breaking news- ಹಿಂದಿ ಸಾಧಕರಿಗೆ ಸನ್ಮಾನ,ಕನ್ನಡಿಗರಿಗೆ ಅವಮಾನ visit- samajamukhi.net

breaking news-
visit- samajamukhi.net
ಹಿಂದಿ ಸಾಧಕರಿಗೆ ಸನ್ಮಾನ,ಕನ್ನಡಿಗರಿಗೆ ಅವಮಾನ
ಹಿಂದಿ ವಿವಾದ ಸ್ವಾರ್ಥಿಗಳ ಯತ್ನ
-ವಿಧಾನಸಭಾಧ್ಯಕ್ಷರು
ಕಾಗೇರಿ ಕಾಂಗ್ರೆಸ್ ವಿರುದ್ಧವೋ?
ಕನ್ನಡ ಸಂಘಟನೆಗಳ ವಿರುದ್ಧವೋ

ಹಿಂದಿ ವಿವಾದ ಸ್ವಾರ್ಥಿಗಳ ಯತ್ನ
-ವಿಧಾನಸಭಾಧ್ಯಕ್ಷರು
ಕಾಂಗ್ರೆಸ್ ವಿರುದ್ಧವೋ?
ಕನ್ನಡ ಸಂಘಟನೆಗಳ ವಿರುದ್ಧವೋ
ಹಿಂದಿ ದಿವಸ ಆಚರಣೆ ಮತ್ತು ಹಿಂದಿ ಶಿಕ್ಷಕರ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಮ್ಮ ಭಾಷಣದುದ್ದಕ್ಕೂ ಹಿಂದಿ, ಹಿಂದಿ ವಿಚಾರದ ವಿವಾದದ ಬಗ್ಗೆ ಮಾತನಾಡುತ್ತಾ ಬಿ.ಜೆ.ಪಿ. ನಿಲುವನ್ನು ಸಮರ್ಥಿಸಿದರು. visit-samajamukhi.net
ನಂಬಿಕೆ, ಭಾಷೆ, ಗಡಿ, ನೀರು ಆಹಾರದ ಹಿನ್ನೆಲೆಯಲ್ಲಿ ಸ್ವಾರ್ಥಕ್ಕಾಗಿ ವಿವಾದ ಎಬ್ಬಿಸುತ್ತಾರೆ ಎಂದು ದೂರಿದರು. ವಿಧಾನಸಭಾಧ್ಯಕ್ಷರು ಪಕ್ಷಾತೀತ ನಿಲುವು ತಾಳದೆ ಲೋಪ ಎಸಗುವ ಜೊತೆಗೆ ಹಿಂದಿ ಭಾಷೆಯ ವಿವಾದಕ್ಕೆ ನೆಲ, ಜಲ, ಗಡಿ, ಆಹಾರ,ಭಾಷೆ ಬಳಸಿಕೊಳ್ಳುವ ಕೆಲವು ಸ್ವಾರ್ಥಿಗಳು ಕಾರಣ ಎಂದು ಕಾಂಗ್ರೆಸ್ ಅಥವಾ ರಾಜ್ಯದ ಕನ್ನಡ ಸಂಘಟನೆಗಳನ್ನು ಹೆಸರು ಹೇಳದೆ ತಿವಿದರು.
ವಿಧಾನಸಭೆಯ ಅಧ್ಯಕ್ಷರಾಗಿ ಕಾಂಗ್ರೆಸ್ ಅಥವಾ ಕನ್ನಡ ಸಂಘಟನೆಗಳ ಅಭಿಮಾನ, ಕನ್ನಡಪರ ಹೋರಾಟವನ್ನು ಸ್ವಾರ್ಥಿಗಳ ಪ್ರಯತ್ನ ಎಂದ ಹೇಳಿಕೆಯನ್ನು ಕೆಲವು ಮಾಧ್ಯಮ ಪ್ರತಿನಿಧಿಗಳು ದಾಖಲೆಮಾಡಿಕೊಂಡಿದ್ದು ಇದು ವಿವಾದವಾಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.
ಸಿದ್ಧಾಪುರ,ಸೆ.17- ಪ್ರಾದೇಶಿಕ ಭಾಷೆಗಳಿಗೆತೊಂದರೆಯಾಗುತ್ತಿರುವುದು ಇಂಗ್ಲೀಷ್‍ನಿಂದಲೇ ಹೊರತು ಹಿಂದಿಯಿಂದಲ್ಲ ಎಂದು ಬಿ.ಜೆ.ಪಿ. ಅಭಿಪ್ರಾಯವನ್ನು ಪುನರುಚ್ಚರಿಸಿರುವ ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ವಿವಿಧತೆಯಲ್ಲಿ ಏಕತೆ ಕಾಣುವ ಸಂವಿಧಾನದ ಆಶಯದಂತೆ ರಾಷ್ಟ್ರದಲ್ಲಿ ಆಡಳಿತ ಭಾಷೆಯಾಗಿ ಹಿಂದಿ, ರಾಜ್ಯದಲ್ಲಿ ಕನ್ನಡ ಅಸ್ಥಿತ್ವದಲ್ಲಿವೆ ಇವುಗಳಿಗಿಂತ ಪ್ರತಿಯೊಬ್ಬರಿಗೂ ಇರುವ ಮಾತ್ರ ಭಾಷೆಯ ಸ್ಥಾನ ದೊಡ್ಡದು ಎಂದು ಪ್ರತಿಪಾದಿಸಿದ್ದಾರೆ.
ಸಿದ್ಧಾಪುರದ ಶಂಕರಮಠ ಸಭಾಭವನದಲ್ಲಿ ನಡೆದ ಹಿಂದಿ ದಿನ ಆಚರಣೆ ಮತ್ತು ಹಿಂದಿ ಭಾಷಾ ಶಿಕ್ಷಕರ ಜಿಲ್ಲಾಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು ಮಾತೃಭಾಷೆಗೆ ಮೊದಲ ಆದ್ಯತೆ ನಂತರ ರಾಷ್ಟ್ರದ ಆಡಳಿತ ಭಾಷೆಗೂ ಗೌರವ ನೀಡಬೇಕು ಎಂದರು.
ವಿವಾದ ಯಾವುದೇ ವಿಷಯಕ್ಕೂ ಮಾಡಬಹುದು. ಇಂಗ್ಲೀಷ ವ್ಯಾಮೋಹ ಬೆಳೆಸಿಕೊಂಡವರು ಹಿಂದಿ ವಿಷಯದಲ್ಲಿ ವಿವಾದ ಮಾಡುವುದೇಕೆ? ಎಂದು ಪ್ರಶ್ನಿಸಿದ ಕಾಗೇರಿ ಗಡಿ,ನೀರು, ಭಾಷೆ, ಆಹಾರ, ನಂಬಿಕೆ ಗಳ ಹಿನ್ನೆಲೆಯಲ್ಲಿ ಸ್ವಾರ್ಥ ಸಾಧಿಸಿಕೊಳ್ಳುವವರು ವಿವಾದ ಮಾಡುತಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಹಿಂದಿ ಭಾಷೆಯ ಬೆಳವಣಿಗೆಗೆ ಸೇವೆ ಸಲ್ಲಿಸಿದ ಕೆಲವು ಪ್ರಮುಖರನ್ನು ಸನ್ಮಾನಿಸಿ ಗೌರವಿಸಲಾಯಿತು.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *