


ಅಕ್ಷರ ಕಲಿಯದೇ ಆಕಾಶದೆತ್ತರಕ್ಕೆ ಬೆಳೆದ ಅಪರೂಪದ ನಟ ಅನರ್ಘ್ಯ ರತ್ನ.

ಅಭಿನವ ನಟ ಸಾಮ್ರಾಟ ಡಾಃ ರಾಜಕುಮಾರ್ ರ ಜೀವನ ಹೊರಗೆ ಕಾಣಿಸುವಂತೆ ಸುಖವಾಗಿಯೇನೂ ಇರಲಿಲ್ಲ. ಬಾಲ್ಯದ ಬದುಕು ಕಷ್ಟ ಕೋಟಲೆಗಳಮಯ. ರಾಜಕುಮಾರ್ ರವರ ತಾತ, ಮುತ್ತಾತರಿಂದರು ಸಿಂಗಾನೆಲ್ಲೂರು ಗ್ರಾಮದಲ್ಲಿ ಈಚಲ ಮರದಿಂದ ಹೆಂಡ ತೆಗೆದು ಮಾರುವ ಕುಲ ವೃತ್ತಿಯಾಗಿತ್ತು. ರಾಜಕುಮಾರ್ ತಂದೆಯವರಾದ ಪುಟ್ಟಸ್ವಾಮಯ್ಯ ನವರು ಕುಲಕಸಬನ್ನು ಬಿಟ್ಟು ನಾಟಕರಂಗದ ಕಡೆ ವಾಲಿ, ದೊಡ್ಡ ರಂಗಭೂಮಿ ನಟರಾದ. ಆದರೆ ಆರ್ಥಿಕ ಸ್ಥಿತಿ ತುಂಬಾ ಹೀನಾಯವಾಗಿತ್ರು. ಬಡತನ ಬೆಂಬಿಡದೇ ಕಾಡುತ್ತಿದ್ದರೂ ಕಷ್ಟಪಟ್ಟು ಕುಟುಂಬವನ್ನು ಪೋಷಿಸುತ್ತಿದ್ದರು.
ಮುತ್ತುರಾಜನನ್ನು ಐದನೆಯ ವಯಸ್ಸಿನಲ್ಲಿಯೇ ಪ್ರಾಥಮಿಕ ಶಾಲೆಗೆ ಸೇರಿಸಲಾಯಿತು. ಆದರೆ ಅವರಿಗೆ ಯಾಕೋ ಏನೋ ವಿದ್ಯೆ ತಲೆಗೆ ಹತ್ತಲಿಲ್ಲ. ಹೇಗೋ ಕಷ್ಟಪಟ್ಟು ಎರಡನೇ ತರಗತಿ ಮುಗಿಸಿ ಮೂರನೇ ತರಗತಿಯಲ್ಲಿ ಓದುತ್ತಿರುವಾಗ, ಶಾಲೆಯ ತನಿಖೆಗೆ ಬಂದ ಸ್ಕೂಲ್ ಇನ್ಸಪೆಕ್ಟರ್ ಒಬ್ಬರು , ಮುತ್ತುರಾಜನಿಗೆ ಪ್ರಶ್ನಿಸಿ, ಅಕ್ಷರ ಬರೆದು ತೋರಿಸಲು ಹೇಳಿದರು.
ಮುತ್ತುರಾಜ ಭಯದಿಂದಲೇ ಬರೆದರು. ಆದರೆ ಬರೆದಿದ್ದೆಲ್ಲ ತಪ್ಪು ತಪ್ಪಾಗಿತ್ತು. ಇದನ್ನು ನೋಡಿದ ಇನ್ಸಪೆಕ್ಟರ್ ಗೆ ಕೋಪ ಬಂದು ಶಿಕ್ಷಕರಿಗೆ ದಂಡಿಸಿದರು. ಇನ್ಸಪೆಕ್ಟರ್ ಹೋದ ನಂತರ ಶಿಕ್ಷಕರು ಮುತ್ತುರಾಜನಿಗೆ ಕೋಲಿನಿಂದ ಹೊಡೆದರು. ಹೊಡೆತದ ಪೆಟ್ಟು ತಾಳಲಾರದೇ ಭವಿಷ್ಯದ ಕಥಾನಾಯಕನಾಗಿ ಮನೆಗೆ ಓಡಿದ ಮುತ್ತುರಾಜ
ಮತ್ತೇ ಶಾಲೆಗೆ ಮುಖ ತೋರಿಸಲೇ ಇಲ್ಲ.
ಡಾಃ ರಾಜ್ ಅಕ್ಷರ ಕಲಿಯದೇ ಆಕಾಶದೆತ್ತರಕ್ಕೆ ಬೆಳೆದ ಅಪರೂಪದ ನಟ ಅನರ್ಘ್ಯ ರತ್ನ. (ಮೇಟಿ ಮಲ್ಲಿಕಾರ್ಜುನ)

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________





