ಗಮನಸೆಳೆದ ಅಯ್ಯಪ್ಪ ಜಾತ್ರೆಯ ಅಂಬಾರಿ

ಜಾತ್ರೆ,ಹಬ್ಬಗಳು ಪ್ರತಿ ಊರಿನ ವಿಶೇಶಗಳು. ದಿನದ ಜಂಜಡದಲ್ಲಿರುವ ಜನರ ಮನೋರಂಜನೆ,ಉತ್ಸಾಹಕ್ಕೆ ಹಬ್ಬ,ಜಾತ್ರೆಗಳು ನೆರವಾಗುತ್ತವೆ. ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದ ಅಯ್ಯಪ್ಪನ ವಾರ್ಷಿಕ ಜಾತ್ರೆ ಇಂಥ ವಿಶೇಶಗಳಿಗೆ ಒಂದು ಉದಾಹರಣೆ. ಶಬರಿಮಲೆ ಅಯ್ಯಪ್ಪನ ದೇವಸ್ಥಾನದ ಮಾದರಿಯಲ್ಲಿ ಸಿದ್ಧಾಪುರದ ಬಾಲಿಕೊಪ್ಪದ ಬೆಟ್ಟದಲ್ಲಿ ನಿರ್ಮಾಣವಾಗಿರುವ ಅಯ್ಯಪ್ಪ ದೇವಾಲಯದಲ್ಲಿ ಪ್ರತಿವರ್ಷ ಸಂಕ್ರಾತಿಗೆ ವಾರ್ಷಿಕ ಜಾತ್ರೆ ನಡೆಯುತ್ತದೆ. ಮನೋರಂಜನೆ, ಅಂಗಡಿ ಮುಂಗಟ್ಟುಗಳಲ್ಲದೆ ಆನೆಯ ಮೇಲೆ ಅಯ್ಯಪ್ಪನ ಮೆರವಣಿಗೆ ಈ ಜಾತ್ರೆಯ ವಿಶೇಶ. ದಸರಾದ ಆನೆಯ ಅಂಬಾರಿಯಂತೆ ಅಯ್ಯಪ್ಪನ ಜಾತ್ರೆಯ ಆನೆಯ ಮೇಲಿನ ಅಯ್ಯಪ್ಪನ ಮೆರವಣಿಗೆ ಹಲವು ವಿಶೇಶಗಳಿಂದ ಜನಮಾನಸದ ಸಂಭ್ರಮಕ್ಕೆ ಕಾರಣವಾಗುತ್ತದೆ.


ಸಂಕ್ರಾಂತಿಯ ಮೊದಲು ೫ ದಿವಸಗಳ ಕಾಲ ನಡೆಯುವ ಈ ಅಯ್ಯಪ್ಪನ ಜಾತ್ರೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು,ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಕೊನೆಯ ದಿನ ಆನೆಯ ಮೇಲೆ ಅಯ್ಯಪ್ಪನ ಮೆರವಣಿಗೆಯ ಅಂಬಾರಿ ನೋಡುವುದೇ ಸೊಬಗು.ವಿಭಿನ್ನ ಪ್ರದೇಶಗಳ ಕಲಾಪ್ರಕಾರಗಳ ಪ್ರದರ್ಶನ,ಸ್ಥಳಿಯರ ಸಹಭಾಗಿತ್ವದ ರಂಗೋಲಿ,ಈ ಮರವಣಿಗೆಯ ಮಹತ್ವ ಹೆಚ್ಚಿಸುತ್ತವೆ.
ದೂರದ ಅಯ್ಯಪ್ಪ ದೇವಾಲಯಕ್ಕೆ ತೆರಳಲು ಸಾಧ್ಯವಾಗದ ಸ್ಥಳೀಯರಿಗೆ ಈ ಅಯ್ಯಪ್ಪ ದೇವಾಲಯ ಸ್ಥಳೀಯವಾಗಿ ಶಬರಿಮಲೆಯಷ್ಟೇ ಮಹತ್ವದ್ದು. ಐದು ದಿವಸಗಳ ಜಾತ್ರೆಯಲ್ಲಿ ಪಾಲ್ಗೊಳ್ಳುವ ಜನರು ಕೊನೆಯ ದಿವಸದ ಆನೆಯ ಮೇಲೆ ಅಯ್ಯಪ್ಪನ ಮೆರವಣಿಗೆಯ ವಿಶೇಶವನ್ನು ತಪ್ಪಿಸುವುದೇ ಇಲ್ಲ.ಸ್ಥಳೀಯರು ಪರ ಊರುಗಳಿಂದ ಬರುವ ಭಕ್ತರು ಈ ಮೆರವಣಿಗೆಯಲ್ಲಿ ಪಾಲ್ಗೊಂಡು ಸಂಬ್ರಮಿಸುತ್ತಾರೆ.

ಕಳೆದ ಎರಡ್ಮೂರು ವರ್ಷಗಳಿಂದ  ಕೋವಿಡ್‌ ಭಯದ ಆತಂಕದಲ್ಲಿ ಕಳೆಗುಂದಿದ್ದ ಈ ಅಯ್ಯಪ್ಪ ಜಾತ್ರೆ ಈ ವರ್ಷ ಅತಿ ವಿಜೃಂಬಣೆಯಿಂದಲೇ ನಡೆಯಿತು.ಲಕ್ಷಾಂತರ ಜನರು ಪಾಲ್ಗೊಂಡು ಸಂಬ್ರಮಿಸಿದ ಈ ಜಾತ್ರೆಯಲ್ಲಿ ಪ್ರತಿವರ್ಷದಂತೆ ಈ ವರ್ಷ ಕೂಡಾ ಕೊನೆಯ ದಿನದ ಅಯ್ಯಪ್ಪನ ಮೆರವಣಿಗೆಯಲ್ಲಿ ಹೆಚ್ಚು ಜನರು ಪಾಲ್ಗೊಂಡಿದ್ದು ವಿಶೇಶ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *