ಹುಷಾರ್……. ಮದುವೆ, ಕಾರ್ಯಕ್ರಮಗಳಿಂದ ಕೋವಿಡ್ ವಿಸ್ತರಣೆ, ಇದು ಕರೋನಾ ಸಲಹೆ-ಮದುವೆ ಮನೆಯಲ್ಲಿ ನಿಯಮ ಉಲ್ಲಂಘಿಸಿದ್ದಕ್ಕೆ ಬಿದ್ದ ಕೇಸ್ ಗಳು

ದೇಶವನ್ನು ತಲ್ಲಣಗೊಳಿಸಿರುವ ಕೋವಿಡ್19ಅನೇಕರನ್ನು ಬಲಿ ಪಡೆದಿದೆ. ರಾಜ್ಯದಾದ್ಯಂತ ವ್ಯಾಪಕವಾಗಿ ವಿಸ್ತ ರಿಸುತ್ತಿರುವ ಕರೋನಾ ಅನೇಕರನ್ನು ಬಲಿ ಪಡೆದಿದೆ. ಮಾರಣಾಂತಿಕವಾಗಿ ವ್ಯಾಪಿಸುತ್ತಿರುವ ಕರೋನಾ ವಿಸ್ತರಣೆ ಹಿಂದೆ ಮದುವೆ, ಹಬ್ಬ, ಕಾರ್ಯಕ್ರಮಗಳ ಪಾತ್ರ ಪ್ರಮುಖವಾಗಿದೆ. ಮಡಿಕೇರಿಯಿಂದ ಕಾರವಾರದವರೆಗೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕರೋನಾ ವಿಸ್ತರಿಸು ತ್ತಿರುವ ಹಿಂದೆ ಚುನಾವಣೆ,ಮದುವೆ, ಮುಂಜಿ ಸೇರಿದ ಪಾರ್ಯಕ್ರಮಗಳೇ ಪ್ರಮುಖ ಪಾತ್ರ ಎನ್ನುವುದನ್ನು ಸಮೀಕ್ಷೆಗಳು ಸಾಬೀತುಮಾಡಿವೆ.

ಶಿರಸಿ ಬನವಾಸಿ ಭಾಗದ ಕೆಲವು ಮದುವೆಗಳಲ್ಲಿ ಪಾಲ್ಗೊಂಡವರಲ್ಲಿ ಬಹುತೇಕ ಜನರಲ್ಲಿ ಕೋವಿಡ್ ಪತ್ತೆಯಾಗಿರುವುದಕ್ಕೆ ನಿದರ್ಶನಗಳಿವೆ. ಶಿರಸಿ-ಸಿದ್ಧಾಪುರ ಸಾಗರ ಸೇರಿದ ಮಲೆನಾಡು ಭಾಗಗಳಲ್ಲಿ, ಕರಾವಳಿ, ಬಯಲುಸೀಮೆಗಳಲ್ಲೂ ಜನ ಸೇರುವ ಕಾರ್ಯಕ್ರಮಗಳಿಂದಲೇ ಕರೋನಾ ವಿಸ್ತರಿಸುತ್ತಿರುವ ಬಗ್ಗೆ ತಜ್ಞರು ಎಚ್ಚರಿಸಿದ್ದಾರೆ.

ಕಳೆದ ವರ್ಷದ ಕರೋನಾ ಮೊದಲ ಅವಧಿಯಲ್ಲಿ ಜನರಲ್ಲಿ ಭಯ, ಆತಂಕಗಳಿದ್ದವು. ಸರ್ಕಾರಗಳೂ ಕೂಡಾ ವಿಳಂಬವಾಗಿಯಾದರೂ ಸಂಪೂರ್ಣ ಲಾಕ್ ಡೌನ್ ಮಾಡಿದ್ದುದು ಕರೋನಾ ಹಿಮ್ಮೆಟ್ಟಿಸಲು ಸಹಕಾರಿಯಾಗಿತ್ತು. ಈ ವರ್ಷ ಕರೋನಾ ರುದ್ರ ನರ್ತನ, ಸಾವು- ನೋವುಗಳ ಮಧ್ಯೆ ಜನರ ನಿರ್ಲಕ್ಷ-ಉಪೇಕ್ಷೆ ಎದ್ದು ಕಾಣುತ್ತಿದೆ. ಮದುವೆ, ಹಬ್ಬ-ಜಾತ್ರೆಗಳಲ್ಲಿ ಪಾಲ್ಗೊಂಡವರು ಕರೋನಾ ಸೋಂಕಿತರಾಗುತ್ತಿರುವುದು ಈಗಿನ ವಿದ್ಯಮಾನಕ್ಕೆ ಉದಾಹರಣೆ.

ಅನಾವಶ್ಯಕ ಭಯ- ಕರೋನಾ ಬರದಂತೆ ಜಾಗೃತಿ ವಹಿಸುವುದು, ಮುನ್ನೆಚ್ಚರಿಕೆ ವಹಿಸುವುದು ಅಪೇಕ್ಷಣೀಯ ಆದರೆ ಕರೋನಾ ಬಾಧಿತರನ್ನು ಅಸ್ಪೃಶ್ಯರಂತೆ ನೋಡುವುದು ಸಮಾಜದ ಸಾಮಾಜಿಕ ಕ್ಷೋಭೆಯಾಗಿ ಕಾಣುತ್ತಿದೆ. ಆಸ್ಫತ್ರೆಗಳಲ್ಲಿ ಕರೋನಾ ಬಾಧಿತರಿಗೆ ಸೇವೆ ಮಾಡಲು ಹಿಂಜರಿಯುವುದು, ಮೃತ ಕರೋನಾ ಸೋಂಕಿತರನ್ನು ಅಂತ್ಯಸಂಸ್ಕಾರ ಮಾಡಲು ಸಂಬಂಧಿಗಳೇ ಹಿಂದೇಟು ಹಾಕುವುದು ಸೇರಿದಂತೆ ಅನೇಕ ರಗಳೆ, ಅಸಹ್ಯಗಳಿಗೆ ಈಗಿನ ಕರೋನಾ ಭಯ ಕಾರಣವಾಗುತ್ತಿದೆ. ಆದರೆ ಅನುಭವಿಗಳು, ಶುಸ್ರುಕಿಯರು, ಕರೋನಾ ಬಾಧಿತರ ಚಿಕಿತ್ಸೆ ಮಾಡುತ್ತಿರುವ ಜನರು, ವೈದ್ಯರು, ಸ್ವಯಂ ಸೇವಕರು ಕರೋನಾ ಬಾಧಿತರಿಗೆ ನೆರವು ನೀಡುತಿದ್ದು ಮುನ್ನೆಚ್ಚರಿಕೆ, ಮುಂಜಾಗೃತೆ, ಕರೋನಾ ನೀತಿ-ನಿಯಮ, ಶಿಸ್ತು ಪಾಲನೆ ಗಳಿಂದ ಕರೋನಾ ಬಾಧಿತರ ಜೊತೆಗಿದ್ದೂ ಕರೋನಾ ಬರದಂತೆ ಸುರಕ್ಷಿಯವಾಗಿರಬಹುದೆಂಬುದನ್ನೂ ಲಕ್ಷಾಂತರ ಜನರು ನಿರೂಪಿಸಿದ್ದಾರೆ.

ಮದುವೆಯಲ್ಲಿ ಕೋವಿಡ್ ನಿಯಮ ಉಲ್ಲಂಘನೆ: ಹಾಸ್ಯನಟಿ ಸುಗಂಧ ಮಿಶ್ರಾ, ಇತರರ ವಿರುದ್ಧ ಕೇಸ್ ದಾಖಲು

ಹಾಸ್ಯನಟಿ ಸುಗಂಧ ಮಿಶ್ರಾ ಅವರು ಕಳೆದ ವಾರ ಇಲ್ಲಿನ ರೆಸಾರ್ಟ್‌ ವೊಂದರಲ್ಲಿ ಹಾಸ್ಯನಟ ಸಂಕೇತ್ ಭೋಸಲೆ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಮದುವೆ ಸಮಾರಂಭದಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿದ….

sugandh

ಫಗ್ವಾರಾ: ಹಾಸ್ಯನಟಿ ಸುಗಂಧ ಮಿಶ್ರಾ ಅವರು ಕಳೆದ ವಾರ ಇಲ್ಲಿನ ರೆಸಾರ್ಟ್‌ ವೊಂದರಲ್ಲಿ ಹಾಸ್ಯನಟ ಸಂಕೇತ್ ಭೋಸಲೆ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಮದುವೆ ಸಮಾರಂಭದಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ನಟಿ ಹಾಗೂ ಇತರರ ವಿರುದ್ಧ ಕೇಸ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮದುವೆಯಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿ ಹೆಚ್ಚಿನ ಜನರು ಭಾಗವಹಿಸಿದ ವಿಡಿಯೋ ವೈರಲ್ ಆದ ನಂತರ ಸುಗಂಧ ಮಿಶ್ರಾ ಹಾಗೂ ವರನ ಕಡೆಯವರು, ರೆಸಾರ್ಟ್‌ ಮಾಲೀಕರು ಮತ್ತು ಮದುವೆಯಲ್ಲಿ ಭಾಗವಹಿಸಿದವರ ವಿರುದ್ಧ ಬುಧವಾರ ರಾತ್ರಿ ಪ್ರಕರಣ ದಾಖಲಿಸಲಾಗಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಪರಮ್‌ಜಿತ್ ಸಿಂಗ್ ಹೇಳಿದ್ದಾರೆ.

https://imasdk.googleapis.com/js/core/bridge3.453.0_en.html#goog_181582685

ಏಪ್ರಿಲ್ 26 ರಂದು ಈ ಮದುವೆ ಸಮಾರಂಭ ನಡೆದಿತ್ತು.

ಭಾರತೀಯ ದಂಡ ಸಂಹಿತೆ ಮತ್ತು ವಿಪತ್ತು ನಿರ್ವಹಣಾ ಕಾಯ್ದೆಯ ಸೆಕ್ಷನ್ 188 ಅಡಿಯಲ್ಲಿ ಕೇಸ್ ದಾಖಲಾಗಿದೆ ಎಂದು ಸಿಂಗ್ ತಿಳಿಸಿದ್ದಾರೆ.

ಜಲಂಧರ್ ಮೂಲದ ಮಿಶ್ರಾ ಹಾಗೂ ಮಹಾರಾಷ್ಟ್ರ ಮೂಲದ ಭೋಸಲೆ ಇಬ್ಬರೂ ‘ದಿ ಕಪಿಲ್ ಶರ್ಮಾ ಶೋ’ ಮೂಲಕ ಖ್ಯಾತಿ ಗಳಿಸಿದ್ದರು. (kpc)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *