ದೈನಂದಿನ ಸ್ಥಿತಿಗತಿಗಳು ಮತ್ತು ಶೈಕ್ಷಣಿಕ ಸವಾಲುಗಳು

ಏಕೋಪಾಧ್ಯಾ ಯ” ಶಾಲೆ ~

ದೈನಂದಿನ ಸ್ಥಿತಿಗತಿಗಳು ಮತ್ತು ಶೈಕ್ಷಣಿಕ ಸವಾಲುಗಳು

ಏಕೋಪಾದ್ಯಾಯ ಶಾಲೆಯ ಮುಖ್ಯೋಪಾಧ್ಯಾಯರಿದ್ದಂತೆ ಎಂಬ ಮಾತನ್ನು ನಾವು ಒಂದಲ್ಲ ಒಂದು ಬಾರಿ ಕೇಳಿಯೇ ಇರುತ್ತೇವೆ ., ಒಬ್ಬನೇ ವ್ಯಕ್ತಿ ಹಲವಾರು ಕೆಲಸಗಳನ್ನು

 ನಿಭಾಯಿಸಬೇಕಾದ ಸಂದರ್ಭಗಳಲ್ಲಿ ಸಾಮಾನ್ಯವಾಗಿ ಈ ಮಾತನ್ನು ವ್ಯಂಗ್ಯವಾಗಿ ಬಳಸುವುದು ವಾಡಿಕೆ. 

ಏಕೋಪಾದ್ಯಾಯ ಶಾಲೆಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ  ಹೆಚ್ಚಾಗಿ ಕಾಣಬಹುದು .ಅಷ್ಟಕ್ಕೂ RTE ನೀತಿಯಂತೆ ಇಂತಹ ಶಾಲೆಗಳೇ ಅಸ್ತಿತ್ವದಲ್ಲಿ ಇರುವಂತಿಲ್ಲ

ಆದರೆ ಸ್ಥಳೀಯ ಅಗತ್ಯತೆ ಇಂದಲೋ ಮಕ್ಕಳ ಕೊರತೆ ಇಂದಲೋ ಅಥವ ಇನ್ಯಾವುದೋ ಅನಿವಾರ್ಯತೆಯ  ಕಾರಣಗಳಿಂದಾಗಿ ಇಂದಿಗೂ ದೇಶಾದ್ಯಂತ ಲಕ್ಷಾಂತರ ಏಕೋಪಾಧ್ಯಾ ಯ ಶಾಲೆಗಳು ಅಸ್ತಿತ್ವದಲ್ಲಿವೆ. ಕರ್ನಾಟಕದಲ್ಲಿಯೇ ಹತ್ತಕ್ಕಿಂತ ಕಡಿಮೆ ಮಕ್ಕಳನ್ನು ಹೊಂದಿರುವ 4500 ಕ್ಕೂ ಹೆಚ್ಚು ಏಕೋಪಾಧ್ಯಾ ಯ ಶಾಲೆಗಳಿವೆ.

ಮಕ್ಕಳ ಸಂಖ್ಯೆ ಕಡಿಮೆ ಇರುವಾಗ ಅಷ್ಟೇನು ಕೆಲಸ ಇರುತ್ತದೆ ಎಂಬುದೇ ಬಹುತೇಕರ ಪ್ರಶ್ನೆ.ಇವುಗಳಲ್ಲಿ ಕೆಲಸ ನಿರ್ವಹಿಸುವುದು ತುಂಬಾ ಸುಲಭ ಎಂಬ ಭಾವನೆಯು ಬರಬಹುದು  .. ಇಡೀ ಭೂಮಿಯ ಭಾರವನ್ನು ತಲೆಯ ಮೇಲೆ ಹೊತ್ತಷ್ಟು ಕಷ್ಟಕರ ಸ್ಥಿತಿ ಇಲ್ಲದಿದ್ದರೂ ತನ್ನದೇ ಆದ ಹಲವಾರು ಸವಾಲುಗಳಿವೆ.ಹಾಗೆಯೇ ವಸ್ತುಸ್ಥಿತಿಗಳು ಸಹ ಬೇರೆಯೇ ಇವೆ .

ಮಕ್ಕಳ ಸಂಖ್ಯೆ ಕಡಿಮೆ ಇರಬಹುದು ಆದರೆ ಕರ್ತವ್ಯ ,ಜವಾಬ್ದಾರಿಗಳ ಸಂಖ್ಯೆ ಕಡಿಮೆಯಾಗಿಲ್ಲ. ಅದರಲ್ಲೂ ಎಲ್ಲಾ ಮಕ್ಕಳಿಗೂ ಎಲ್ಲಾ ವಿಷಯಗಳನ್ನೂ ಕಲಿಸುವ ಅನಿವಾರ್ಯತೆ,ಅದಕ್ಕೆ ತಕ್ಕಂತೆ ವೇಳಾಪಟ್ಟಿಯನ್ನು ಹೊಂದಿಸಿಕೊಳ್ಳುವ ಚಾಕಚಕ್ಯತೆ ,ಬಹುವರ್ಗ ಭೋಧನೆಯಲ್ಲಿನ ಸೂಕ್ಷ್ಮತೆ ,ಶಾಲೆಯ ಅನಿವಾರ್ಯತೆಗೆ ತಕ್ಕಂತೆ ಹೊಂದಿಕೊಳ್ಳುವ ಸಡಿಲತೆ ಇಲ್ಲಿನ ಶಿಕ್ಷಕರಿಗೆ ಇರಬೇಕಾಗುತ್ತದೆ.ಬೇರೆ ಶಾಲೆಗಳಲ್ಲಿ ಶೈಕ್ಷಣಿಕ ರಥವನ್ನು ಎಳೆಯಲು ಸಹೋದ್ಯೋಗಿಗಳ ನೆರವಿದ್ದರೆ ಇಲ್ಲಿ ಒಬ್ಬರೇ ಎಳೆಯಬೇಕಾಗುತ್ತದೆ.ಇಲಾಖೆಯ ಅಧಿಕಾರಿಗಳು CRP ಗಳು ನೆರವಾಗುತ್ತಾರಾದರು ಅವರು ಶಾಲೆಗೆ ಹೊರಗಿನವರೆ ಆಗಿರುತ್ತಾರೆ.ಶಾಲೆಯ ದೈನಂದಿನ ಅಗತ್ಯಗಳಿಗೆ ಎಲ್ಲಾ ಸಮಯದಲ್ಲೂ ಅವರ ಉಪಸ್ಥಿತಿಯನ್ನು ನಿರೀಕ್ಷಿಸುವುದು ಸರಿಯಲ್ಲ ಹಾಗೂ ಅವರ ವಿಶಾಲವಾದ ಜವಾಬ್ದಾರಿಗಳ ನಡುವೆ ಅದು ಅಸಾಧ್ಯವೂ ಸಹ ಹೌದು.ಇನ್ನೂ sdmc ಯವರ ಸಹಕಾರ ಇರುತ್ತದೆಯಾದರು ತರಗತಿ ಪರಿಸರದಲ್ಲಿ ಅವರು ಸುಗಮಕಾರರಾಗಲಾರರು.ಕೆಲವು ಕಡೆ ಆಯಾ ಊರಿನ ಕಲಿತವರು ಕೆಲವೊಮ್ಮೆ ಅಕ್ಷರ ಸೇವೆಗೆ ಮುಂದೆ ಬರಬಹುದಾದರೂ ಎಲ್ಲಾ ಕಡೆಯೂ ಅಂತಹ ಸೇವೆಯನ್ನು ನಿರೀಕ್ಷಿಸಲಾಗದು.

1ರಿಂದ 3 ನೆ ತರಗತಿವರೆಗೂ ನಲಿಕಲಿ ಪದ್ಧತಿ ಜಾರಿಯಲ್ಲಿರುವುದರಿಂದ ಒಬ್ಬ ಶಿಕ್ಷಕನು ಸಂಪೂರ್ಣವಾಗಿ ಇದರಲ್ಲಿ ತೊಡಗಿ ಕೊಂಡರಷ್ಟೇ ಇದರ ಉದ್ದೇಶ ಈಡೇರಿಕೆ ಸಾಧ್ಯ. ಆದರೆ ಇದೇ ಅವಧಿಯಲ್ಲಿ 4 ಮತ್ತು 5 ನೆ ತರಗತಿಗಳಿಗೂ

 ಮಾರ್ಗದರ್ಶಿಸುವ ಹೊಣೆಗಾರಿಕೆಯೂ ಇರುತ್ತದೆ. ಸದ್ಯದ ನಿಯಮಗಳಂತೆ ನಲಿಕಲಿ ತರಗತಿಗಳ ಪ್ರತಿಯೊಂದು ಅವಧಿ 80 ನಿಮಿಷಗಳಾಗಿದ್ದು ಕಲಿ ನಲಿ ತರಗತಿಗೆ 45 ನಿಮಿಷ ಇರುತ್ತದೆ .ನಲಿಕಲಿಯ 3 ವಿಷಯಗಳು  ಮತ್ತು 4 ನೆ ತರಗತಿಯ 4 ವಿಷಯಗಳು 5 ನೆ ತರಗತಿಯ 4 ವಿಷಯಗಳು ಹಾಗೆಯೇ ನಲಿಕಲಿ ತರಗತಿಗಳ 3 ಇಂಗ್ಲಿಷ್ ಸೇರಿದಂತೆ ಒಂದು ದಿನಕ್ಕೆ 14 ಅವಧಿ ಗಳನ್ನು ಒಬ್ಬ ಶಿಕ್ಷಕ ನಿರ್ವಹಿಸುವ ಸವಾಲು ಇಲ್ಲಿರುತ್ತದೆ ಕೇವಲ 7 ಅಥವ 8 ಪೀರಿಯಡ್ ಗಳಲ್ಲಿ ಇಷ್ಟೆಲ್ಲಾ ವಿಷಯಗಳನ್ನೂ  ಭೋದಿಸುವುದು ಸಾದ್ಯವೇ? , ಅದರಲ್ಲೂ ಬೇರೆ ಬೇರೆ ತರಗತಿಗಳಿಗೆ? .

ಇದರ ಜೊತೆಗೆ ಮೌಲ್ಯ ಶಿಕ್ಷಣ , ಕಾರ್ಯ ಶಿಕ್ಷಣ, ಸಹ ಪಠ್ಯ ಚಟುವಟಿಕೆಗಳು ಸಹ . ಸಮಯ ಹೊಂದಾಣಿಕೆ ಮಾಡಿಕೊಂಡು ಹೇಗೋ ನಿಭಾಯಿಸಿದರು ಕೂಡಾ ಮಕ್ಕಳಿಗೆ ಇದು ಅನ್ಯಾಯವೇ ಸರಿ . ಆಯಾ ತರಗತಿಯ ಮಕ್ಕಳಿಗೆ ಶಿಕ್ಷಕರ ಮಾರ್ಗದರ್ಶನದ ಅವಧಿ ಕಡಿತ ಗೊಳ್ಳುವುದು ಅಲ್ಲದೆ ಅವರೊಂದಿಗಿನ ಒಡನಾಟ, ಸಂವಹನ,ಕಡಿಮೆಯಾಗುತ್ತದೆ .ಸಿಗುವ ಅಲ್ಪ ಅವಧಿಯಲ್ಲೇ ಕಲಿಯುವ ಒತ್ತಡ ಉಂಟಾಗುತ್ತದೆ. ಸ್ವ ಕಲಿಕೆ ಸ್ವ ವೇಗದ ಕಲಿಕೆಗೆ ತಕ್ಕಂತೆ ಪುಸ್ತಕವನ್ನು ರೂಪಿಸಿದ್ದರೂ ಸಹ ಮಕ್ಕಳ ಮನಸಿನ ಜೊತೆ ಶಿಕ್ಷಕರ ಮಾರ್ಗದರ್ಶನ ನಿರಂತರವಾಗಿ ಸಂವಹನ ಮಾಡಿದರಷ್ಟೇ ಕಲಿಕೆ ಪರಿಣಾಮಕಾರಿಯಾಗಲು ಸಾಧ್ಯ .ಇಲ್ಲದೇ ಹೋದರೆ ಅದು ಹೊಳೆಯಲ್ಲಿ ಹುಣಸೆ ಹಣ್ಣನ್ನು ತೊಳೆದಂತೆಯೆ ಸರಿ.ಇನ್ನೂ cce ಗೆ ತಕ್ಕಂತೆ ಎಲ್ಲವನ್ನೂ ಯೋಜಿತವಾಗಿಯೆ ನಿರ್ವಹಿಸಿದರು ಕೂಡ ನಲಿಕಲಿ ಅಥವ 4 ಮತ್ತು 5 ನೆ ತರಗತಿ ಇಬ್ಬರಲ್ಲಿ ಒಬ್ಬರು ನೇರ ಮಾರ್ಗದರ್ಶನ ಪಡೆದರೆ ಮತ್ತೊಬ್ಬರು ತಾವೇ ಏನಾದರೂ ಮಾಡುತ್ತಾ ಕೂರಬೇಕಾಗುತ್ತದೆ.ಎಷ್ಟೇ ಯೋಜಿಸಿ ಯೋಚಿಸಿ ಚಟುವಟಿಕೆಗಳನ್ನು ರೂಪಿಸಿದರು ಸಹ  ಎಲ್ಲಾ ಸಂದರ್ಭಗಳಲ್ಲೂ ಅವು ನೂರಕ್ಕೆ ನೂರರಷ್ಟು ಪರಿಣಾಮಕಾರಿಯಾಗಿ ಕಲಿಕಾ ಸನ್ನಿವೇಶ ಸೃಷ್ಟಿಸಲಾರವು.

ಅದರ ಜೊತೆಗೆ ಅಕ್ಷರ ದಾಸೋಹ ಕ್ಷೀರಭಾಗ್ಯ ಶಾಲಾ ಕೈ ತೋಟ , ಶಾಲಾ ದಾಖಲಾತಿಗಳ ನಿರ್ವಹಣೆ ,ಮೌಲ್ಯ ಮಾಪನ,ಪರೀಕ್ಷೆಗಳು,sdmc ಸಭೆಗಳು, ಮುಖ್ಯ ಶಿಕ್ಷಕರ ಸಭೆಗಳು,ವಿದ್ಯಾರ್ಥಿ ವೇತನ,ಹಣಕಾಸು ವಿಷಯಗಳು,ಪ್ರತಿಭಾ ಕಾರಂಜಿ ಇನ್ನಿತರ ಕರ್ತವ್ಯಗಳ ನಿರ್ವಹಣೆಗೆ  ಇಲ್ಲಿ ಯಾರ ಸಹಕಾರವೂ ದೊರೆಯದು ಮುಖ್ಯವಾಗಿ ಸಹೋದ್ಯೋಗಿಗಳಿಂದ ದೊರೆಯುವ ಭಾವನಾತ್ಮಕ ಬೆಂಬಲ, ಶ್ರಮದ ಹಂಚಿಕೆ ಹಾಗೂ ವಿವಿಧ ಸವಾಲುಗಳನ್ನು ಎದುರಿಸುವಲ್ಲಿ ಬೇಕಾದ ಅನುಭವಗಳ ಪಾಠವು ಏಕೋಪಾದ್ಯಾಯ ಶಾಲೆಗಳಲ್ಲಿ ತಕ್ಷಣಕ್ಕೆ ದೊರೆಯಲಾರದು.

ಇಲ್ಲಿನ ಶಿಕ್ಷಕ ಯಾವುದೋ ಕಾರಣಗಳಿಂದಾಗಿ ರಜೆ ಪಡೆದಾಗಲೋ ಅಥವಾ ವೃತ್ತಿಪರ ತರಬೇತಿಗಳಿಗೆ ಹೋದಾಗಲೋ ಶಾಲಾ ಶೈಕ್ಷಣಿಕ ಚಟುವಟಿಕೆಗಳು ಭಾಗಶಃ ನಿಂತುಬಿಡುವ ಸಾಧ್ಯತೆಯೇ ಹೆಚ್ಚು . ಆ ಸಮಯದಲ್ಲಿ ಬೇರೆ ಶಾಲೆಯಿಂದ ಯಾರಾದರೂ ಬರುತ್ತಾರಾದರು ತರಗತಿ ಪರಿಸರದಲ್ಲಿನ ಪೂರ್ವನಿರ್ಧರಿತ ನಿರಂತರತೆಯನ್ನು ಖಂಡಿತ ಕಾಯ್ದುಕೊಳ್ಳಲಾಗದು .

ಇಷ್ಟೆಲ್ಲಾ ಸವಾಲು, ಇತಿಮಿತಿ ಗಳ ನಡುವೆಯೂ  ಶಿಕ್ಷಣ ನೀಡುವಿಕೆಯ ತಮ್ಮ ಮೂಲ ಉದ್ದೇಶಕ್ಕೆ ಕಿಂಚಿತ್ತೂ ಧಕ್ಕೆಯಾಗದಂತೆ ಹೇಗೋ ಹೊಂದಿಕೊಂಡು, ಸವಾಲುಗಳನ್ನು ಮೆಟ್ಟಿನಿಂತು ಮುದ್ದುಮಕ್ಕಳ ಭವಿಷ್ಯವನ್ನು ಕಟ್ಟುವ , ಅವರ ಬಾಲ್ಯವನ್ನು ಸಾರ್ಥಕವಾಗಿಸುವ ,ಅವರ ಆಸೆ ಆಕಾಂಕ್ಷೆ ಕನಸುಗಳಿಗೆ ಚಿಮ್ಮು ಹಲಗೆಯಾಗುವ ಕೆಲಸಗಳನ್ನು ಏಕೋಪಾದ್ಯಾಯ ಶಾಲೆಗಳು ಪರಿಣಾಮಕಾರಿಯಾಗಿ ಮಾಡುತ್ತಾ ಬಂದಿವೆ ಹಾಗೂ ಮಾಡುತ್ತವೆ ಕೂಡ.ಆದರೂ ಸಾಂಘಿಕ ಪ್ರಯತ್ನದಲ್ಲಿನ ಗುಣಮಟ್ಟವನ್ನು ಇಲ್ಲಿ ಕಾಣಲಾಗದು ಎಂಬ ಸತ್ಯವನ್ನು ಅನಿವಾರ್ಯವಾಗಿ ಒಪ್ಪಲೇಬೇಕಾಗಿದೆ ಮತ್ತು ಇಂತಹ ಅಸಹಾಯಕ ಸ್ಥಿತಿಯನ್ನು ತಪ್ಪಿಸಲು ಪ್ರತಿ ಏಕೋಪಾಧ್ಯಾ ಯ ಶಾಲೆಗೂ ಇನ್ನೊಬ್ಬ ಶಿಕ್ಷಕರನ್ನು ನೀಡಬೇಕಿದೆ.ಬಿಡುವಿನ ವಿರಾಮಗಳಲ್ಲಿ ಬ್ಯಾಟು ಬಾಲು  ಹಿಡಿದು” sir ಆಟ ಆಡುವ ಬನ್ನಿ” ಎನ್ನುವ ಮಕ್ಕಳ ಕೂಗಿಗೆ ಸ್ಪಂದಿಸಲಾರದ ಸ್ಥಿತಿ ಶಾಲೆಗಳಲ್ಲಿ ಸೃಷ್ಟಿಯಾಗದಿದ್ದರೆ ಮಾತ್ರ ಶಿಕ್ಷಣದ ಗುಣಮಟ್ಟಕ್ಕೊಂದು ಅರ್ಥವಿರುತ್ತದೆ.

ಮನು ಪುರ

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ...

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

kolsirsi vss issue…part -04 ನಾನೇ ಹೊಣೆ ನಾನೇ ಜವಾಬ್ದಾರಿ ಎಂದ ಸಿಇಒ ಮಾಳವಿ….

ಕೋಲ ಶಿರಸಿ vss ನ ಪ್ರಕರಣ ಹಗರಣದ ಸ್ವರೂಪ ಪಡೆದಿದೆ… ಈ ಅಪರಾ ತಪರಾ ರೂವಾರಿ ಸಿಇಒ/ ಸೆಕ್ರೆಟರಿ ಎಂಬುದು ನಿರ್ವಿವಾದ. ಈ ಬಗ್ಗೆ...

ಕೋಲಶಿರಸಿ vss ಆಡಳಿತ ಸಮೀತಿ & ಸಿಇಒ ವಿರುದ್ಧ ಇಲಾಖೆಗೆ ದೂರು

ಸಿದ್ದಾಪುರ ತಾಲೂಕಿನ ಕೋಲಶಿರಸಿ vss ನಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಹಿಂದೆ ಇರುವ ಹಾಲಿ ಆಡಳಿತ ಮಂಡಳಿ & ಸಿಇಒ/ ಕಾರ್ಯದರ್ಶಿ ಗಳ...

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರ ಜನಪರ ಎನ್ನುವ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಸಿದ್ದಾಪುರ ಕೋಲಶಿರ್ಸಿ ಸೇವಾ ಸಹಕಾರಿ ಸಂಘದ ಬಹುಕೋಟಿ ಹಗರಣದ ನಂತರ ಒಂದೊಂದೇ ಗುಟ್ಟುಗಳು ರಟ್ಟಾಗತೊಡಗಿವೆ. ಸಿದ್ದಾಪುರದ ಪ್ರಮುಖ ಸಹಕಾರಿಗಳು,...

Recommended For You

About the Author: Kanneshwar Naik

1 Comment

Leave a Reply

Your email address will not be published. Required fields are marked *