ಹರಿದ ಬಟ್ಟೆಯಲ್ಲಿ ಬಂದಿದ್ದ ವಿ.ಪ. ಸಭಾಪತಿ ಬಸವರಾಜ್‌ ಹೊರಟ್ಟಿ…!

ನಿಮಗೆಲ್ಲಾ ತಿಳಿದಿರುವಂತೆ ಮೌಲ್ಯಾಧಾರಿತ ರಾಜಕಾರಣ ಪ್ರತಿಪಾದಿಸಿದ ರಾಮಕೃಷ್ಣ ಹೆಗಡೆ ಈಗಿನ ರಾಜಕಾರಣಿಗಳಿಗೆ ಹೋಲಿಸಿದರೆ ಶ್ರೇಷ್ಠರು. ಹೆಗಡೆ ಅವಧಿಯಲ್ಲಿ ಉತ್ತರ ಕರ್ನಾಟಕದ ಲಿಂಗಾಯತರು ರಾಮಕೃಷ್ಣ ಹೆಗಡೆಯವರ ನೇತೃತ್ವ, ನಾಯಕತ್ವ ಒಪ್ಪಿದ್ದರು. ಈ ಹೆಗಡೆ ಪಾಳಯದಲ್ಲಿ ಬೆಳೆದ ಬೊಮ್ಮಾಯಿ,ಅಜಯಕುಮಾರ, ಸೇರಿದಂತೆ ಅನೇಕ ನಾಯಕರಲ್ಲಿ ಈ ಬಸವರಾಜ್‌ ಹೊರಟ್ಟಿ ಕೂಡಾ ಒಬ್ಬರು.

ಆಗ ಚಿಕ್ಕ ನಾಯಕರಾಗಿದ್ದ ಹೊರಟ್ಟಿ ಮತ್ತವರ ಸ್ನೇಹಿತರು ಒಂದು ದಿನ ಸ್ಪೋಟ್ಸ್‌ ಬಟ್ಟೆ ಥರದ ಟೀಶರ್ಟ್‌ ತೊಟ್ಟು ವಿಧಾನಸೌಧಕ್ಕೆ ಬಂದಿದ್ದರಂತೆ. ಈ ವಿದ್ಯಮಾನ ಗ್ರಹಿಸಿದ ರಾಮಕೃಷ್ಣ ಹೆಗಡೆ ತನ್ನ ಸಹಾಯಕರಿಗೆ ಹೇಳಿ ಇವರಿಗೆ ನಾಲ್ಕೈದು ಜೊತೆ ಬಟ್ಟೆಯಾಗುವಷ್ಟು ವಸ್ತ್ರ ಖದೀದಿಸಿ ಪರಿಚಿತ ಟೈಲರ್‌ ಬಳಿ ಜುಬ್ಬಾ ಹೊಲಿಸಲು ಹೇಳಿಬಿಟ್ಟರಂತೆ. ಕೆಲವು ದಿವಸಗಳ ನಂತರ ಈ ಬಟ್ಟೆಗಳನ್ನು ಪಡೆದ ಹೊರಟ್ಟಿ ಇವುಗಳನ್ನು ಧರಿಸುತ್ತಾ ಮುಂದುವರಿದರು.

ಈ ವರ್ಷ ರಾಮಕೃಷ್ಣ ಹೆಗಡೆಯವರ ಜನ್ಮ ಶತಮಾನೋತ್ಸವ. ಈ ಸತಮಾನೋತ್ಸವ ಉದ್ಘಾಟನೆಗೆ ಸಿದ್ದಾಪುರಕ್ಕೆ ಬಂದಿದ್ದ ಹೊರಟ್ಟಿಯವರು ಹಳೆಯದಾದ ಒಂದು ಶರ್ಟ್‌ ಜೊತೆಪ್ಯಾಂಟ್‌ ಧರಿಸಿ ಬಂದು ಹೆಗಡೆ ಶತಮಾನೋತ್ಸವ ವರ್ಷ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಹೆಗಡೆಯವರೊಂದಿಗಿನ ಅನುಭವ, ನೆನಪು ಸ್ಮರಿಸಿದ ಅವರು ಇದು ನೋಡಿ ಇಂದು ಹರಿದ ಬಟ್ಟೆ ಧರಿಸಿ ಬಂದಿದ್ದೇನೆ. ಮುಂಜಾನೆ ನನ್ನ ಸಹಾಯಕ ಸರ್‌ ಇದು ನಿಮ್ಮ ಗುರು ಹೆಗಡೆಯವರ ನೆನಪಿನ ಬಟ್ಟೆ ಆದರೆ ಇದು ತುಸು ಹರದೈತಿ ಅಂದರಂತೆ. ಹೋಗಲಿ ಬಿಡು ಹರದೈತಲ್ಲ ತೊಂದ್ರೆ ಇಲ್ಲ ಅದನ್ನೇ ಹಾಕ್ಕಿ ಇವತ್ತಿನ್‌ ಕಾರ್ಯಕ್ರಮ ಮಾಡಿ ಬಿಡೋಣು ಅಂದರಂತೆ. ತಾವು ತೊಟ್ಟಿದ್ದ ಹರಿದ ಬಟ್ಟೆ ತೋರಿಸಿ ಹೆಗಡೆಯವರ ಗುಣಗಾನ ಮಾಡಿದ ಸ್ಪೀಕರ್‌ ಹೊರಟ್ಟಿ ಹೆಗಡಯವರ ವಿಶಿಷ್ಟ ವ್ಯಕ್ತಿತ್ವ ಬಣ್ಣಿಸಿ ಅವರ ನೆನಪಿಗೆ ಅವರೇ ಕೊಡಿಸಿದ್ದ ಬಟ್ಟೆ ಹರಿದರೂ ಧರಿಸಿ ಬಂದಿದ್ದೇನೆ. ಹೆಗಡೆ ಮತ್ತು ನಮ್ಮ ಪ್ರೀತಿ-ವಿಶ್ವಾಸ ಅಂಥದ್ದು ಎಂದು ತಮ್ಮ ಅನುಭವ ಮೆಲುಕು ಹಾಕಿ ಗುರು ಹೆಗಡೆಯವರ ಆತ್ಮಕ್ಕೆ ಚಿರಶಾಂತಿ ಕೋರಿ ಹಗುರಾದಂತೆ ಕಂಡರು. & ನನ್ನೊಂದಿಗೆ ಅಲ್ಲಿದ್ದ ಹಲವು ಜನರ ದೃಷ್ಟಿಯಲ್ಲಿ ಸ್ಪೀಕರ್‌ ಗಿಂತ ಎತ್ತರದ ಕುರ್ಚಿಯಲ್ಲಿ ಕುಳಿತ ನಾಯಕರಾಗಿ ಕಂಗೊಳಿಸಿದರು ಹೊರಟ್ಟಿ. ( ಕನ್ನೇಶ್‌ ಕೋಲಶಿರ್ಸಿ)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *