ತಡರಾತ್ರಿ ಶಿರಸಿ ರಸ್ತೆಯಲ್ಲಿ ವಾಹನ ಬೆನ್ನಟ್ಟುವ ಪಾಪಿಗಳು ಖಾರ ಎರಚಿ ದರೋಡೆ ಮಾಡುವವರೆ?

ಮೊದಲಘಟನೆ-
ಅದು ಒಂದುದಿನದ ಚಳಿಯ ಮುಸ್ಸಂಜೆ ಸಿದ್ಧಾಪುರದ ಕಛೇರಿಯ ಕೆಲಸ ಮುಗಿಸಿ ತೆರಳಿದ ಯುವಜೋಡಿಯೊಂದು ಕಾನಸೂರ ವರೆಗೆ ಬೈಕ್‍ರೈಡ್ ಹೋಗಿ, ಕಾನಸೂರಿನಲ್ಲಿ ಗೋಬಿ, ಪಾವಭಜಿ ತಿಂದು ಹೊರಡುವ ಹೊತ್ತಿಗೆ ಸಂಜೆಯ 8 ಗಂಟೆಯ ಸಮಯ ಕಾನಸೂರು ಅರಣ್ಯ ಇಲಾಖೆ ನರ್ಸರಿಯಿಂದ ಈ ಜೋಡಿಯ ದ್ವಿಚಕ್ರ ವಾಹನವನ್ನು ಹಿಂಬಾಲಿಸಿದ ವ್ಯಕ್ತಿ ಬೈಕ್ ಚಲಾಯಿಸುತಿದ್ದ ಯುವಕನಿಗೆ ನಿರ್ಜನ ಪ್ರದೇಶದಲ್ಲಿ ಕಣ್ಣಗೆ ಖಾರ ಎರಚಿ ನಿಲ್ಲಿಸುವ ಪ್ರಯತ್ನ ಮಾಡಿದ್ದಾನೆ, ಆದರೆ ಹೆದರಿದ ಯುವಕ (ಅವಿವಾಹಿತ ಜೋಡಿ) ಗೆಳತಿಯ ಮಾರ್ಗದರ್ಶನದಂತೆ ಬೈಕ್ ಚಲಾಯಿಸಿ ಪಾರಾಗಿದ್ದಾನೆ. ಈ ಘಟನೆ ನಡೆದು ಪೊಲೀಸರ ತನಿಖೆಯಾಗಿ ಸ್ಫಷ್ಟ ವಿಚಾರ ತಿಳಿಯದೆ ಹಳೆ ವಿವಾದ ಅಥವಾ ಕೌಟುಂಬಿಕ ಕಲಹದ ಕಾರಣಕ್ಕೆ ಇದಾಗಿರಬಹುದೆಂದು ಪೊಲೀಸರು ಈ ಪ್ರಕರಣ ಕೈ ಬಿಟ್ಟಿದ್ದಾರೆ.
ಘಟನೆ-02-
ಒಂದು ನಿರ್ಜನ ರಾತ್ರಿಯ 2 ಗಂಟೆಯ ಸಮಯ ಗೋವಾ ಪ್ರವಾಸಕ್ಕೆ ತೆರಳಿದ್ದ ಎರಡು ಕುಟುಂಬಗಳ ಒಂದು ಕಾರು ಶಿರಸಿಗೆ ಬರುವ ವೇಳೆಗೆ ಮುಂಜಾನೆ 2 ಗಂಟೆ ಸಮೀಪಿಸಿದೆ.
ಶಿರಸಿ ನೀಲೇಕಣಿಯಿಂದ ಈ ಹೊರಜಿಲ್ಲೆಯ ನೋಂದಣಿ ಸಂಖ್ಯೆ ಇದ್ದ ಕಾರನ್ನು ಒಂದು ಬೈಕ್ ಫಾಲೋ ಮಾಡಿದೆ. ಹಿಂದಿನ ಘಟನೆಯ ಅರಿವಿದ್ದ ಈ ಕಾರಿನ ಜನ ವೇಗವಾಗಿ ಸಿದ್ಧಾಪುರ ಕಡೆ ಬರುತಿದ್ದಂತೆ 15-16 ಕಿ.ಮೀ. ಗೂ ಹೆಚ್ಚು ಫಾಲೋ ಮಾಡಿ ನಂತರ ಮನೆಗಳಿರುವ ಪ್ರದೇಶದ ಸಮೀಪ ಹಿಂದೆ ಸರಿದ ಬೈಕ್ ಸವಾರ ನಂತರ ಕಂಡಿಲ್ಲ.
ಈ ಘಟನೆಯ ಬಗ್ಗೆಯೂ ಪೊಲೀಸರಿಗೆ ತಿಳಿಸಲಾಗಿದೆ ಎನ್ನುತ್ತಾರೆ ಭಾದಿತರು ಈ ಎರಡೂ ಘಟನೆಗಳ ಸಾರಾಂಶವೆಂದರೆ…… ಶಿರಸಿ-ಸಿದ್ಧಾಪುರ ಮಾರ್ಗದಲ್ಲಿ ರಾತ್ರಿ ವೇಳೆ ವಾಹನ ಸವಾರರನ್ನು ಬೆನ್ನಟ್ಟುವ ಮುಸುಕುಧಾರಿ ದ್ವಿಚಕ್ರವಾಹನ ಸವಾರರು ಏನೋ ಸಂಚು ನಡೆಸುತ್ತಿರುವುದಂತೂ ಖಾತ್ರಿ.
ಜಿಲ್ಲಾ ಕೇಂದ್ರ ಕಾರವಾರಕ್ಕೆ ತೆರಳಿದವರು, ಗೋವಾಕ್ಕೆ ತೆರಳಿ ತಡರಾತ್ರಿ ಮರಳುವ ಸಿದ್ದಾಪುರ, ಸಾಗರ ಸೇರಿದ ಅನೇಕ ಪ್ರವಾಸಿಗಳು ಹೀಗೆ ಈ ಮಾರ್ಗದಲ್ಲಿ ರಾತ್ರಿ ವೇಳೆ ಖಾಸಗಿ ಲಘುವಾಹನಗಳಲ್ಲಿ ಹೋಗುವವರು ತಡರಾತ್ರಿ ಮುಸುಕುಧಾರಿ ಬೈಕ್ ಸವಾರರಿಗೆ ಎದುರಾಗುತ್ತಿರುವ ಸಂಗತಿ ಸಿದ್ದಾಪುರದಲ್ಲಿ ಚರ್ಚೆಯಾಗಿ ಪೊಲೀಸ್ ಠಾಣೆ ತಲುಪಿದೆ. ಪೊಲೀಸರು ಈ ಘಟನೆಗಳ ಆಧಾರದಲ್ಲಿ ಗಸ್ತು ಪ್ರಾರಂಭಿಸಿದ್ದಾರೆ ಎನ್ನುವ ಸುದ್ದಿಯಿದೆ.
ಶಾಂತ ಜಿಲ್ಲೆ, ಸುಸಂಸ್ಕøತರ ತಾಲೂಕುಗಳೆಂಬ ಹೆಗ್ಗಳಿಕೆ ಇರುವ ಶಿರಸಿ-ಸಿದ್ಧಾಪುರ ರಸ್ತೆಗಳಲ್ಲಿ ಇಂಥ ಘಟನೆಗಳಾಗಿರುವುದು ಪೊಲೀಸರನ್ನು ಎಚ್ಚರಿಸಿದಂತಾಗಿದೆ.
ತಡರಾತ್ರಿ ವಾಹನ ಸವಾರಿ ಮಾಡುವವರು, ಅಪರಾಧ ನಿಯಂತ್ರಿಸಬೇಕಾದ ಸ್ಥಳಿಯ ಪೊಲೀಸರು ಈಗ ಈ ಘಟನೆಗಳಿಂದಾಗಿ ಹುಲಿ ಸವಾರಿ ಮಾಡುವಂತಾಗಿರುವ ಅನುಭವಕ್ಕೆ ತುತ್ತಾಗುತ್ತಿರುವುದು ಈ ವಾರದ ಹೊಚ್ಚ ಹೊಸ ಸುದ್ದಿಯಂತೂ ಅಲ್ಲ.!

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *