ಉ.ಕ.21 ಪ್ರಕರಣ,ಕಾರವಾರಸಿದ್ಧಾಪುರಗಳ ಕೆಲವು ಕಡೆ ಸೀಲ್ಡೌನ್

ಈ ವಾರದ ಕರೋನಾ ಆರ್ಭಟ ಮುಂದುವರಿದಿದ್ದು ಉತ್ತರಕನ್ನಡ ಜಿಲ್ಲೆಯ ಒಟ್ಟೂ 21 ಜನರಲ್ಲಿ ಇಂದು ಕರೋನಾ ದೃಢಪಟ್ಟಿದೆ. ಕಾರವಾರದ10,ಸಿದ್ಧಾಪುರದ5,ಹಳಿಯಾಳ,ಯಲ್ಲಾಪುರಗಳ ತಲಾ 2, ಭಟ್ಕಳ,ಶಿರಸಿ, ಹೊನ್ನಾವರ,ಮುಂಡಗೋಡಗಳ ತಲಾ ಒಬ್ಬರಲ್ಲಿ ಕರೋನಾ ದೃಢಪಟ್ಟಿರುವುದನ್ನು ಆರೋಗ್ಯ ಇಲಾಖೆ ಖಚಿತ ಪಡಿಸಿದೆ.

ಸಿದ್ಧಾಪುರ-ಕಾರವಾರಗಳ ಕೆಲವೆಡೆ ಶೀಲ್ ಡೌನ್-

ಜಿಲ್ಲೆಯ ಕಾರವಾರದಲ್ಲಿ ಇಂದು ಅತಿಹೆಚ್ಚು ಜನರಲ್ಲಿ ಕರೋನಾ ದೃಢಪಟ್ಟಿರುವುದರಿಂದ ಻಻ಅಲ್ಲಿಯ ಕೆಲವೆಡೆ ಶೀಲ್ ಡೌನ್ ಮಾಡಲಾಗಿದೆ.

ಸಿದ್ಧಾಪುರದಲ್ಲಿ ಇದೇ ಮೊದಲು ಒಂದೇ ದಿವಸ 5 ಜನರಲ್ಲಿ ಕರೋನಾ ದೃಢಪಟ್ಟಿದ್ದು ಸಿದ್ಧಾಪುರದ ತಾಲೂಕಾ ಆಸ್ಫತ್ರೆಯ ಎರಡು ಜನ ಸಿಬ್ಬಂದಿಗಳಲ್ಲಿ ಕರೋನಾ ಸೋಂಕು ಪತ್ತೆಯಾಗಿದೆ. ಈ ಇಬ್ಬರಲ್ಲಿ ಒಬ್ಬರು ಶಿವಮೊಗ್ಗ ಜಿಲ್ಲೆ ಶಿಕಾರಿಪುರದಿಂದ ಬಂದು ಹೋಗುತಿದ್ದವರಾದರೆ, ಇನ್ನೊಬ್ಬರು ಶಿರಸಿಯಿಂದ ಪ್ರತಿದಿನ ಸಿದ್ಧಾಪುರ ಆಸ್ಫತ್ರೆಗೆ ಬರುತಿದ್ದ ಸಿಬ್ಬಂದಿ. ಈ ಕಾರಣಕ್ಕೆ ಸರ್ಕಾರಿ ಆಸ್ಫತ್ರೆ ಶೀಲ್ ಡೌನ್ ಆಗಿದ್ದು ಕೆಲವು ಖಾಸಗಿ ಆಸ್ಫತ್ರೆಗಳೂ ಕೂಡಾ ಈ ಸುದ್ದಿ ತಿಳಿದು ಸ್ವಯಂ ಶೀಲ್ ಡೌನ್ ನ ಮುಂಜಾಗೃತೆಗೆ ಒಳಗಾಗಿವೆ.

ಸಿದ್ಧಾಪುರದ ಹೊಸೂರಿನ ಇಬ್ಬರು ಸಹೋದರಿಯರಲ್ಲಿ ದೃಢ ಪಟ್ಟ ಕರೋನಾ ಸೋಂಕಿನ ಮೂಲ ಬೆಂಗಳೂರು ಎನ್ನಲಾಗಿದ್ದು ಈ ಸಹೋದರಿಯರು ಇದೇ ವಾರ ಬೆಂಗಳೂರಿನಿಂದ ಸಿದ್ಧಾಪುರಕ್ಕೆ ಮರಳಿದ್ದರು. ಇವರ ಮನೆ ಇರುವ ಪ್ರದೇಶದ ಕುಮಟಾ ರಸ್ತೆ ಮಡಿವಾಳ ಕೇರಿಯ ಕೆಲವು ಭಾಗವನ್ನು ಶೀಲ್ ಡೌನ್ ಮಾಡಲಾಗಿದೆ.

ಸಿದ್ದಾಪುರ ವಾಟಗಾರಿನ ಬೆಂಗಳೂರಿನಿಂದ ನಾಲ್ಕು ದಿವಸಗಳ ಹಿಂದೆ ಮರಳಿದ್ದ ಯುವಕನಲ್ಲಿ ಕರೋನಾ ದೃಢವಾಗಿದ್ದು ಈ ಯುವಕ ಮತ್ತು ಅವರ ಕುಟುಂಬ ಈ ಹಿಂದಿನ ನಾಲ್ಕು ದಿವಸಗಳಿಂದ ಸ್ವಯಂ ಹೋಮ್ ಕಾರಂಟೈನ್ ಆಗಿದ್ದ ಬಗ್ಗೆ ಸ್ಥಳಿಯರು ಮಾಹಿತಿ ನೀಡಿದ್ದಾರೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *