ಅಭಾವವೇ ವ್ಯಕ್ತಿ, ವಸ್ತು ಪರಿಸ್ಥಿತಿಯ ಮಹತ್ವ ತಿಳಿಸುತ್ತದೆ

ಭಾರತದ ಅಮೇರಿಕಾ ರಾಯಭಾರಿ
ಕಛೇರಿ ಅಧಿಕಾರಿ ರಾಜೇಶ್ ಅಭಿಮತ
ಅಭಾವವೇ ವ್ಯಕ್ತಿ, ವಸ್ತು ಪರಿಸ್ಥಿತಿಯ ಮಹತ್ವ ತಿಳಿಸುತ್ತದೆ
ಶಾಂತಿ-ಸುವ್ಯವಸ್ಥೆಯ ಅಭಾವ ತಲೆದೋರಿದಾಗ ಶಾಂತಿ,ಸುವ್ಯವಸ್ಥೆ,ಸೌಹಾರ್ದತೆಯ ಮಹತ್ವದ ಅರಿವಾಗುತ್ತದೆ ಎಂದು ಅಭಿಪ್ರಾಯ ಪಟ್ಟಿರುವ ನಿಯೋಜಿತ ಭಾರತದ ಅಮೇರಿಕಾ ರಾಯಭಾರಿ ಕಛೇರಿಯ ಅಧಿಕಾರಿ ರಾಜೇಶ್ ನಾಯ್ಕ ಎಲ್ಲರನ್ನೂ ಒಳಗೊಳ್ಳುವ ಭಾರತದ ಸಂವಿಧಾನದ ಸೊಬಗು ಮಹತ್ತರವಾದದ್ದು, ಅದರ ವೈಶಿಷ್ಟ್ಯದಿಂದಾಗಿಯೇ ಭಾರತಕ್ಕೆ ವಿಶ್ವಸಮೂದಾಯದಲ್ಲಿ ಮತ್ತು ಒಳಗಿನ ಎಲ್ಲಾ ಗುಂಪು, ಪ್ರಾಂತ್ಯಗಳಲ್ಲಿ ಶ್ರೇಷ್ಠತೆಯ ಗೌರವವಿದೆ ಎಂದರು.
ಸಿದ್ಧಾಪುರದ ರಾಘವೇಂದ್ರಮಠದ ಸಭಾಭವನದಲ್ಲಿ ನಡೆದ ಸಮ್ಮಿಳನ-ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಭಾರತದ ವೈವಿಧ್ಯತೆ, ವೈಶಿಷ್ಟ್ಯತೆಯ ಜೊತೆಗೆ ಸಮಾನತೆಯ ಆದರ್ಶ ಮುಂದುವರಿದ ದೇಶಗಳಲ್ಲಿಲ್ಲ, ಭಾರತ ಎಲ್ಲರ ಆಸೆ, ಆಶೋತ್ತರಗಳ ಸಾಕಾರಮೂರ್ತಿಯಾಗಿ ಜಗತ್ತಿಗೆ ಶಾಂತಿ-ಸೌಹಾರ್ದತೆ, ಸಮಾನತೆಯ ಸಂದೇಶವಾಹಕವಾಗಿರುವುದು ನಮ್ಮ ಹಿರಿಯರ ದೂರದೃಷ್ಟಿತ್ವ, ಉದಾರತೆಯ ಪ್ರಯತ್ನದಿಂದ ಎಂದರು.
ಸಾಮಾನ್ಯ ಅಸಾಮಾನ್ಯನಾಗಿ ಬೆಳೆಯುವುದು ವೈಯಕ್ತಿಕ ಶ್ರಮದಿಂದಾದರೂ ದೇಶದಲ್ಲಿ ಆ ವಾತಾವರಣ ಇರಬೇಕಾಗುತ್ತದೆ. ಪ್ರತಿಷ್ಠಿತ ಹಿನ್ನೆಲೆಯವರೊಂದಿಗೆ ಬುಡಕಟ್ಟುಗಳು, ಧಮನಿತ ಸಮೂದಾಯಗಳು ಸ್ಫರ್ಧೆಮಾಡುತ್ತಿರುವುದು ಭಾರತ ದೇಶ, ಸಂವಿಧಾನದ ಹೆಗ್ಗಳಿಕೆ. ಈ ವೈಶಿಷ್ಟ್ಯತೆಯ ರಕ್ಷಣೆಗಾಗಿ ಕೆಲಸಮಾಡಲು ಯುವಕರು ಮುಂದೆ ಬರುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದರು.
ಹುಟ್ಟೂರ ಪ್ರೀತಿ, ಗೌರವ ಹತ್ತೂರ ಪ್ರೀತಿ, ಗೌರವಕ್ಕಿಂತ ಮಿಗಿಲು ಎಂದ ಅವರು ಹುಟ್ಟೂರಿನ ಅಭಿವೃದ್ಧಿ ಹೊಸಪೀಳಿಗೆಯ ಕನಸಿಗೆ ಶಕ್ತಿ ತುಂಬುವ ಜವಾಬ್ಧಾರಿಯಿಂದ ಇಂಥ ಕೆಲಸಗಳಾಗುತ್ತಿವೆ ಎಂದರು.
ಇದೇ ಸಂದರ್ಭದಲ್ಲಿ ಕ್ರೀಡೆಗೆ ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸುತ್ತಿರುವ ಸಿದ್ದಾಪುರ ಹೊಸಮಂಜುವಿನ ಗಿರೀಶ್ ಪುಂಡಲೀಕ ನಾಯ್ಕ ಮತ್ತು ಅವರ ಮಾರ್ಗದರ್ಶಕ ಪಿ.ಟಿ. ವಾಲ್ಮಿಕಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಕಾರ್ಯಕ್ರಮವನ್ನು ಸಿದ್ಧಾಪುರದ ಗುರು ಫೌಂಡೇಶನ್,ಬೆಂಗಳೂರಿನ ಗಗನಕುಸುಮ
ಫೌಂಡೇಶನ್,ಬೆಂಗಳೂರಿನ ನಿಭಾ ಫೌಂಡೇಶನ್ ಗಳು ಆಯೋಜಿಸಿದ್ದವು. ತಾಲೂಕಾ ನಾಮಧಾರಿ ನೌಕರರ ಸಂಘ ಮತ್ತು ವಕೀಲ ಎನ್.ಡಿ. ನಾಯ್ಕ ಕುಟುಂಬ ಸಹಕರಿಸಿತ್ತು.

ಕಾಡು ಹಂದಿ ಊರಿಗೆ ಬಂದಿತ್ತ…..ಮಲೆನಾಡಿನಲ್ಲಿ ಹೆಚ್ಚಿದ ಹಂದಿ ಕಾಟ
ಮಲೆನಾಡಿಗೂ ಕಾಡು ಹಂದಿಗೂ ನಂಟು.
ಮಲೆನಾಡಿನ ಪರಿಸರದಲ್ಲಿ ಕಾಡು ಹಂದಿ ವಾಸ್ತವ ಆಗಿರುವುದರಿಂದ ಮಲೆನಾಡಿನ ಸಾಹಿತ್ಯ ಸಂಗೀತ, ಸಿನೆಮಾಗಳಲ್ಲೂ ಕಾಡು ಹಂದಿ ಒಂದು ಪಾತ್ರ. ಯೋಗರಾಜ್ ಭಟ್ ರ ಗಾಳಿಪಟದಲ್ಲಿ ಕಾಡು ಹಂದಿ ಒಂದು ಪಾತ್ರವಾಗಿರುವುದನ್ನು ಮರೆಯುವಂತಿಲ್ಲ.
ತೇಜಸ್ವಿಯವರ ಸಾಹಿತ್ಯದಲ್ಲಂತೂ ಕಾಡು ಹಂದಿ ಪಾತ್ರ, ಮಾಂಸ, ರುಚಿ, ವಾಸನೆಯಾಗಿ ಅಲ್ಲಲ್ಲಿ ಕಂಡು ಬರುತ್ತದೆ. ಮಲೆನಾಡಿನ ಹಂದಿಗಳು ನಿರುಪದ್ರವಿಗಳು ಎನ್ನುತ್ತಾರೆ ಆದರೆ, ಹಂದಿಯ ಗಟ್ಟಿತನ, ಸಿಟ್ಟು, ಹುಂಬತನ ಅದನ್ನು ನೋಡಿದವರಿಗೇ ಗೊತ್ತು. ಮಲೆನಾಡಿನ ಹಂದಿ ಸೋಯಿಬೇಟೆ, ಬಲೆಬೇಟೆ ಹಿಂದೆ ಮರೆಯದ ಮನರಂಜನೆ ಈಗ ಇತಿಹಾಸ.
ಈಗ ಕಾಡು ಹಂದಿ ಸೇರಿದಂತೆ ವನ್ಯ ಮೃಗಗಳ ಬೇಟೆ ನಿಷಿದ್ಧ ಹಾಗಾಗಿ ಕಾಡು ಹಂದಿ ಈಗ ಉಪದ್ರವಿಯಾಗಿ ಬದಲಾಗಿದೆ.
ಚಿತ್ರನಟ ನೀರ್ನಳ್ಳಿ ಗಣಪತಿಯವರ ತೋಟದಲ್ಲಿ ತೆಂಗು-ಬಾಳೆ ಅಡಿಕೆ ನಾಶ ಮಾಡಿದ ಹಂದಿಯ ಉಪಟಳದ ಬಗ್ಗೆ ರಾಘವೇಂದ್ರ ಬೆಟ್ಟಕೊಪ್ಪ ತಮ್ಮ ಬರಹದಲ್ಲಿ ಪ್ರಸ್ಥಾಪಿಸಿದ್ದಾರೆ.
ಇಲ್ಲಿ ಸಿದ್ದಾಪುರದಲ್ಲಿ ರೈತರಿಗೆ ಹಂದಿಗಳು ನೀಡುತ್ತಿರುವ ಉಪಟಳದ ವರದಿಯಿದೆ. ಕಾಡುಹಂದಿ ವರ್ಷಪೂರ್ತಿ ರೈತರಿಗೆ ಕೊಡುವ ಉಪಟಳಕ್ಕೆ ರೈತರು ಕಂಗಾಲಾಗಿದ್ದಾರೆ. ಕಾಡುಹಂದಿ ಮತ್ತು ಕಾಡುಕೋಣಗಳು, ಕೋಡಗಗಳ ಉಪಟಳದಿಂದ ಬೇಸತ್ತು ಕೃಷಿ ಮಾಡುವುದೇ ಬೇಡ ಎನ್ನುವ ತೀರ್ಮಾನಕ್ಕೆ ಬಂದ ರೈತರೂ ಇದ್ದಾರೆ.
ಮಲೆನಾಡಿನ ಕೋತಿ, ಕಾಡುಹಂದಿ, ಕಾಡುಕೋಣಗಳಿಂದ ಮಲೆನಾಡು, ಕರಾವಳಿ ತಾಲೂಕುಗಳಲ್ಲಿ ಕೊಟ್ಯಂತರ ಹಾನಿ ಸಂಭವಿಸುತ್ತಿದ್ದರೂ ಅರಣ್ಯ ಇಲಾಖೆ ನೂರು, ಸಾವಿರ ಲೆಕ್ಕದಲ್ಲಿ ಪರಿಹಾರ ನೀಡಿ ಕೈತೊಳೆದುಕೊಳ್ಳುತ್ತಿದೆ.
ನಾವೇ ಉತ್ತಮರು ಎಂದು ಒಂದು ಅವಧಿಗೆ ಎರಡ್ಮೂರು ಮುಖ್ಯಮಂತ್ರಿಗಳಾಗುವವರು, ಹೊಸ ಸಂಪುಟ, ಸಚಿವಾಲಯದ ಸದಸ್ಯರಾಗುವವರು ಮಲೆನಾಡಿನ ಈ ಸಮಸ್ಯೆ ಕೇಳಲೇಬೇಕಾದ ಅನಿವಾರ್ಯತೆ ಈಗ ಸೃಷ್ಟಿಯಾಗಿದೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ...

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

kolsirsi vss issue…part -04 ನಾನೇ ಹೊಣೆ ನಾನೇ ಜವಾಬ್ದಾರಿ ಎಂದ ಸಿಇಒ ಮಾಳವಿ….

ಕೋಲ ಶಿರಸಿ vss ನ ಪ್ರಕರಣ ಹಗರಣದ ಸ್ವರೂಪ ಪಡೆದಿದೆ… ಈ ಅಪರಾ ತಪರಾ ರೂವಾರಿ ಸಿಇಒ/ ಸೆಕ್ರೆಟರಿ ಎಂಬುದು ನಿರ್ವಿವಾದ. ಈ ಬಗ್ಗೆ...

ಕೋಲಶಿರಸಿ vss ಆಡಳಿತ ಸಮೀತಿ & ಸಿಇಒ ವಿರುದ್ಧ ಇಲಾಖೆಗೆ ದೂರು

ಸಿದ್ದಾಪುರ ತಾಲೂಕಿನ ಕೋಲಶಿರಸಿ vss ನಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಹಿಂದೆ ಇರುವ ಹಾಲಿ ಆಡಳಿತ ಮಂಡಳಿ & ಸಿಇಒ/ ಕಾರ್ಯದರ್ಶಿ ಗಳ...

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರ ಜನಪರ ಎನ್ನುವ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಸಿದ್ದಾಪುರ ಕೋಲಶಿರ್ಸಿ ಸೇವಾ ಸಹಕಾರಿ ಸಂಘದ ಬಹುಕೋಟಿ ಹಗರಣದ ನಂತರ ಒಂದೊಂದೇ ಗುಟ್ಟುಗಳು ರಟ್ಟಾಗತೊಡಗಿವೆ. ಸಿದ್ದಾಪುರದ ಪ್ರಮುಖ ಸಹಕಾರಿಗಳು,...

Recommended For You

About the Author: Kanneshwar Naik

Leave a Reply

Your email address will not be published. Required fields are marked *