ಹುಚ್ಚಪ್ಪ ಮಾಸ್ತರ್ ಹರ್ಷದ ನೆನಪು

ನಿನ್ನೆ ರಾತ್ರಿ ದೊಡ್ಡಪ್ಪ ಹುಚ್ಚಪ್ಪ ಮಾಸ್ತರ್ ಇನ್ನಿಲ್ಲವಾದರು ಎಂಬ ಸುದ್ದಿ ಬಂತು..

ವಾರದ ಕೆಳಗೆ ಅಪ್ಪನೊಂದಿಗೆ ಹಾಸಿಗೆ ಹಿಡಿದಿದ್ದ ದೊಡ್ಡಪ್ಪ ಹುಚ್ಚಪ್ಪ ಮಾಸ್ತರ್ ಅವರನ್ನು ನೋಡಲು ಹೋದಾಗ ಅವರ ಆರೋಗ್ಯ ಪರಿಸ್ಥಿತಿ ತೀರಾ ಗಂಭೀರವಾಗಿತ್ತು. ಅಪ್ಪನನ್ನು ನೋಡಿದ್ದೇ ಗದ್ಗದಿತರಾಗಿದ್ದರು. ಅವರ ಅಂತಹ ಅನಾರೋಗ್ಯ ಸ್ಥಿತಿಯಲ್ಲೂ ಗಟ್ಟಿ ಧ್ವನಿಯಲ್ಲಿ ಮಾತಾಡಿದ ಅವರು, “ಉತ್ತರ ಕರ್ನಾಟಕದ ಸಣ್ಣಾಟಗಳು” ಅನ್ನುವ ಪುಸ್ತಕ ಬರೆದಿದ್ದೀನಿ ಎಂದರು. ನನ್ನನ್ನು ಕುರಿತು, “ಹರ್ಷಾ ನೀನು ಮತ್ತೇನು ಬರೆದೆ?” ಎಂದು ಕೇಳಿದರು. ಮತ್ತೆ ತಾವೇ ಮಾತು ಮುಂದುವರೆಸುತ್ತಾ, “ಮಲೆನಾಡಿನ ಗ್ರಾಮದೇವತೆಗಳು” ಎಂಬ ಪುಸ್ತಕ ಅರ್ಧ ಆಗಿದೆ, ಅದಕ್ಕೆ ಎಲ್ಲಾ ಫೀಲ್ಡ್ ಸ್ಟಡಿ ಮಾಡಿದ್ದು ಹಾಗೇ ಇದೆ… ಯಲಕುಂದ್ಲಿ ಬಳಿ ರಾಚಮ್ಮ, ದುರ್ಗಮ್ಮ ಹೀಗೆ ಎಂದು ನೆನಪಿಸಿಕೊಂಡು ಮಾತಾಡತೊಡಗಿದರು. ಅವರ ತೀವ್ರ ಅನಾರೋಗ್ಯ ಸ್ಥಿತಿಯಲ್ಲೂ ತಮ್ಮ ಓದು-ಬರವಣಿಗೆಗಳ ಬಗ್ಗೆ ಕನಸುತ್ತಿದ್ದ ರೀತಿ ಕಂಡು ನಮಗೆ ಆಶ್ಚರ್ಯ ದುಃಖ ಎರಡೂ ಆಯಿತು. ಕೊನೆಗೆ ಅಪ್ಪ, ಅವರ ಮಾತುಗಳಿಗೆ ತಾನೂ ಒಂದಷ್ಟು ಸೇರಿಸಿ, “ನಿನ್ನ ಅಧ್ಯಯನವನ್ನು ಒಂದು ಪುಸ್ತಕ ಮಾಡ್ತೀನಿ, ನಮ್ಮ ಜಾನಪದ ಕಣಜದಿಂದಲೇ ಪ್ರಕಟಣೆ ಮಾಡೋಣ, ಯೋಚನೆ ಮಾಡಬೇಡ” ಎಂದರು….

ನಾವೆಲ್ಲ ಚಿಕ್ಕವರಿದ್ದಾಗಲೇ ತಾಳಗುಪ್ಪ ಸಮಿಪದ ಹಿರೇಮನೆ ಎಂಬ ಊರಿನಲ್ಲಿ ಗಿರಿಜನ ವಸತಿ ಶಾಲಯಲ್ಲಿ ಮೇಸ್ಟ್ರಾಗಿ ನೇಮಕಗೊಂಡು ಅಲ್ಲಿಯೇ ನೆಲೆಸಿದ್ದ ಹುಚ್ಚಪ್ಪ ಮಾಸ್ತರ ಅವರು ನಾಡು ಕಂಡ ಅಪರೂಪದ ಜಾನಪದ ವಿದ್ವಾಂಸ. ಅದ್ಭುತ ಹಾಡುಗಾರ. ಒಂದು ಕಾಲದಲ್ಲಿ ಮಲೆನಾಡು ಸೀಮೆಯಲ್ಲಿ ಜಾನಪದ ಕ್ರಾಂತಿಯನ್ನೇ ಮಾಡಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಜಾನಪದ ರಂಗಸಂಕುಲ ಕುಗ್ವೆ ಎಂಬ ಸಂಘಟನೆ ಕಟ್ಟಿಕೊಂಡು, ಹಳ್ಳಿಗಳ ಹುಡುಗರಿಗೆ ತರಬೇತಿ ನೀಡಿ ಕೋಲಾಟದ ಹುಚ್ಚು ಹಿಡಿಸಿದ್ದರು. ಪತ್ತಾರ ಮಾಸ್ತರರ ಸಂಗ್ಯಾ ಬಾಳ್ಯಾ ಸಂಗೀತ ನಾಟಕವನ್ನು ಹೆಗ್ಗೋಡಿನ ಕೆ ವಿ ಸುಬ್ಬಣ್ಣ ಮೊದಲ ಸಲ ನಿರ್ದೇಶನ ಮಾಡಿದಾಗ ಇಡೀ ನಾಟಕದ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿ, ತಮ್ಮ ವಿಶಿಷ್ಟ ದಾಟಿಯಲ್ಲಿ ನಮ್ಮ ಭಾಗದಲ್ಲಿ ಜನಪ್ರಿಯತೆ ಉತ್ತುಂಗಕ್ಕೆ ಕೊಂಡೊಯ್ದರು. ನನ್ನ ಮತ್ತೊಬ್ಬ ದೊಡ್ಡಪ್ಪ – ಹುಚ್ಚಪ್ಪ ಮಾಸ್ತರ ಅವರ ತಮ್ಮ- ದಿವಂಗತ ಹನುಮಂತಪ್ಪ ಆಗ ಇವರೊಂದಿಗೆ ಹಾಡುಗಾರಿಕೆ ನಡೆಸುತ್ತಿದ್ದುದು ನನಗಿನ್ನೂ ನೆನಪಿದೆ. ಚಿಕ್ಕವನಾಗಿದ್ದ ನನಗೆ ಕಿರಿ ದೊಡ್ಡಪ್ಪ ಬಂದು ಸಂಗ್ಯಾ – ಬಾಳ್ಯಾ ನಾಟಕದ ಹಾಡುಗಳನ್ನು ಹಾಡುವುದನ್ನು ಕಲಿಸುತ್ತಿದ್ದರು. ಅಣ್ಣನಂತೆಯೇ ತಾನೂ ಅದ್ಭುತವಾಗಿ ಹಾಡುತ್ತಿದ್ದ ಹನುಮಂತಪ್ಪ ಅವರಿಗೆ ನಾನೂ ಹಾಡು-ಜಾನಪದಗಳಲ್ಲಿ ತೊಡಗಿಕೊಳ್ಳಬೇಕೆಂಬ ಬಯಕೆಯಿತ್ತು. ಆದರೆ ನಾನು ಪಿಯುಸಿಯಲ್ಲಿದ್ದಾಗಲೇ ಅವರು ಹೃದಯಾಘಾತದಿಂದ ನಿಧನರಾಗಿದ್ದು ನನಗೆ ಬದುಕು ನೀಡಿದ್ದ ದೊಡ್ಡ ಆಘಾತವಾಗಿತ್ತು.

ಹುಚ್ಚಪ್ಪ ಮಾಸ್ತರ ಅವರ ಹಾಡುಗಾರಿಕೆ ಅನನ್ಯವಾಗಿತ್ತು. ಸೋಬಾನೆ ಹಾಡುಗಳನ್ನು ಅವರು ಹಾಡತೊಡಗಿದರೆ ಅವರ ಕಂಠಸಿರಿಗೆ ಮರುಳಾಗದವರು ಯಾರೂ ಇರಲಿಲ್ಲ. ದುರದೃಷ್ಟವಶಾತ್ ಅವರ ಹಾಡುಗಾರಿಕೆಯ ಧ್ವನಿಮುದ್ರಣ ಲಬ್ಯವಿಲ್ಲವಾಗಿದೆ. ಹಾಡುಗಾರಿಕೆಯಲ್ಲಿ ಅವರಿಗೆ ಯಾವಾಗಲೂ ಸಾಥ್ ನೀಡುತ್ತಿದ್ದುದು ದೊಡ್ಡಮ್ಮ ಗೌರಮ್ಮ. ಚಿತ್ತಾರ ಬರೆಯುವುದರಲ್ಲಿಯೂ ಸಿದ್ಧಹಸ್ತರಾಗಿರುವ ಗೌರಮ್ಮ ಹುಚ್ಚಪ್ಪ ಮಾಸ್ತರ್ ಅವರ ಎಲ್ಲಾ ಸಾಧನೆಗಳ ಹಿಂದಿನ ಶಕ್ತಿಯಾಗಿರುವ ಗಟ್ಟಿ, ದಿಟ್ಟ ಮಹಿಳೆ.

ಕಳೆದ ಎಂಟತ್ತು ವರ್ಷಗಳ ಈಚೆಗೆ ದೊಡ್ಡಪ್ಪ ಹುಚ್ಚಪ್ಪ ಮಾಸ್ತರ್ ಅವರೊಂದಿಗೆ ಹಲವು ಸಂದರ್ಭಗಳಲ್ಲಿ ಮಾತುಕತೆಯಾಡುವ ಅವಕಾಶ ನನಗೆ ಸಿಕ್ಕಿತ್ತು. ಈ ನಿಕಟ ಸಂಪರ್ಕದಲ್ಲಿ ಜಾನಪದ, ಸಂಸ್ಕೃತಿ ಚಿಂತನೆಗಳಲ್ಲಿ ಅವರ ತಿಳುವಳಿಕೆ ಕಂಡು ನನಗಾಗಿರುವ ಸಂತೋಷ ಅಷ್ಟಿಷ್ಟಲ್ಲ.. ನಾನು ಬರೆದ ಯಾವುದಾದರೂ ಲೇಖನ ಪತ್ರಿಕೆಗಳಲ್ಲಿ ಓದಿರುತ್ತಿದ್ದ ಅವರು ನೆನಪಿಟ್ಟುಕೊಂಡು ನನ್ನ ಬರವಣಿಗೆ ಕುರಿತು ಸಹ ಅಭಿಮಾನ ವ್ಯಕ್ತಪಡಿಸುತ್ತಿದ್ದರು. ಜನಮಾನಸದಲ್ಲಿ ಸಾಂಸ್ಕೃತಿಕ ವಿವೇಕ ಜಾಗೃತವಾಗಬೇಕು ಎಂದು ಸದಾ ಬಯಸುತ್ತಿದ್ದ ಅವರು ತಮ್ಮ ಓದು, ಓಡಾಟಗಳಲ್ಲಿ ತಾವು ದಕ್ಕಿಸಿಕೊಂಡಿರುವ ವಿಚಾರಗಳನ್ನು ಜನಮಾನಸಕ್ಕೆ ತಲುಪಿಸಬೇಕು ಎಂಬ ತೀವ್ರ ಹಂಬಲ ಹೊಂದಿದ್ದರು. ಈ ನಿಟ್ಟಿನಲ್ಲಿ ಕಳೆದ ಒಂದು ದಶಕದಲ್ಲಿ ಅವರು ಹಸಲರ ಬುಡಕಟ್ಟಿನ ಕುರಿತು ಬರೆದ ಒಂದು ಕೃತಿ, ದೀವರ ಸಮುದಾಯದ ಬಗ್ಗೆ ಬರೆದ ಕೃತಿಗಳು, ಕಾಗೋಡು ಸತ್ಯಾಗ್ರಹದ ಕುರಿತು ಸಂಪಾದಿತ ಕೃತಿ ಪ್ರಕಟವಾಗಿವೆ. ಜಾನಪದ ಹಾಗೂ ಸಂಸ್ಕೃತಿ ಚಿಂತನೆಗಳ ಕುರಿತ ಅಪರೂಪದ ಸಾವಿರಾರು ಪುಸ್ತಕಗಳನ್ನು ಸಂಗ್ರಹಿಸಿದ್ದಾರೆ. ಪುಸ್ತಕಗಳ ನಿರ್ವಹಣೆ ಇರಲಿ, ಅವರ ಓದು, ಬರೆಹ ಯಾವುದರಲ್ಲೇ ಇರಲಿ ಅತ್ಯಂತ ಶಿಸ್ತಿನ ಜೀವನ ನಡೆಸಿ ತಮ್ಮ ಜೀವನ ಪಯಣವನ್ನು ಮುಗಿಸಿದ್ದಾರೆ. 
ಜಾನಪದ-ಸಂಸ್ಕೃತಿ ವಿದ್ವಾಂಸರಾಗಿ, ಪ್ರಗತಿಪರ ಚಿಂತಕರಾಗಿ ತಾವು ಬಿಟ್ಟು ಹೋದ ಪರಂಪರೆ-ಚಿಂತನೆಗಳ ಮೂಲಕ ದೊಡ್ಡಪ್ಪ ಹುಚ್ಚಪ್ಪ ಮಾಸ್ತರ್ ಯಾವತ್ತೂ ನಮ್ಮೊಂದಿಗೆ ಜೀವಿಸುತ್ತಿರುತ್ತಾರೆ. 
ದೊಡ್ಡಪ್ಪ ತೋರುತ್ತಿದ್ದ ಕಕ್ಕುಲಾತಿ, ಅಭಿಮಾನ ಯಾವತ್ತೂ ನನ್ನಲ್ಲಿ ಅಚ್ಚಳಿಯದೇ ಇರುತ್ತದೆ.

-ಹರ್ಷಕುಮಾರ ಕುಗ್ವೆ,ಸಾಗರ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ...

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

kolsirsi vss issue…part -04 ನಾನೇ ಹೊಣೆ ನಾನೇ ಜವಾಬ್ದಾರಿ ಎಂದ ಸಿಇಒ ಮಾಳವಿ….

ಕೋಲ ಶಿರಸಿ vss ನ ಪ್ರಕರಣ ಹಗರಣದ ಸ್ವರೂಪ ಪಡೆದಿದೆ… ಈ ಅಪರಾ ತಪರಾ ರೂವಾರಿ ಸಿಇಒ/ ಸೆಕ್ರೆಟರಿ ಎಂಬುದು ನಿರ್ವಿವಾದ. ಈ ಬಗ್ಗೆ...

ಕೋಲಶಿರಸಿ vss ಆಡಳಿತ ಸಮೀತಿ & ಸಿಇಒ ವಿರುದ್ಧ ಇಲಾಖೆಗೆ ದೂರು

ಸಿದ್ದಾಪುರ ತಾಲೂಕಿನ ಕೋಲಶಿರಸಿ vss ನಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಹಿಂದೆ ಇರುವ ಹಾಲಿ ಆಡಳಿತ ಮಂಡಳಿ & ಸಿಇಒ/ ಕಾರ್ಯದರ್ಶಿ ಗಳ...

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರ ಜನಪರ ಎನ್ನುವ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಸಿದ್ದಾಪುರ ಕೋಲಶಿರ್ಸಿ ಸೇವಾ ಸಹಕಾರಿ ಸಂಘದ ಬಹುಕೋಟಿ ಹಗರಣದ ನಂತರ ಒಂದೊಂದೇ ಗುಟ್ಟುಗಳು ರಟ್ಟಾಗತೊಡಗಿವೆ. ಸಿದ್ದಾಪುರದ ಪ್ರಮುಖ ಸಹಕಾರಿಗಳು,...

Recommended For You

About the Author: Kanneshwar Naik

Leave a Reply

Your email address will not be published. Required fields are marked *