108 ನೂರೆಂಟು ಸಮಸ್ಯೆ ಯಾರಿಗೇಳೋಣಾ ನಮ್ ಪ್ರಾಬ್ಲೆಮ್ಮು,

108 ನೂರೆಂಟು ಸಮಸ್ಯೆ ಯಾರಿಗೇಳೋಣಾ ನಮ್ ಪ್ರಾಬ್ಲೆಮ್ಮು,
ಇದು ಕೇವಲ ಸಿದ್ಧಾಪುರದ ಸಮಸ್ಯೆಯಷ್ಟೇ ಅಲ್ಲ?
ಸಾರ್ವಜನಿಕರ ತುರ್ತು ರಗಳೆಗಳಿಗೆ ಸ್ಫಂದಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ತುರ್ತು ಆರೊಗ್ಯ ಸೇವೆಗೆ ವಾಹನಗಳ ನಿರ್ವಹಣೆಯ ಸಮಸ್ಯೆ ಎದುರಾಗಿರುವ ವಿದ್ಯಮಾನ ಬೆಳಕಿಗೆ ಬಂದಿದೆ.
ಕರ್ನಾಟಕದಲ್ಲಿ ರಾಜ್ಯದ ಮೂಲೆಮೂಲೆಗೆ ತುರ್ತು ಆರೋಗ್ಯ ಸೇವೆ ದೊರಕಿಸಲು 108 ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಇಂಥ 108 ವಾಹನಗಳು ತಾಲೂಕಿಗೆ ಕನಿಷ್ಟ 1ರಿಂದ ಪ್ರಾರಂಭವಾಗಿ ಕೆಲವು ತಾಲೂಕುಗಳಲ್ಲಿ 4-5 ವಾಹನಗಳೂ ಕಾರ್ಯನಿರ್ವಹಿಸುತ್ತಿವೆ. ಈ ಸೇವೆ ಸರ್ಕಾರದ ನಿರ್ವಹಣೆ ಮತ್ತು ಜವಾಬ್ಧಾರಿಯಾದರೂ ಕರ್ನಾಟಕದ 108 ನಿರ್ವಹಣೆ ಜವಾಬ್ದಾರಿಯನ್ನು ಆಂಧ್ರ ಮೂಲದ ಜಿ.ವಿ.ಕೆ. ಸರ್ಕಾರೇತರ ಸಂಸ್ಥೆ ನಿರ್ವಹಿಸುತ್ತದೆ.
ಜಿ.ವಿ.ಕೆ. ತಾಲೂಕಿಗೆ ಕನಿಷ್ಟ ಒಂದು 108 ವಾಹನ ಅದರ ಜೊತೆಗೆ ಒಂದೊಂದು ವಾಹನಕ್ಕೆ 2ರಿಂದ 5 ಜನ ಸಿಬ್ಬಂದಿಗಳ ಮೂಲಕ ತುರ್ತು ಆರೋಗ್ಯ ಸೇವೆ ಒದಗಿಸುತ್ತದೆ. ಹೀಗೆ ರಾಜ್ಯದ ಎಲ್ಲಾ ತಾಲೂಕುಗಳಲ್ಲಿ ಕಾರ್ಯನಿರ್ವಹಿಸುವ ವಾಹನಗಳ ಸಂಖ್ಯೆ 100 ರಷ್ಟಿದ್ದರೆ ಇದರ ನಿರ್ವಹಣೆಯ ಸಿಬ್ಬಂದಿಗಳು ಸರಿಸುಮಾರು 500 ಜನ. ಹೀಗೇ ನೂರಾರು ವಾಹನಗಳು ಸಿಬ್ಬಂದಿಗಳ ಕೆಲಸದ ಪರಿಣಾಮವಾಗಿ ದೊರೆಯುತ್ತಿರುವ ತುರ್ತು ಆರೋಗ್ಯ ಸೇವೆ ಒದಗಿಸುವ ವಾಹನಗಳೇ ಸುಸ್ಥಿತಿಯಲ್ಲಿಲ್ಲ ಎನ್ನುವ ಸಂಗತಿ ಆಘಾತಕಾರಿ ಅಂಶವಾದರೂ ವಾಸ್ತವ ಸತ್ಯ.
ಸರಳ ಉದಾಹರಣೆಯೆಂದರೆ ಸಿದ್ದಾಪುರದ ಏಕೈಕ 108 ವಾಹನಕ್ಕೆ ಪ್ರತಿ 30 ಸಾವಿರ ಕಿ.ಮೀ.ಗಳಿಗೆ ಚಕ್ರದ ರಬ್ಬರ್ ಟೈರ್ ಗಳನ್ನು ಬದಲಿಸಬೇಕು. ಆದರೆ ಇಲ್ಲಿಯ 108 60ಸಾವಿರ ಕಿ.ಮೀ.ಕ್ರಮಿಸಿದ್ದರೂ ಅದರ ಟೈರ್ ಬದಲಾಯಿಸಿಲ್ಲ. ಸಿದ್ಧಾಪುರದಂಥ ಬಹುದೂರದ ಗುಡ್ಡಗಾಡು ಪ್ರದೇಶ ಸಂಚರಿಸುವ 108 ಕತೆಯೇ ಹೀಗಾದರೆ ಮಹಾನಗರ, ದೊಡ್ಡನಗರಗಳಲ್ಲಿ ಸಂಚರಿಸುವ ವಾಹನಗಳ ಸ್ಥಿತಿ ಹೇಗಿರಬೇಡ.
ಕೆಲವು ತಾಲೂಕುಗಳಲ್ಲಿ ತಾಲೂಕಿಗೆ 2-3 108 ವಾಹನಗಳಿವೆ. ಸಿದ್ದಾಪುರ ಸೇರಿದಂತೆ ಏಕೈಕ 108 ವಾಹನ ಹೊಂದಿರುವ ಕೆಲವು ತಾಲೂಕುಗಳಲ್ಲಿ 108 ತುರ್ತು ಸೇವೆ ಸಿಗುವುದೂ ದುಸ್ತರವಾಗಿದೆ. ಈ ಬಗ್ಗೆ ಸಾರ್ವಜನಿಕರು ಆಕ್ಷೇಪಿಸಿದ್ದು 108 ಸಂಖ್ಯೆಗೆ ಕರೆಮಾಡಿ ಈ ತೊಂದರೆ ಕೇಳಿದರೆ ಸಂಬಂಧಿಸಿದವರಿಗೆ ಕೇಳಿ ಉತ್ತರ ನೀಡುತ್ತೇವೆ ಎನ್ನುವ ಸಮಜಾಯಿಸಿ ನೀಡುತ್ತಾರೆ.
ಈ ಸೇವೆಯ ನಿರ್ವಹಣೆಯ ಜವಾಬ್ದಾರಿಯ ತಾಲೂಕಾ ಆರೋಗ್ಯಾಧಿಕಾರಿಗಳು 108 ವಾಹನದ ಟೈರ್ ಸಮಸ್ಯೆ ಬಗ್ಗೆ ಸಂಬಂಧಿಸದವರ ಗಮನ ಸೆಳೆಯಲಾಗಿದೆ. ಆ ತೊಂದರೆ ಬಗೆಹರಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವ ಭರವಸೆ ಸಂಬಂಧಿಸಿದವರಿಂದ ದೊರೆತಿದೆ ಎನ್ನುತ್ತಾರೆ.
ಸರ್ಕಾರ,ಸರ್ಕಾರೇತರ ಸಂಸ್ಥೆ, ಅಧಿಕಾರಿಗಳು, ಸಿಬ್ಬಂದಿಗಳು ಹೀಗೆ ಅನೇಕ ಸ್ಥರವಿನ್ಯಾಸದ ಈ ವ್ಯವಸ್ಥೆಯಲ್ಲಿ ಬಾಧಿತರು ಮಾತ್ರ ಅಸಹಾಯಕ ಜನಸಾಮಾನ್ಯರು. ಈ ಬಗ್ಗೆ ಜನಪ್ರತಿನಿಧಿಗಳ ದಿವ್ಯ ಮೌನದ ಹಿಂದೆ ಸಹಸ್ರ ಕಾರಣಗಳಿರಬಹುದು ಆದರೆ ಸಾರ್ವಜನಿಕರ ಸಮಸ್ಯೆ ಕೇಳದ,ಅರಿಯದ ಜನಪ್ರತಿನಿಧಿಗಳ ಜಾಣ ಮೌನದ ಹಿಂದೆ ಮತದಾರರ ತಪ್ಪಿರುವುದೂ ಅಷ್ಟೇ ಸತ್ಯ. ಹಾಗಾಗಿ ಸಿದ್ಧಾಪುರ,ಉತ್ತರಕನ್ನಡ,ರಾಜ್ಯದ ಜನರ 108ರ ನೂರೆಂಟು ಸಮಸ್ಯೆ ಬಗೆಹರಿಯಬೇಕಿರುವುದಷ್ಟೆ ಈಗಿನ ತುರ್ತು ಅವಶ್ಯಕತೆ.

ರೈತರ ಮಕ್ಕಳೇಕೆ ಡಿ.ಸಿ.ಯಾಗಬಾರದು?
ಕೆ.ಎ.ಎಸ್. ಪಾಸಾದ ಕೃಷಿ ಅಧಿಕಾರಿ ‘ದೇವರಾಜ್ ಆರ್’ರ ಯಶೋಗಾಥೆ
ಕಾಗೋಡು ಸತ್ಯಾಗ್ರಹದ ಕಹಳೆ ಇಡೀ ದೇಶದ ದುಡಿಯುವ ಕೈಗಳಿಗೆ ಭೂಮಿಯ ಮಾಲಿಕತ್ವ ನೀಡಿದ ಮನ್ವಂತರದ ನೆಲಗಟ್ಟು. ಶಿವಮೊಗ್ಗ ಜಿಲ್ಲೆ ಇತಿಹಾಸ, ಸ್ವಾತಂತ್ರ್ಯ ಹೋರಾಟ ಹಾಗೂ ನಂತರದ ರೈತ ಸತ್ಯಾಗ್ರಹಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಮಾಜವಾದಿ ಚಿಂತಕರು, ಹಲವಾರು ಮೇರು ಸಾಧಕರ ತವರು ನೆಲ. ಸೊರಬ ತಾಲೂಕಿನ ಚಿಮಣೂರು (ಹಾಲಗಳಲೆ) ಪುಟ್ಟ ಗ್ರಾಮ. ಇಲ್ಲಿಯ ಕೃಷಿ ಕಾಯಕಯೋಗಿ ದಂಪತಿಗಳಾದ ಕುಸುಮಾ ಹಾಗೂ ರೇವಣ್ಣಪ್ಪ ಡಿ.ಸಿ. ಇವರ ಪ್ರತಿಭಾನ್ವಿತ ಸುಪುತ್ರ. ದೇವರಾಜ್ ಆರ್ ಇವರೇ ಮೊನ್ನೆ ಬಿಡುಗಡೆಯಾದ ಕರ್ನಾಟಕ ಆಡಳಿತ ಸೇವೆ (ಕೆ.ಎ.ಎಸ್.) ಪರೀಕ್ಷೆಯ ಅಂತಿಮ ಪಟ್ಟಿಯಲ್ಲಿ ಉಪ-ವಿಭಾಗಾಧಿಕಾರಿ (ಕಂದಾಯ) ಹುದ್ದೆಗೆ ಆಯ್ಕೆಯಾದ ರೈತಪುತ್ರ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ...

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

kolsirsi vss issue…part -04 ನಾನೇ ಹೊಣೆ ನಾನೇ ಜವಾಬ್ದಾರಿ ಎಂದ ಸಿಇಒ ಮಾಳವಿ….

ಕೋಲ ಶಿರಸಿ vss ನ ಪ್ರಕರಣ ಹಗರಣದ ಸ್ವರೂಪ ಪಡೆದಿದೆ… ಈ ಅಪರಾ ತಪರಾ ರೂವಾರಿ ಸಿಇಒ/ ಸೆಕ್ರೆಟರಿ ಎಂಬುದು ನಿರ್ವಿವಾದ. ಈ ಬಗ್ಗೆ...

ಕೋಲಶಿರಸಿ vss ಆಡಳಿತ ಸಮೀತಿ & ಸಿಇಒ ವಿರುದ್ಧ ಇಲಾಖೆಗೆ ದೂರು

ಸಿದ್ದಾಪುರ ತಾಲೂಕಿನ ಕೋಲಶಿರಸಿ vss ನಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಹಿಂದೆ ಇರುವ ಹಾಲಿ ಆಡಳಿತ ಮಂಡಳಿ & ಸಿಇಒ/ ಕಾರ್ಯದರ್ಶಿ ಗಳ...

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರ ಜನಪರ ಎನ್ನುವ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಸಿದ್ದಾಪುರ ಕೋಲಶಿರ್ಸಿ ಸೇವಾ ಸಹಕಾರಿ ಸಂಘದ ಬಹುಕೋಟಿ ಹಗರಣದ ನಂತರ ಒಂದೊಂದೇ ಗುಟ್ಟುಗಳು ರಟ್ಟಾಗತೊಡಗಿವೆ. ಸಿದ್ದಾಪುರದ ಪ್ರಮುಖ ಸಹಕಾರಿಗಳು,...

Recommended For You

About the Author: Kanneshwar Naik

Leave a Reply

Your email address will not be published. Required fields are marked *