಿ vss ನ ಪ್ರಕರಣ ಹಗರಣದ ಸ್ವರೂಪ ಪಡೆದಿದೆ… ಈ ಅಪರಾ ತಪರಾ ರೂವಾರಿ ಸಿಇಒ/ ಸೆಕ್ರೆಟರಿ ಎಂಬುದು ನಿರ್ವಿವಾದ. ಈ ಬಗ್ಗೆ...

ಕೋಲಶಿರಸಿ vss ಆಡಳಿತ ಸಮೀತಿ & ಸಿಇಒ ವಿರುದ್ಧ ಇಲಾಖೆಗೆ ದೂರು

ಸಿದ್ದಾಪುರ ತಾಲೂಕಿನ ಕೋಲಶಿರಸಿ vss ನಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಹಿಂದೆ ಇರುವ ಹಾಲಿ ಆಡಳಿತ ಮಂಡಳಿ & ಸಿಇಒ/ ಕಾರ್ಯದರ್ಶಿ ಗಳ...

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರ ಜನಪರ ಎನ್ನುವ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಸಿದ್ದಾಪುರ ಕೋಲಶಿರ್ಸಿ ಸೇವಾ ಸಹಕಾರಿ ಸಂಘದ ಬಹುಕೋಟಿ ಹಗರಣದ ನಂತರ ಒಂದೊಂದೇ ಗುಟ್ಟುಗಳು ರಟ್ಟಾಗತೊಡಗಿವೆ. ಸಿದ್ದಾಪುರದ ಪ್ರಮುಖ ಸಹಕಾರಿಗಳು,...

Recommended For You

About the Author: Kanneshwar Naik

Leave a Reply

Your email address will not be published. Required fields are marked *