ಅಯ್ಯಪ್ಪ ಇಲ್ಲಿದೆ ಉತ್ತರದ ಅಯ್ಯಪ್ಪ….

ಅಯ್ಯಪ್ಪನ ಭಕ್ತರು ಎಲ್ಲಿಲ್ಲ ಹೇಳಿ? ಕೇರಳದ ಶಬರಿಮಲೆ ಅಯ್ಯಪ್ಪ ಬಹುಪ್ರಸಿದ್ಧ ದೇವರು. ಈ ದೇವರ ಭಕ್ತರು ದೇಶ-ವಿದೇಶಗಳಲ್ಲೂ ಕಾಣ ಸಿಗುತ್ತಾರೆ. ವರ್ಷಕ್ಕೊಮ್ಮೆ ವೃತ ಮಾಡಿ ಚಟ ಮರೆತು ಅಯ್ಯಪ್ಪನನ್ನು ಆರಾಧಿಸುವ ಭಕ್ತರು ಮಾಡುವ ವೃತಾನುಷ್ಠಾನಗಳು ಬಹು ಕಠಿಣ. ಅಯ್ಯಪ್ಪ ಮಾಲೆ ಧರಿಸಿದ ಅಯ್ಯಪ್ಪನ ಆರಾಧಕರು ಕಠಿಣ ನೀತಿ-ನಿಯಮ ಪಾಲಿಸುವ ಜೊತೆಗೆ ದೈಹಿಕ ಸುಖ,ಭೋಗಗಳನ್ನೂ ತ್ಯಜಿಸುತ್ತಾರೆ. ಇಂಥ ಅಯ್ಯಪ್ಪ ಮಾಲಾಧಾರಿಗಳು ದೇಶದ ಉದ್ದ-ಅಗಲಗಳಿಂದಲೂ ಪಶ್ಚಿಮದ ಕೇರಳಕ್ಕೆ ತೆರಳಿ ತಮ್ಮ ದೈವೀಭಕ್ತಿ ಪ್ರದರ್ಶಿಸುತ್ತಾರೆ.

ಹೀಗೆ ದೇಶದುದ್ದಗಲದಿಂದಲೂ ದೇಶದ ತುದಿ ಕೇರಳಕ್ಕೆ ಬರುವ ಜನರಿಗೆ ಉತ್ತರ ಕನ್ನಡದಲ್ಲಿ ಒಂದು ಪರ್ಯಾಯ ಶಬರಿಮಲೆ  ನಿರ್ಮಾಣವಾಗಿದೆ. ಶಬರಿಮಲೆ ದೇವಸ್ಥಾನದ ಎಲ್ಲಾ ವೈಶಿಷ್ಯಗಳನ್ನೂ ಹೋಲುವ ಮಾದರಿಯಲ್ಲಿ ನಿರ್ಮಾಣವಾಗಿರುವ ಸಿದ್ದಾಪುರದ ಅಯ್ಯಪ್ಪ ದೇವಾಲಯ ಈಗ ಭಕ್ತರ ಆಕರ್ಷಣೆಯ ಕೇಂದ್ರವಾಗಿದೆ. ಮಿನಿ ಶಬರಿಮಲೆ ಮಾದರಿಯಲ್ಲಿ ನಿರ್ಮಾಣವಾಗಿರುವ ಈ ದೇವಸ್ಥಾನದಲ್ಲಿ ಶಬರಿಮಲೆಯ ಎಲ್ಲಾ ವಿಶೇಶಗಳೂ ಇಲ್ಲಿವೆ. ಮಾಲಾಧಾರಿಗಳು ಹತ್ತುವ ೧೮ ಮೆಟ್ಟಿಲುಗಳ ಜೊತೆಗೆ ಶಬರಿಮಲೆಯ ಆಚಾರ- ವಿಚಾರಗಳ ಸಂಪೂರ್ಣ ರೀತಿ ಇಲ್ಲಿಯ ರಿವಾಜು. ಪ್ರತಿವರ್ಷ ಸಂಕ್ರಾಂತಿಯಲ್ಲಿ ಇಡೀ ವಾರ ಇಲ್ಲಿ ನಡೆಯುವ ಜಾತ್ರೆ ಶಬರಿಮಲೆಯ ನಕಲಿನಂತೆ.


ದೂರದ ಕೇರಳದ ಶಬರಿಮಲೆ ಅಯ್ಯಪ್ಪಸ್ವಾಮಿಯ ದೇವಾಲಯವನ್ನು ಜೋಗ ಸಮೀಪದ ಸಿದ್ದಾಪುರದಲ್ಲಿ ನಿರ್ಮಾಣ ಮಾಡಲು ಅನೇಕ ಕಾರಣಗಳಿವೆ. ಶಬರಿಮಲೆ ಅಯ್ಯಪ್ಪ ದೇವರ ದರ್ಶನ, ವೃತಾಚರಣೆ ಅಷ್ಟು ಸುಲಭ ಸಾಧ್ಯವಲ್ಲ. ಕೇರಳದ ಅಯ್ಯಪ್ಪ ದೇವಾಲಯಕ್ಕೆ ಹೋಗುವ ಅನೇಕರು ಈ ಭಾಗದಿಂದ ಕೇರಳಕ್ಕೆ ತೆರಳುತ್ತಾರೆ. ಅವರಿಗೆ ಅನುಕೂಲವಾಗಲಿ, ಅಷ್ಟು ದೂರ ಕಷ್ಟ ಪಟ್ಟು ಹೋಗಲಾರದ ಇತರರಿಗೆ ಶಬರಿಮಲೆಯ ದರ್ಶನ ಸುಲಭದಲ್ಲಿ ಸಿಗುವಂತಾಗಲಿ ಎಂದು ಯೋಚಿಸಿದ ಸಿದ್ಧಾಪುರದ ಕೆಲವು ಸಮಾನಮನಸ್ಕರ ಸಂಘ ಸ್ಫಷ್ಟ ಕಲ್ಪನೆಯೊಂದಿಗೆ ಈ ದೇವಸ್ಥಾನದ ನಿರ್ಮಾಣದ ಯೋಜನೆ ಪ್ರಾರಂಭಿಸಿದ್ದೇ ಆರಂಭ ನಂತರ ಸಲೀಸಾಗಿ ಕೆಲವೇ ವರ್ಷಗಳಲ್ಲಿ ತಲೆ ಎತ್ತಿ ನಿಂತ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯ ಈಗ ಉತ್ತರ ಕನ್ನಡ, ಉತ್ತರ ಕರ್ನಾಟಕ ಜನರ ನೆಚ್ಚಿನ ತಾಣವಾಗಿದೆ.


ವೃತಾಧಾರಿಗಳಿಗೆ ಊಟ-ವಸತಿಯೊಂದಿಗೆ ದರ್ಶನ ವ್ಯವಸ್ಥೆ ಇರುವ ಇಲ್ಲಿ ಸಾವಿರಾರು ಜನರು ಬಂದು ಹೋಗುತ್ತಾರೆ. ದಕ್ಷಿಣದ ಕಾಶ್ಮೀರ ಎನ್ನುವ ಉತ್ತರ ಕನ್ನಡದಲ್ಲಿ ಈಗ ಉತ್ತರದ ಶಬರಿಮಲೆ ಎಂದು ಸಿದ್ದಾಪುರದ ಈ ಅಯ್ಯಪ್ಪ ದೇಗುಲ ಪ್ರಸಿದ್ಧವಾಗುತ್ತಿದೆ. ಗೋವಾಕ್ಕೆ ಹೋಗುವ ದಕ್ಷಿಣ ಕರ್ನಾಟಕದ ಜನರಿಗೆ. ಮಂಗಳೂರು, ಕೇರಳ,ಧರ್ಮಸ್ಥಳ. ಶೃಂಗೇರಿಗಳಿಗೆಲ್ಲಾ ಹೋಗುವವರಿಗೆ ಜೋಗ ಜಲಪಾತದ ವೀಕ್ಷಣೆಗೆ ಬರುವವರಿಗೆ ಸುಲಭದಲ್ಲಿ ಸಿಗುವ ಈ ಶಬರಿಮಲೆ ಅಯ್ಯಪ್ಪ ದೇವಸ್ಥಾನ ವಿಶೇಶ ಆಕರ್ಷಣೆಯಾಗಿ ಗಮನ ಸೆಳೆಯುತ್ತಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಇಂದಿನ ಸುದ್ದಿ…samajamukhi.net-news-round 11-04-25 ಒಕ್ಕಲಿಗರ ಬೃಹತ್‌ ಸಮಾವೇಶ,ಬೇಸಿಗೆ ಶಿಬಿರ ಪ್ರಾರಂಭ,ಕೃಷಿ ಇಲಾಖೆಯಸೌಲತ್ತು ವಿತರಣೆ,ಬಿ.ಜೆ.ಪಿ.ಗೆ ಜಾಡಿಸಿದ ಭೀಮಣ್ಣ

ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟಿಸಿದ ಬಿ.ಜೆ.ಪಿ. ಕಾಂಗ್ರೆಸ್‌ ನಾಯಕರು ಮತ್ತು ಪಕ್ಷವನ್ನು ಗುರಿಯಾಗಿಸಿ ದೂಷಿಸಿದ್ದಾರೆ. ಬಿ.ಜೆ.ಪಿ. ಮುಖಂಡರ ಬಾಯಿಂದ ಮುಸ್ಲಿಂ ವಿರೋಧದ ಜೊತೆಗೆ...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

ಸ್ತ್ರೀ & ಕವಿತೆ ಇಲ್ಲದಿದ್ದರೆ… ಬದುಕಿಲ್ಲ

ಕವಿತೆ ಜೀವಪರ ಕಾವ್ಯ ಕ್ಷಮಿಸುವ,ಸಹಿಸುವ,ಹೋರಾಟಕ್ಕೆ ಉತ್ತೇಜಿಸುವ ಶಕ್ತಿ ಹೊಂದಿದೆ ಎಂದು ಸಾಹಿತಿ ಕೆ.ಬಿ. ವೀರಲಿಂಗನಗೌಡ ಹೇಳಿದ್ದಾರೆ. ಸಿದ್ಧಾಪುರದ ಕ.ಸಾ.ಪ. ಇಲ್ಲಿಯ ಹೊಸೂರಿನ ಎಂ.ಕೆ. ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *