ಪ್ರೀತಿಯ #ಟ್ರಂಪ್ ಅಂಕಲಿಗೆ, ವೈದ್ಯಕೀಯ ವಿದ್ಯಾರ್ಥಿ ಬರೆದ ಪತ್ರ

#ಕ್ಯೂಬಾದ ವೈದ್ಯಕೀಯ ವಿದ್ಯಾರ್ಥಿಯ #ಪತ್ರ

ಪ್ರೀತಿಯ #ಟ್ರಂಪ್ ಅಂಕಲಿಗೆ,

ನಿಮ್ಮ ಶ್ವಾಸಕೋಶಗಳಲ್ಲಿ ನೀರು ತುಂಬಿದೆ
ನಮ್ಮ ಕಣ್ಣುಗಳಲ್ಲಿ ಆಶ್ರು ತುಂಬಿದೆ
ವ್ಯಂಗ್ಯಕ್ಕಿದು ಕಾಲವಲ್ಲ
ನಮ್ಮ ಕೈಗಳು ನಿಮ್ಮ ಆರೈಕೆಗೆ ಸಿದ್ಧವಾಗಿವೆ
ಆದರೆ ನಮ್ಮ ಕೈಗಳು ನಮ್ಮಲಿಲ್ಲ
ನಮ್ಮ ಕೈಗಳನ್ನು ಕತ್ತರಿಸಲಾಗಿದೆ
ಆ ಕೈಯ್ಯೊಂದು ನಿಮ್ಮಲ್ಲಿದೆ

ನಮ್ಮ ಬೇಡಿಯನ್ನು ಕಳಚಿದ ಕೈಯ್ಯೊಂದು ನಿಮ್ಮಲ್ಲಿದೆ
ನಮ್ಮ ಕಣ್ಣೀರನೊರೆಸಿದ ಕೈಯ್ಯೊಂದು ನಿಮ್ಮಲ್ಲಿದೆ
ನಮ್ಮನ್ನು ಅಪ್ಪಿ ಮುದ್ದಿಸಿದ್ದ ಕೈಯ್ಯೊಂದು ನಿಮ್ಮಲ್ಲಿದೆ
ದಯವಿಟ್ಟು ಆ ಕೈಯ್ಯೊಂದನು ಮರಳಿಸಿ
ಅಂದು ಬೊಲಿವಿಯಾದಲ್ಲಿ ಸೆರೆಸಿಕ್ಕಾಗ
ನೀವು ಕತ್ತರಿಸಿ ಕೊಂಡೊಯ್ದ ಆ ಕೈಯ್ಯನು
ಒಮ್ಮೆ ಮರಳಿಸಿ,
ನೀವು ಕತ್ತರಿಸಿದ*
ನಮ್ಮ ಚೇ ಗುವಾರನ
ಕೈಯ್ಯನ್ನೊಮ್ಮೆ ಮರಳಿಸಿ

— ಪುನೀತ್ ಅಪ್ಪು
08-04-2020

*ಬೊಲಿವಿಯಾದಲ್ಲಿ ಅಮೇರಿಕಾ ಸೇನೆಗೆ ಸೆರೆಸಿಕ್ಕ ಚೆ ಗುವೇರಾನನ್ನು ಗುಂಡು ಹಾರಿಸಿಕೊಂದ ಬಳಿಕ ಅಮೇರಿಕನ್ ಸೈನಿಕರು ಆತನ ಎರಡೂ ಹಸ್ತಗಳನ್ನು ಕತ್ತರಿಸಿ ಅಮೇರಿಕಾ ದೇಶಕ್ಕೆ ಕೊಂಡೊಯ್ದಿದ್ದರು.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *