ಶರಾವತಿ ಅಭಯಾರಣ್ಯಕ್ಕೆ ಗ್ರಾಮಗಳ ಸೇರ್ಪಡೆ, ಹೆಗ್ಗರಣಿಯಲ್ಲಿ ಮಾ.3 ರಂದು ಪ್ರತಿಭಟನೆ

ಶಿವಮೊಗ್ಗ ಶರಾವತಿ ಅಭಯಾರಣ್ಯಕ್ಕೆ ಸಿದ್ದಾಪುರ ತಾಲೂಕಿನ ಕೆಲವು ಗ್ರಾಮಗಳನ್ನು ಸೇರಿಸುವ ಸರ್ಕಾರದ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಲು ಮಾರ್ಚ 3 ಮುಂಜಾನೆ 10 ಘಂಟೆಗೆ ಹೆಗ್ಗರಣೆ ಸೊಸೈಟಿಯ ಹತ್ತಿರ ಬೃಹತ್ ಪ್ರತಿಭಟನಾ ಸಭೆ ಜರುಗಿಸಲು ನಿರ್ಧರಿಸಲಾಗಿದೆ.
ತಂಡಾಗುಂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗೆಯ ಈಶ್ವರ ದೇವಾಲಯದ ಆವರಣದಲ್ಲಿ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂಧ್ರ ನಾಯ್ಕ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಈ ಬಗ್ಗೆ ನಿರ್ಣಯಿಸಲಾಯಿತು.
ಶಿವಮೊಗ್ಗ ಶರಾವತಿ ಅಭಯಾರಣ್ಯಕ್ಕೆ ಸಿದ್ದಾಪುರ ತಾಲೂಕಿನ ನಿಲ್ಕುಂದ, ಮುಳಗುಂದ, ಹಳ್ಳಿಬೈಲ್, ಉಂಚಳ್ಳಿ, ಶಿವಳಮನೆ, ಹುಕ್ಕಳಿ, ಶಜಗುಳಿ, ನೈಗಾರ, ಕಡವಾಡ, ಹೊನ್ನೆಕೊಪ್ಪ, ನೀರಗೋಡ, ಸುರಗಾಲ, ಹೇಮಗಾರ, ಹೆಜನಿ, ಕುಡಗುಂದ, ಮಲೆಮನೆ, ಸೂತ್ಲಮನೆ, ವಾಜಗೋಡ, ದಾನಮಾಂವ, ತೇಳಿಕೇರಿ, ಮುಂತಾದ 20 ಗ್ರಾಮಗಳ 9045.73 ಹೇಕ್ಟೇರ್ ಪ್ರದೇಶ ಸೇರ್ಪಡೆಗೊಂಡಿರುವುದರಿಂದ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಕಳೆದ ವರ್ಷ ಜೂನ್ 7 ರಂದು ಸರಕಾರ ಆದೇಶ ಹೊರಡಿಸಿದರೂ, ಇಲ್ಲಿಯವರೆಗೂ ಜನರಿಗೆ ಕತ್ತಲೆಯಲ್ಲಿ ಇಟ್ಟು ಯೋಜನೆ ಜಾರಿಗೆ ಸರಕಾರ ನಿರ್ಧರಿಸುವುದಕ್ಕೆ ಸಭೆಯಲ್ಲಿ ಸರಕಾರದ ನೀತಿಯನ್ನು ಖಂಡಿಸಲಾಯಿತು. ಅಲ್ಲದೇ ಸರಕಾರದ ಜನವಿರೋಧಿ ನೀತಿಯನ್ನು ಬಹಿರಂಗ ಹಾಗೂ ಕಾನೂನಾತ್ಮಕ ಹೋರಾಟದ ಮೂಲಕ ಪ್ರತಿಭಟಿಸಲು ಸಭೆ ನಿರ್ಧರಿಸಿದೆ.
ಸಭೆಯನ್ನು ಉದ್ದೇಶಿಸಿ ಸೀತಾರಾಮ ಲಿಂಗ ಗೌಡ ಹುತ್ಗಾರ, ಶೇಖರ ನಾಯ್ಕ ಹೆಗ್ಗರಣಿ, ನಾಗಪತಿ ಗೌಡ ಹುತ್ಗಾರ, ಸೀತಾರಾಮ ಹುಲಿಯಾ ಗೌಡ ಹುಕ್ಕಳಿ, ಸುರೇಶ ಹೆಗಡೆ ತಂಡಾಗುಂಡಿ ಮುಂತಾದವರು ಮಾತನಾಡಿದರು.
ವೇದಿಕೆಯ ಮೇಲೆ ಲಿಂಗ ಬೀರಾ ಗೌಡ ನಿಲ್ಕುಂದ, ಗಣಪ ಯಂಕ ಗೌಡ ತಾರಿಮನೆ, ವೆಂಕಟಮ ನಾಯ್ಕ ಕೊಪ್ಪದಜಡಿ, ಉಪಸ್ಥಿತರಿದ್ದರು. ಹರಿಹರ ನಾಯ್ಕ ಸ್ವಾಗತಿಸಿ ವಂದಿಸಿದರು.
ಜನರ ತೀವ್ರ ಆಕ್ಷೇಪ:
ಜನರಿಗೆ ಕತ್ತಲೆಯಲ್ಲಿ ಇಟ್ಟು, ಜನರ ವಿಶ್ವಾಸ ತೆಗೆದುಕೊಳ್ಳದೇ ಏಕಾಎಕಿಯಾಗಿ ಅಭಯಾರಣ್ಯ ಪ್ರದೇಶಕ್ಕೆ ಗ್ರಾಮಗಳ ಸೇರ್ಪಡೆಗೆ ಜನರ ತೀವ್ರ ಆಕ್ಷೇಪವಿದ್ದು, ಈ ಯೋಜನೆಯಿಂದ ಸ್ಥಳೀಕರು ಭಯ ಭೀತರಾಗಿದ್ದಾರೆ. ಸರಕಾರ ಈ ದಿಶೆಯಲ್ಲಿ ಜನರ ವಿಶ್ವಾಸಗಳಿಸಬೇಕೆಂದು ತಂಡಾಗುಂಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹರಿಹರ ನಾಯ್ಕ ಸಭೆಯಲ್ಲಿ ಆಕ್ಷೇಪಿಸಿದರು.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *