


ಗ್ರಾಮ ಪಂಚಾಯತ್ ಠರಾವಿಗೂ ವಿಧಾನಸಭೆ, ಲೋಕಸಭೆಯ ತೀರ್ಮಾನಗಳಿಗೂ ಹೆಚ್ಚಿನ ವ್ಯತ್ಯಾಸಗಳೇನಿಲ್ಲ. ಲೋಕಸಭೆ, ವಿಧಾನಸಭೆಗಳ ತೀರ್ಮಾನಗಳಷ್ಟೇ ಮಹತ್ವ ಗ್ರಾಮ ಪಂಚಾಯತ್ ಠರಾವಿಗೂ ಇದೆ.

ಈ ಶಕ್ತಿ ಅರಿತಿರುವ ಸಿದ್ಧಾಪುರ ಹಲಗೇರಿ ಗ್ರಾಮ ಪಂಚಾಯತ್ ಸದಸ್ಯರು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವಾಹನಗಳ ವೇಗಕ್ಕೆ ಕಡಿವಾಣ ಹಾಕಲು ತೀರ್ಮಾನಿಸಿ ಸುದ್ದಿಯಾಗಿದ್ದಾರೆ.
ಸಿದ್ಧಾಪುರ ಹಲಗೇರಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ವಿಶ್ವಪ್ರಸಿದ್ಧ ಜೋಗ ಜಲಪಾತ,ಮಾವಿನಗುಂಡಿ-ಖಾನಾಪುರ ರಾಜ್ಯ ಹೆದ್ದಾರಿಗಳು ಸೇರುತ್ತವೆ. ಈ ಮಾರ್ಗದಲ್ಲಿ ಖಾಸಗಿ, ಸರ್ಕಾರಿ ವಾಹನಗಳ ಓಡಾಟ ವಿಪರೀತ. ಖಾಸಗಿ ವಾಹನಗಳನ್ನು ನಿಯಂತ್ರಿಸುವುದು ಕಷ್ಟ ಯಾಕೆಂದರೆ ಖಾಸಗಿ ವಾಹನಗಳ ಓಡಾಟ ನಿರಂತರವಿದ್ದರೂ ವಾಹನಗಳು ಭಿನ್ನ, ಆದರೆ ರಾ.ರ.ಸಾ.ಸಂ. ಯ ಸ್ಥಿತಿ ಹೀಗಿಲ್ಲ. ಪ್ರತಿದಿನ ನಿರಂತರವಾಗಿ ಓಡಾಡುವ ಈ ವಾಹನಗಳು ಇದೇ ಮಾರ್ಗದಲ್ಲಿ ಚಲಿಸುತ್ತವೆ. ಈ ವಾಹನಗಳ ಅತಿಯಾದ ವೇಗ ಈ ಭಾಗದ ಜನರಿಗೆ ಭಯ ತರಿಸುವಂತಿದ್ದು ರಾ. ರ.ಸಾ.ಸಂ. ಯ ಬಸ್ ಗಳ ವೇಗಕ್ಕೆ ನಿಯಂತ್ರಣ ಹೇರಲು ಹಲಗೇರಿ ಗ್ರಾ.ಪಂ. ಠರಾವು ಮಾಡಿ ರಾಜ್ಯದ ಜನರ ಗಮನ ಸೆಳೆದಿದೆ.


ಉತ್ತರ ಕನ್ನಡ ಜಿಲ್ಲೆಯ ಮೂಲಕ ಹುಬ್ಬಳ್ಳಿ, ಮಂಗಳೂರು ಸೇರಿದಂತೆ ರಾಜ್ಯದ ಅನೇಕ ಪ್ರದೇಶಗಳಿಗೆ ವಾಹನಗಳು ಚಲಿಸುತ್ತವೆ. ಇತ್ತೀಚಿನ ವರ್ಷಗಳಲ್ಲಿ ಶಿರಸಿ-ಕುಮಟಾ ಮತ್ತು ಸಿದ್ಧಾಪುರ-ಕುಮಟಾ ರಸ್ತೆ ಸಮರ್ಪಕವಾಗಿರದೆ ಬಹುತೇಕ ಈ ರಸ್ತೆಗಳ ಮೂಲಕ ಓಡಾಡುವ ವಾಹನಗಳು ಶಿರಸಿ-ಸಿದ್ಧಾಪುರ (ಜೋಗ) ಮಾವಿನ ಗುಂಡಿ, ಹೊನ್ನಾವರ ಮಾರ್ಗದಲ್ಲಿ ಓಡಾಡುತ್ತವೆ. ಈ ವಿದ್ಯಮಾನ ಸಿದ್ಧಾಪುರ ತಾಲೂಕಿಗೆ ಅಪಾಯಕಾರಿಯಾಗಿ ಪರಿಣಮಿಸಿದ್ದು ವಾಹನ ಸಂಚಾರ ನಿ಼ಶೇಧ ಮಾಡಲು ಸಾಧ್ಯವಿಲ್ಲ ಆದರೆ, ಸಾರಿಗೆ ಸಂಸ್ಥೆಯ ವಾಹನಗಳ ವೇಗ ತಗ್ಗಿದರೆ ಅಪಾಯ ಕಡಿಮೆ ಎನ್ನುವ ಹಲಗೇರಿ ಗ್ರಾಮ ಪಂಚಾಯತ್ ಇಂಥದ್ದೊಂದು ಠರಾವು ಮಾಡುವ ಮೂಲಕ ಸಾರಿಗೆ ಸಂಸ್ಥೆಯನ್ನು ಎಚ್ಚರಿಸಿದೆ.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






