ಕೇಂದ್ರದ ತಾರತಮ್ಯ ಅಕ್ಷಮ್ಯ- ಹೆಚ್ಚು ಉತ್ತರದಾಯಿಯಾಗಿರುವ ಸಹಕಾರಿ ಕ್ಷೇತ್ರ ಉಳಿಸುವ ಹೊಣೆ ಹೊರಲು ಎಚ್.ಕೆ.ಪಿ. ಕರೆ

ದೇಶದಲ್ಲಿ ಶ್ರೀಮಂತ ಹಿತಾಸಕ್ತರು ಕಟ್ಟಿಕೊಳ್ಳುವ ಕಾರ್ಪೋರೇಟ್ ಸಂಸ್ಥೆಗಳಿಗೆ ಮತ್ತು ಜನಸಾಮಾನ್ಯರ ಸಹಕಾರಿ ಸಂಘಗಳಿಗೆ ಸಮಾನ ಜಿ.ಎಸ್.ಟಿ. ವಿಧಿಸಿ ನಂತರ ಕಾರ್ಪೋರೇಟ್ ಕ್ಷೇತ್ರಕ್ಕೆ 10% ರಿಯಾಯತಿ ನೀಡಿ ಸಹಕಾರಿ ಕ್ಷೇತ್ರಕ್ಕೆ 30% ಜಿ.ಎಸ್.ಟಿ. ಹೇರಲಾಗಿದೆ.
ಈ ತಾರತಮ್ಯ ಸರ್ಕಾರ ಯಾರ ಪರ ಇದೆ ಎನ್ನುವುದಕ್ಕೆ ಉದಾಹರಣೆ. ಸಹಕಾರಿ ಕ್ಷೇತ್ರದ ಪ್ರಮುಖರು ಕೆಲವು ಜನಪ್ರತಿನಿಧಿಗಳನ್ನು ನಿಲ್ಲಿಸಿ ಕೇಳುವ ಶಕ್ತಿ-ಸಂಪರ್ಕ ಹೊಂದಿದ್ದಾರೆ. ಅವರು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವ ಪ್ರಯತ್ನ ಮಾಡಬೇಕು. ನಾನಂತೂ ಸಹಕಾರಿ ಕ್ಷೇತ್ರಕ್ಕೆ ಈಗಿರುವ 30% ನಿಂದ ಕನಿಷ್ಟ 50% ರಿಯಾಯತಿ ನೀಡಬೇಕು ಎಂದು ಕೇಂದ್ರವನ್ನು ಆಗ್ರಹಪೂರ್ವಕವಾಗಿ ಒತ್ತಾಯಿಸುತ್ತೇನೆ. – ಎಚ್.ಕೆ.ಪಾಟೀಲ್

ಸರ್ಕಾರ, ಖಾಸಗಿಕ್ಷೇತ್ರಗಳಿಗಿಂತ ಹೆಚ್ಚಿನ ಉತ್ತರದಾಯಿತ್ವ ಹೊಂದಿರುವ ಸಹಕಾರಿ ಕ್ಷೇತ್ರದ ಮೇಲೆ ಸರ್ಕಾರದ ಕೆಂಗಣ್ಣಿದ್ದು ಅಸಂಘಟಿತ ಕಾರ್ಮಿಕರಾಗಿರುವ ರೈತರು, ಕಾರ್ಮಿಕರ ಹಿತರಕ್ಷಿಸುವ ಸಹಕಾರಿ ಕ್ಷೇತ್ರವನ್ನು ಉಳಿಸಿ ಬೆಳೆಸುವ ಹೊಣೆ ಜನಸಾಮಾನ್ಯರ ಮೇಲಿದೆ ಎಂದು ಹೇಳಿರುವ ಮಾಜಿ ಸಚಿವ ಎಚ್. ಕೆ ಪಾಟೀಲ್ ರಾಜ್ಯದಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಹಕಾರಿ ಕ್ಷೇತ್ರ ದೇಶಕ್ಕೇ ಮಾದರಿಯಾಗಿದೆ ಎಂದು ಶ್ಲಾಘಿಸಿದ್ದಾರೆ.
ಇಲ್ಲಿಯ ಟಿ.ಎಂ.ಎಸ್. ಅಮೃತಮಹೋತ್ಸವದಲ್ಲಿ ಮಾತನಾಡಿದ ಅವರು ಯಾವುದೇ ವಸ್ತುವಿಗೆ ಉತ್ಫಾದಕ ಬೆಲೆ ನಿಗದಿಪಡಿಸಬೇಕು ಆದರೆ ರೈತರ ಬೆಳೆ, ಮಹಸೂಲಿಗೆ ಗ್ರಾಹಕರು ಬೆಲೆ ಕಟ್ಟುತ್ತಾರೆ. ಈ ಶೋಷಣೆ ತಡೆಯಲು ರೈತರು ಬೆಳೆದ ಬೆಳೆಗೆ ಸಹಕಾರಿ ಕ್ಷೇತ್ರದ ಮೂಲಕ ರೈತರೇ ಬೆಲೆ ನಿರ್ಧರಿಸುವಂತಾದರೆ ಉತ್ತಮ ಎಂದರು.

ಅಯ್ಯಪ್ಪ ಜಾತ್ರೆ ನಾಳೆ ಮುಕ್ತಾಯ,ಆನೆ-ಅಂಬಾರಿ ಮೆರವಣಿಗೆಯೊಂದಿಗೆ ಸಮಾಪ್ತಿ
ಸಿದ್ಧಾಪುರ ತಾಲೂಕಿನ ವಿಶಿಷ್ಟ ಜಾತ್ರೆ ಅಯ್ಯಪ್ಪಸ್ವಾಮಿ ಜಾತ್ರಾಮಹೋತ್ಸವ ಮಂಗಳವಾರ ಮುಕ್ತಾಯವಾಗಲಿದೆ. ಜ.15 ರಂದು ಎಂದಿನಂತೆ ಪೂಜೆ,ಪುನಸ್ಕಾರಗಳಿಗೆ ಅವಕಾಶವಿದೆಯಾದರೂ ಜ.14 ರ ಸಂಜೆಯ ಅಯ್ಯಪ್ಪ ಶೋಭಾಯಾತ್ರೆಯ ಆನೆಯ ಮೇಲೆ ಅಯ್ಯಪ್ಪ,ಅಂಬಾರಿ ಮೆರವಣಿಗೆಯೊಂದಿಗೆ ಜ.10 ರಿಂದ ಪ್ರಾರಂಭವಾದ ಈ ಜಾತ್ರೆ ತಾಂತ್ರಿಕವಾಗಿ ಜ.15 ರಂದು ಮುಕ್ತಾಯವಾದರೂ ವಿದ್ಯುಕ್ತವಾಗಿ ಜ.14 ರಂದೇ ಮುಗಿಯಲಿದೆ.
ಉತ್ತರ ಕನ್ನಡ ಸೇರಿದಂತೆ ರಾಜ್ಯದಲ್ಲೆಲ್ಲೂ ಕಾಣದ ಶಬರಿಮಲೆ ಮಾದರಿಯ ಅಯ್ಯಪ್ಪ ದೇಗುಲ ಇದಾಗಿದ್ದು ಇಲ್ಲಿ ಸ್ಥಳಿಯರು, ಅಯ್ಯಪ್ಪ ಭಕ್ತರಿಗೆ ಸಕಲ ಅನುಕೂಲಗಳನ್ನು ಒದಗಿಸಲಾಗಿದೆ. ಇಂಥ ವೈಶಿಷ್ಟ್ಯದ ಈ ಜಾತ್ರೆ ಸಮಯದಲ್ಲಿ ಅನೇಕ ಶೃದ್ಧಾಳುಗಳು,ಪ್ರಮುಖರು, ರಾಜಕೀಯ ನಾಯಕರು
ಭೇಟಿ ನೀಡಿದ್ದಾರೆ. ಧಾರ್ಮಿಕ ಆಚರಣೆಗಳು ಅಂಗಡಿ ಮುಂಗಟ್ಟುಗಳು, ಮನೋರಂಜನಾ ಸಾಧನಗಳು ರಂಜಿಸಿದ ಈ ಜಾತ್ರೆ 2020 ರ ವರ್ಷಕ್ಕೆ ಜ. 15 ಕ್ಕೆ ಮುಗಿಯಲಿದೆ.ಜಾತ್ರೆಯ ವೇಳೆ ಅನೇಕರು ಬಂದು ಇಲ್ಲಿಯ ವಿಶೇಶ,ಅಲಂಕಾರಗಳನ್ನು ನೋಡಿ ಸಂಬ್ರಮಿಸುವುದು ಕಳೆದ ಕೆಲವು ವರ್ಷಗಳಿಂದ ಸಂಪ್ರದಾಯವಾದಂತಾಗಿದೆ.
ನಾಡಿನ ಸಮಸ್ತರಿಗೆ ಮಕರ ಸಂಕ್ರಾಂತಿ ಶುಭಾಶಯಗಳು,
ಇಂದಿನ ಅಯ್ಯಪ್ಪ ಅಂಬಾರಿ ಮೆರವಣಿಗೆಗೆ ಸರ್ವರಿಗೂ ಸ್ವಾಗತ, ತಾಲೂಕಿನ ಗ್ರಾಮೀಣ ಜನರ ಸಂಬ್ರಮದ ಸಂಕ್ರಾಂತಿ ಮತ್ತು ಬರಗಾಲ ವಾರ್ಷಿಕ ಜಾತ್ರೆಯ ಶುಭಾಶಯಗಳೊಂದಿಗೆ
ಸುದರ್ಶನ ಪಿಳ್ಳೆ & ಕುಟುಂಬ
ಅನೂಪ್‍ಗ್ರೂಪ್ ಸಿದ್ಧಾಪುರ (ಉ.ಕ.)

ನಾಡಿನ ಸಮಸ್ತರಿಗೆ ಮಕರ ಸಂಕ್ರಾಂತಿ ಶುಭಾಶಯಗಳು,
ಇಂದಿನ ಅಯ್ಯಪ್ಪ ಅಂಬಾರಿ ಮೆರವಣಿಗೆಗೆ ಸರ್ವರಿಗೂ ಸ್ವಾಗತ, ತಾಲೂಕಿನ ಗ್ರಾಮೀಣ ಜನರ ಸಂಬ್ರಮದ ಸಂಕ್ರಾಂತಿ ಮತ್ತು ಬರಗಾಲ ವಾರ್ಷಿಕ ಜಾತ್ರೆಯ ಶುಭಾಶಯಗಳೊಂದಿಗೆ ಸುನಿಲ್‍ಕುಮಾರ
ನಾಯ್ಕ,
ಸಂಪಖಂಡ
& ಕುಟುಂಬವರ್ಗ
ಪ್ರಗತಿಪರ ಕೃಷಿಕರು,
ಸಿದ್ಧಾಪುರ (ಉ.ಕ.) 9448576017

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ...

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

kolsirsi vss issue…part -04 ನಾನೇ ಹೊಣೆ ನಾನೇ ಜವಾಬ್ದಾರಿ ಎಂದ ಸಿಇಒ ಮಾಳವಿ….

ಕೋಲ ಶಿರಸಿ vss ನ ಪ್ರಕರಣ ಹಗರಣದ ಸ್ವರೂಪ ಪಡೆದಿದೆ… ಈ ಅಪರಾ ತಪರಾ ರೂವಾರಿ ಸಿಇಒ/ ಸೆಕ್ರೆಟರಿ ಎಂಬುದು ನಿರ್ವಿವಾದ. ಈ ಬಗ್ಗೆ...

ಕೋಲಶಿರಸಿ vss ಆಡಳಿತ ಸಮೀತಿ & ಸಿಇಒ ವಿರುದ್ಧ ಇಲಾಖೆಗೆ ದೂರು

ಸಿದ್ದಾಪುರ ತಾಲೂಕಿನ ಕೋಲಶಿರಸಿ vss ನಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಹಿಂದೆ ಇರುವ ಹಾಲಿ ಆಡಳಿತ ಮಂಡಳಿ & ಸಿಇಒ/ ಕಾರ್ಯದರ್ಶಿ ಗಳ...

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರ ಜನಪರ ಎನ್ನುವ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಸಿದ್ದಾಪುರ ಕೋಲಶಿರ್ಸಿ ಸೇವಾ ಸಹಕಾರಿ ಸಂಘದ ಬಹುಕೋಟಿ ಹಗರಣದ ನಂತರ ಒಂದೊಂದೇ ಗುಟ್ಟುಗಳು ರಟ್ಟಾಗತೊಡಗಿವೆ. ಸಿದ್ದಾಪುರದ ಪ್ರಮುಖ ಸಹಕಾರಿಗಳು,...

Recommended For You

About the Author: Kanneshwar Naik

Leave a Reply

Your email address will not be published. Required fields are marked *