ಹುಲಿ ಬಂತು ಹುಲಿ ಆದರೆ ಹೆದರಿಕೆ ಇಲ್ಲ!


ಬಂಡಿಪುರ, ನಾಗರಹೊಳೆ ಪ್ರದೇಶದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಿದೆ ಎನ್ನುವ ವಾಸ್ತವ ಹೊರಬೀಳುವುದಕ್ಕೂ ಉತ್ತರ ಕನ್ನಡ ಜಿಲ್ಲೆಯ ಗಡಿ ತಾಲೂಕು ಸಿದ್ಧಾಪುರ ಮತ್ತು ಹೊನ್ನಾವರ ತಾಲೂಕಿನ ಗಡಿಭಾಗವಾದ ವಾಜಗೋಡು ಪಂಚಾಯತ್, ಹಲಗೇರಿ, ಮೆಣಸಿ, ಲಂಬಾಪುರ, ಸಂಪಕಂಡ, ಕ್ಯಾದಗಿ, ದೊಡ್ಮನೆ ಭಾಗದಲ್ಲಿ ಹುಲಿ ಕಂಡಿದೆ ಎನ್ನುವುದಕ್ಕೂ ಸುತಾರಾಂ ಸಂಬಂಧವಿಲ್ಲ.
ಆದರೆ, ಸಿದ್ದಾಪುರ ತಾಲೂಕಿನ ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ದಿವಾಕರ ನಾಯ್ಕ ಮತ್ತು ಸಂಪಕಂಡ, ವಾಜಗೋಡು,ಅರಶಿನಗೋಡು ಭಾಗದ ಕೆಲವು ಜನರು ಹೇಳುವಂತೆ ಸಿದ್ಧಾಪುರ ತಾಲೂಕು ಮತ್ತು ಕುಮಟಾ,ಹೊನ್ನಾವರ ತಾಲೂಕುಗಡಿಭಾಗಗಳಲ್ಲಿ ಹುಲಿ ಎಂದು ಭಾವಿಸಲಾದ ಚಿಟ್ಟೆ ಚಿರತೆ ಕಾಣಿಸಿಕೊಂಡಿದ್ದು ಸತ್ಯ!
ಈ ವಾರದ ಪ್ರಾರಂಭದಲ್ಲಿ ಸಂಪಕಂಡ, ವಾಜಗೋಡು, ಲಂಬಾಪುರ ಭಾಗದ ಜನರು ಹುಲಿಯ ಕೂಗನ್ನು ಕೇಳಿದ್ದಾರೆ.ಅಲ್ಲಲ್ಲಿ ಹುಲಿಹೆಜ್ಜೆ, ಹಿಕ್ಕೆ ಕಂಡಿದ್ದು ಹೌದು. ಆದರೆ ಅದು ಹುಲಿಯಲ್ಲ!
ಈ ಭಾಗದಲ್ಲಿ ಕಪ್ಪು ಚಿರತೆ, ಚಿಟ್ಟೆ ಚಿರತೆ ಸೇರಿದ ನಾಲ್ಕೈದು ಹುಲಿ ಜಾತಿಯ ವಿಭಿನ್ನ ಪ್ರಭೇದಗಳು ಓಡಾಡುವುದಿದೆ. ಇವುಗಳ ಹೊರ ಆಕೃತಿ ತುಸು ಭಿನ್ನವಾಗಿರುವುದು ಬಿಟ್ಟರೆ, ಇವೆಲ್ಲಾ ಚಿರತೆ ಜಾತಿಯ ಹುಲಿಗಳೇ.
ಸ್ಥಳಿಯರು, ಗ್ರಾಮಸ್ಥರು ಆತಂಕಪಟ್ಟಂತೆ ಈ ಭಾಗದಲ್ಲಿ ಈಗ ಹುಲಿ ಕಾಣಿಸಿಕೊಂಡಿಲ್ಲ. ಆದರೆ ಈ ಭಾಗದಲ್ಲಿ ಆಗಾಗ ಕಾಣಿಸಿಕೊಳ್ಳುವ ಕೆಲವು ಹುಲಿ ಜಾತಿಯ ಚಿರತೆಗಳು ಇಲ್ಲಿ ಕೂಗುತ್ತಿರುವುದು ಹೌದು ಎಂದಿದ್ದಾರೆ. ಸಿದ್ಧಾಪುರದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಬ್ದುಲ್ ಅಜೀಜ್.
ಸ್ಥಳಿಯರ ಆತಂಕ, ಮಾಹಿತಿ ಆಧರಿಸಿ, ಅರಣ್ಯ ಇಲಾಖೆಯ ಸಿಬ್ಬಂದಿ ಈ ಭಾಗದಲ್ಲಿ ಪರೀಕ್ಷಿಸಿದಾಗ ಹುಲಿ ಪ್ರಭೇದದ ಚಿರತೆಯೊಂದು ಈ ಭಾಗದಲ್ಲಿ ಸಂಚರಿಸಿದ್ದು ಧೃಢವಾಗಿದೆ.
ಈ ಭಾಗದಲ್ಲಿ ಚಿರತೆಗಳಿರುವುದು, ಕೂಗುವುದು ಸಾಮಾನ್ಯ. ಅವು ಜನರು, ಜಾನುವಾರುಗಳಿಗೆ ಯಾವುದೇ ತೊಂದರೆ ಮಾಡುವುದಿಲ್ಲ.ಹೆಚ್ಚೆಂದರೆ ಅವು ಕೋಳಿ, ನಾಯಿಗಳನ್ನು ಹೊತ್ತೊಯ್ಯಬಹುದು.
ಜನರು ಅವುಗಳ ಕೂಗು ಕೇಳಿಸಿದ ಭಾಗದಲ್ಲಿ ಪಟಾಕಿ ಸಿಡಿಸಿ, ಅವುಗಳನ್ನು ಬೆದರಿಸಬಹುದು. ಅವುಗಳಿಂದ ಜನರು, ಜನಜೀವನಕ್ಕೆ ಯಾವುದೇ ತೊಂದರೆ ಇಲ್ಲದಿರುವುದರಿಂದ ಅರಣ್ಯ ಇಲಾಖೆ ಅವುಗಳನ್ನು ಹಿಡಿಯುವುದಿಲ್ಲ.ಸ್ಥಳಿಯರು ಇಲಾಖೆಯ ನೆರವು ಪಡೆದು ಅವುಗಳನ್ನು ಬೆದರಿಸಿ, ಚದುರಿಸಬಹುದು ಎಂದಿದ್ದಾರೆ ಅಜೀಜ್ ಅಹಮದ್ ಶೇಖ್.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *