ಬೇನಾಮಿ ಪತ್ರದ ಮೂಲಕ ಪೊಲೀಸ್ ಅಧಿಕಾರಿಗಳ ವಿರುದ್ಧ ದೂರು ನಾನಲ್ಲ ಎಂದ ಕೆ.ಜಿ. ನಾಯ್ಕ!

ಸಿದ್ಧಾಪುರದ ಪೊಲೀಸ್ ಠಾಣೆಯಲ್ಲಿ ಸದಾ ಎರಡು ಗುಂಪುಗಳಿರುತ್ತವೆ ಎಂಬುದು ಬಹಿರಂಗ ಗುಟ್ಟು, ಈ ಗುಟ್ಟನ್ನು ಇಂದು ಮತ್ತೆ ಪುನರುಚ್ಛರಿಸಿದವರು
ಜಿಲ್ಲಾ ಬಿ.ಜೆ.ಪಿ. ಮಾಜಿ ಅಧ್ಯಕ್ಷ ಕೆ.ಜಿ.ನಾಯ್ಕ ಹಣಜಿಬೈಲ್.
ಇಂದು ನಡೆದ ಪೊಲೀಸ್ ವರಿಷ್ಠಾಧಿಕಾರಿಗಳ ಜನಸಂಪರ್ಕ ಸಭೆಯಲ್ಲಿ ಸೇರಿದ್ದ ಅನೇಕರು ಥರಾವರಿ ದೂರು-ದುಮ್ಮಾನಗಳನ್ನು ಹೇಳಿಕೊಂಡರು. ಹೀಗೆ ದೂರು, ದುಮ್ಮಾನ, ಆರೋಪ ಮಾಡಿದವರಲ್ಲಿ ಕಿ.ಜಿ. ನಾಯ್ಕ ಹಣಜಿಬೈಲ್ ಒಬ್ಬರು.


ಹೀಗೆ ಕೆ.ಜಿ. ನಾಯ್ಕ ಹಣಜಿಬೈಲ್ ಪತ್ರ ಬರೆದವನು ನಾನಲ್ಲ ಎಂದು ಸಮಜಾಯಿಸಿಕೊಡಲು ಒಂದು ಪ್ರಬಲ ಕಾರಣವೇ ಇದೆ. ಸಿದ್ಧಾಪುರದ ಪೊಲೀಸ್ ಅಧಿಕಾರಿಗಳನ್ನು ಉದ್ದೇಶಿಸಿ, ಅವರ ಮೇಲೇ ಆರೋಪಿಸಿ ಜಿಲ್ಲಾ ಪೊಲೀಸ್ ವರಿಷ್ಠರಿಗೆ ಎರಡ್ಮೂರು ಪತ್ರಗಳು ರವಾನೆಯಾಗಿವೆ, ಹೀಗೆ ಕೇ,ಜಿ,ನಾಯ್ಕರ ಹೆಸರು, ಸಹಿ ದುರುಪಯೋಗಮಾಡಿಕೊಂಡು ಇಂಥ ಪತ್ರ ಬರೆದ ಬೇನಾಮಿ ವ್ಯಕ್ತಿಯಾರೋ ಯಾರಿಗೂ ತಿಳಿದಿಲ್ಲ. ಆದರೆ ಈ ಬೇನಾಮಿ ಪತ್ರದ ಸಾರಾಂಶ ಇಲ್ಲಿಯ ಪೊಲೀಸ್ ಠಾಣೆಯ ಬಣ, ಗುಂಪುಗಾರಿಕೆ ಕುರಿತದ್ದು. ಇಂಥ ಬೇನಾಮಿ ಪತ್ರ ಬರೆಯುವ ಜಾಯಮಾನ ನನ್ನದಲ್ಲ, ಆದರೆ ನನ್ನ ಹೆಸರಿನಲ್ಲಿ ಬೇನಾಮಿ ಪತ್ರ ಬರೆದವರನ್ನು ಪತ್ತೆ ಹಚ್ಚದಿದ್ದರೆನಮಗೇ ಕೆಟ್ಟ ಹೆಸರು ಎಂದು ಕೆ.ಜಿ. ನಾ. ಸ್ಪಷ್ಟನೆನೀಡಿದರು. ಇಂಥ ಬೇನಾಮಿ ಪತ್ರದ ಮೂಲಕ ಕೆ.ಜಿ.ನಾಯ್ಕ ಹೆಸರು ಕೆಡಿಸಿ ಪೊಲೀಸರ ನಡುವೆ ಕಂದಕ ಸೃಷ್ಟಿಸುವ ದುರುದ್ದೇಶ ಹೊಂದಿದವರ್ಯಾರು? ಸಿದ್ಧಾಪುರದಲ್ಲಿ ನಡೆಯುತ್ತಿರುವ ಜಾತಿರಾಜಕೀಯ, ಬಣರಾಜಕೀಯ, ಶೂದ್ರವಿರೋಧಿ ಸಂಘಿದುಷ್ಟತನದ ಪಾಲು ಈ ಬೇನಾಮಿ ಪ್ರಕರಣದ ಹಿಂದಿದೆಯೆ? ಎನ್ನುವ ಪ್ರಶ್ನೆಗಳು ಈಗ ಎದ್ದಿವೆ. ಈ ಬಗ್ಗೆ ವಾಸ್ತವದ ವಿಡಿಯೋ samajamukhi.net ನ samaajamukhi ಯು ಟ್ಯೂಬ್ ಚಾನೆಲ್ ನಲ್ಲಿದೆ.https://www.youtube.com/watch?v=AnyDZWvOb4k&t=119s

(related)ಅಕ್ರಮ ಮದ್ಯ ಮಾರಾಟ ಮತ್ತು ಪ್ರವಾಸಿ ಸ್ಥಳಗಳಲ್ಲಿ ತ್ಯಾಜ್ಯ ಎಸೆಯುವ ವಿದ್ಯಮಾನವನ್ನು ನಿಯಂತ್ರಿಸುವುದು ಸೇರಿದಂತೆ ಸೈಬರ್ ಅಪರಾಧ ಮತ್ತು ಇತರ ಅಪರಾಧಗಳನ್ನು ತಡೆಯಲು ಕ್ರಮಕೈಗೊಳ್ಳುವುದಾಗಿ ಉತ್ತರ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಸಾದ ದೇವರಾಜ್ ತಿಳಿಸಿದ್ದಾರೆ. ಸಿದ್ಧಾಪುರ ಪಟ್ಟಣ ಪಂಚಾಯತ್ ಸಭಾಭವನದಲ್ಲಿ ಸಾರ್ವಜನಿಕ ಸಂಪರ್ಕ ಸಭೆ ನಡೆಸಿದ ನಂತರ ಮಾತನಾಡಿದ ಅವರು ಅಕ್ರಮಮದ್ಯ ಮಾರಾಟ, ಸೈಬರ್ ಕ್ರೈಂ ಸೇರಿದಂತೆ ಕೆಲವು ವಿಚಾರಗಳ ಬಗ್ಗೆ ದೂರು ಬರುತ್ತಿದೆ. ಈ ಬಗ್ಗೆ ಪೊಲೀಸ್ ಇಲಾಖೆಯ ಕೆಲಸ ನಡೆಯುತ್ತಿರುತ್ತದೆ ಆದರೆ ಮದ್ಯ ಮಾರಾಟ ಮಾಡುವ ಜನರ ಮೇಲೆ ಕ್ರಮ ಜರುಗಿಸಲು ಸ್ಥಳಿಯ ಸಂಸ್ಥೆಗಳೀಗೆ ಅಧಿಕಾರವಿದೆ ಆ ಅಧಿಕಾರ ಬಳಸಿ ಅಕ್ರಮ ಮದ್ಯ ಮಾರಾಟ ತಡೆಯಬಹುದು ಎಂದರು.


ಸಭೆಯಲ್ಲಿ ತಾಲೂಕಿನ ಅಕ್ರಮಗಳು, ಅವ್ಯವಹಾರಗಳು, ಜನಸಾಮಾನ್ಯರಿಗಾಗುತ್ತಿರುವ ತೊಂದರೆ ಬಗ್ಗೆ ಚರ್ಚಿಸಲಾಯಿತು. ನಗರದಲ್ಲಿ ರಸ್ತೆ ಮೇಲೆ ವಾಹನ ನಿಲ್ಲಿಸುವುದು, ಮುಖ್ಯರಸ್ತೆಗಳಲ್ಲಿ ತ್ಯಾಜ್ಯ ಎಸೆಯುವುದು, ಅಮಾಯಕರಿಗೆ ಹೆಸರಿಸಿ ತೊಂದರೆ ಕೊಡುವುದು ಸೇರಿದಂತೆ ಕೆಲವು ತೊಂದರೆಗಳ ಬಗ್ಗೆ ಚರ್ಚೆ ನಡೆಯಿತು.https://www.youtube.com/watch?v=AnyDZWvOb4k&t=119s

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *