ಕಾನಗೋಡು ಗ್ರಾ.ಪಂ. ಸದಸ್ಯ ದಿನೇಶ್‌ ನಾಯ್ಕ ಮೃತ್ಯು & ಸ್ಪೀಕರ್ ಕಾಗೇರಿ ಗರಂ ಆದದ್ದೇಕೆ?

ಅಂಬೇಡ್ಕರ್ ಫೋಟೋ ವಿಚಾರ: ವಿಧಾನಸಭೆಯಲ್ಲಿ ಗರಂ ಆದ ಸ್ಪೀಕರ್ ಕಾಗೇರಿ!

ವಿಧಾನಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಗರಂ ಆದ ಘಟನೆ ಇಂದು ನಡೆಯಿತು. ನಿಯಮಾವಳಿಗಳ ಪ್ರಕಾರ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮಧ್ಯಾಹ್ನದ ನಂತರ ಮಾತನಾಡಬೇಕಿತ್ತು. 

Kageri

ಬೆಳಗಾವಿ: ವಿಧಾನಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಗರಂ ಆದ ಘಟನೆ ಇಂದು ನಡೆಯಿತು. ನಿಯಮಾವಳಿಗಳ ಪ್ರಕಾರ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮಧ್ಯಾಹ್ನದ ನಂತರ ಮಾತನಾಡಬೇಕಿತ್ತು. 

ಆದರೆ, ಶಾಸಕ ಅನ್ನದಾನಿ ಅವರು, ಸಭೆಯಲ್ಲಿ ಎದ್ದು ನಿಂತು ಅಂಬೇಡ್ಕರ್ ಅವರ ವಿಚಾರ ಮಾತನಾಡಲು ಆರಂಭಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಸಭಾಧ್ಯಕ್ಷ ಕಾಗೇರಿ ಅವರು, ನೀವು ಯಾವಾಗ ವಿಷಯವನ್ನು ಪ್ರಸ್ತಾಪಿಸಬೇಕೆಂಬುದನ್ನು ಸ್ಪೀಕರ್ ಆಗಿ ನಾನು ನಿರ್ಧಾರ ಮಾಡುತ್ತೇನೆ. ನೀವು ಯಾವಾಗ ಬೇಕಾದ್ರೆ ಎದ್ದು ನಿಂತು ಪ್ರಶ್ನೆ ಕೇಳಲು ಪ್ರಾರಂಭಿಸಿದರೆ ಸಭೆ ನಿಯಮಾವಳಿ ಪ್ರಕಾರ ನಡೆಯಬೇಕೋ.. ಇಲ್ಲೋ ಮನಸೋ ಇಚ್ಛೆ ನಡೆಯಬೇಕು ಅಂತಾ ಪ್ರಶ್ನೆ ಮಾಡಿದರು.

ನೀವು ಹೇಳಿದ ಹಾಗೇ ನಡೆಯಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಅವರು ಬೆಳೆ ಹಾನಿ ಬಗ್ಗೆ ಈಗ ಮಾತನಾಡುತ್ತಾರೆ. ನೀವು ಕುಳಿತುಕೊಳ್ಳಿ ಎಂದು ಅನ್ನದಾನಿ ಅವರನ್ನು ತಡೆಯಲು ಯತ್ನಿಸಿದರು. ಆದರೆ ಶಾಸಕ ಅನ್ನದಾನಿ ಅವರು ಕುಳಿತುಕೊಳ್ಳಲೇ ಇಲ್ಲ. ನೀವು ಯಾವ ವಿಷಯವನ್ನು ಪ್ರಸ್ತಾಪಿಸಬೇಕು ಎನ್ನುತ್ತಿದ್ದಿರೋ ಅದಕ್ಕೆ ಅವಕಾಶ ನೀಡಿಲ್ಲ. ಇದಕ್ಕೆ ಮುಂಚಿತವಾಗಿ ಅವಕಾಶ ಪಡೆದು ಪ್ರಸ್ತಾಪಿಸಬೇಕಾಗುತ್ತದೆ.

ಸಭಾಧ್ಯಕ್ಷರು ಶಾಂತಿ, ಸಮಾಧಾನದಿಂದ ಹೇಳಿದರೂ ಶಾಸಕರು ಸುಮ್ಮನಾಗಲಿಲ್ಲ. ಇದರಿಂದ ಆಕ್ರೋಶಗೊಂಡ ಸಭಾಧ್ಯಕ್ಷರು ಸಾವಿರ ಸಲ ಹೇಳಿದ್ದೇನೆ. ನಾನು ಅಶಿಸ್ತು ಸಹಿಸಲ್ಲ ಎಂದರು. ಒಂದು ವೇಳೆ ಅಶಿಸ್ತು ಮುಂದುವರಿಸಿದರೆ ಒಂದು ಹೆಜ್ಜೆ ಮುಂದಕ್ಕೆ ಹೋಗಬೇಕಾಗುತ್ತದೆ. ಅನ್ನದಾನಿ ಅವರೇ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದ್ದೀರಿ. ಸದನಕ್ಕೆ ಘನತೆ, ಗೌರವ ಇದೆ ಅನ್ನೋದು ಗೊತ್ತಿಲ್ವೇ ಎಂದು ಸಭಾಧ್ಯಕ್ಷರು ಪ್ರಶ್ನೆ ಮಾಡಿದರು.

ನಿಮ್ಮ ಮುಂದೆ ಚಿಕ್ಕವರಾಗಿ ಕೈ ಮುಗಿದು ಹೇಳುತ್ತೇನೆ. ಯಾವುದೇ ವಿಷಯ ಪ್ರಸ್ತಾಪಿಸಬೇಕಾದರೆ ನೀವು ನಮ್ಮೊಂದಿಗೆ ಚರ್ಚಿಸಿ ಪ್ರಸ್ತಾಪಿಸಬೇಕಾಗುತ್ತದೆ. ನೀವು ಯಾವ ವಿಷಯವನ್ನು ಪ್ರಸ್ತಾಪಿಬೇಕೆಂದಿದ್ದರೊ ಆ ವಿಚಾರದ ಬಗ್ಗೆ ನಾವು ಅಷ್ಟೇ ಗಂಭೀರವಾಗಿದ್ದೇವೆ. ನಿಮ್ಮ ವಿಚಾರಕ್ಕೆ ಸದನ ಬದ್ಧವಾಗಿದೆ ಎಂದು ಸಭಾಧ್ಯಕ್ಷರು ಹೇಳಿದರು. ಅಂಬೇಡ್ಕರ್ ಫೋಟೋ ಹಾಕಲು ಯಾವುದೇ ವಿವಾದ ಇಲ್ಲ. ಉಳಿದ ಯಾವ ಫೋಟೋಗಳನ್ನು ಹಾಕಬೇಕೆಂಬುದರ ಮಾಹಿತಿ ಕಲೆ ಹಾಕಲಾಗುತ್ತದೆ. ಹಾಗೂ ಅಂಬೇಡ್ಕರ್ ಅವರ ಭಾವಚಿತ್ರವನ್ನು ಬೆಂಗಳೂರಿನಂತೆ ಹಾಕಲಾಗುವುದು ಎಂದು ಸಭಾಧ್ಯಕ್ಷ ಕಾಗೇರಿ ಹೇಳಿದಾಗ ಶಾಸಕ ಅನ್ನದಾನಿ ಸುಮ್ಮನಾದರು. (kpc)

ಶಿರಸಿ ಕಾನಗೋಡು ಗ್ರಾಮ ಪಂಚಾಯತ್‌ ಸದಸ್ಯ ದಿವಾಕರ ನಾಯ್ಕ ಮಂಗಳವಾರ ಸಂಜೆವೇಳೆ ಕುಮಟಾದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. ಇವರ ಸಾವಿಗೆ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಭೀಮಣ್ಣ ನಾಯ್ಕ ಸಂತಾಪ ವ್ಯಕ್ತಪಡಿಸಿದ್ದಾರೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *