ಗ್ರಾ.ಪಂ. ಚುನಾವಣೆ- ಪಕ್ಷವಿಲ್ಲ ಬಂಡಾಯಕ್ಕೆ ಬರವಿಲ್ಲ!

ರಾಜ್ಯದಲ್ಲಿ ಎರಡು ಹಂತಗಳಲ್ಲಿ ಗ್ರಾಮ ಪಂಚಾಯತ್ ಚುನಾವಣೆ ನಡೆಯುತ್ತಿದೆ. ಬಿ.ಜೆ.ಪಿ. ಜೊತೆ ಹೊಂದಾಣಿಕೆ ಮಾಡಿಕೊಂಡಿರುವ ಜೆ.ಡಿ.ಎಸ್. ಬಿ.ಜೆ.ಪಿ.ಯೊಂದಿಗೆ ವಿಲೀನವಾಗುವ ಮೊದಲು ಚುನಾವಣೆ ಪೂರ್ವ ಸೋಲು ಒಪ್ಪಿಕೊಂಡಿದೆ.

ರಾಜ್ಯದ ಆಡಳಿತಾರೂಢ ಬಿ.ಜೆ.ಪಿ. ತಂತ್ರ-ಮಂತ್ರಗಳಿಂದ ಗ್ರಾಮಪಂಚಾಯತ್ ಚುನಾವಣೆ ಗೆಲ್ಲುವ ಪ್ರಯತ್ನದಲ್ಲಿದೆ. ಕಾಂಗ್ರೆಸ್ ಕೂಡಾ ತನ್ನ ಪ್ರಯತ್ನ ಮುಂದುವರಿಸಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಜೆ.ಡಿ.ಎಸ್. ಮತ್ತು ಇತರ ಪಕ್ಷಗಳು ಆಟಕ್ಕುಂಟು, ಲೆಕ್ಕಕ್ಕಿಲ್ಲ ಎನ್ನುವ ಸ್ಥಿತಿಯಲ್ಲಿವೆ. ಕಾಂಗ್ರೆಸ್, ಬಿ.ಜೆ.ಪಿ. ಬೆಂಬಲಿತರ ನಡುವೆ ಕೆಲವು ಸ್ವತಂತ್ರರು, ಕೆಲವು ಪಕ್ಷಗಳ ಬೆಂಬಲಿತರೂ ಆಯ್ಕೆಯಾಗಲಿದ್ದಾರೆ. ಜಿಲ್ಲೆಯಲ್ಲಿ ಸ್ನಾತಕೋತ್ತರ ಪದವಿಧರರು, ಪದವಿಧರರು, ಪ್ರಮುಖರು, ಹಳೆಮುಖಂಡರು ಹೀಗೆ ಎಲ್ಲಾ ವಯೋಮಾನದ,ಎಲ್ಲಾ ಕ್ಷೇತ್ರಗಳ ವ್ಯಕ್ತಿಗಳು ಗ್ರಾ.ಪಂ. ಚುನಾವಣಾ ಕಣದಲ್ಲಿದ್ದಾರೆ.

ಸಿದ್ಧಾಪುರದಲ್ಲಿ ಶಿರಳಗಿ ಪಂಚಾಯತ್ ಬಿಕ್ಕಳಸೆ ವಾರ್ಡ್ ನಿಂದ ಸ್ಫರ್ಧಿಸಿರುವ ಅಣ್ಣಪ್ಪ ನಾಯ್ಕ ಬಿಕ್ಕಳಸೆ ಜನರ ಗಮನ ಸೆಳೆದಿದ್ದು ಬಿ.ಜೆ.ಪಿ.ಯ ಹಿರಿಯ ಮುಖಂಡರಾಗಿದ್ದ ದಿ. ಮಹಾಬಲ ನಾಯ್ಕ ಬಿಕ್ಕಳಸೆಯವರ ಹಿರಿಯ ಪುತ್ರರಾಗಿರುವ ಇವರು ಕೃಷಿಕರು. ತಂದೆಯವರ ರಾಜಕೀಯ ಬದುಕು, ಬಿ.ಜೆ.ಪಿ. ಸಂಬಂಧಗಳ ನಡುವೆ ಕೂಡಾ ಇವರ ಕುಟುಂಬ ಈ ವರೆಗೆ ರಾಜಕೀಯ ಪ್ರವೇಶ ಮಾಡಿರಲಿಲ್ಲ. ಬಿ.ಜೆ.ಪಿ.ಯ ಹಿಂದಿನ ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯರಾಗಿ ನಿಸ್ವಾರ್ಥ ಸೇವೆ ಮಾಡಿದ್ದ ಮಹಾಬಲನಾಯ್ಕರ ಕುಟುಂಬದ ಸದಸ್ಯರಾಗಿ ಮೊದಲಬಾರಿ ಗ್ರಾ.ಪಂ. ಅಭ್ಯರ್ಥಿಯಾಗಿರುವುದರಿಂದ ಅವರ ಸ್ಫರ್ಧೆ ಜನರ ಗಮನ ಸೆಳೆದಿದೆ.

ಕಾಂವಚೂರು ಪಂಚಾಯತ್ ನಲ್ಲಿ ಮೂರು ಬಾರಿ ಅಧ್ಯಕ್ಷರಾಗಿ, ನಾಲ್ಕುಬಾರಿ ಸದಸ್ಯರಾಗಿ ನಿರಂತರವಾಗಿ ಆಯ್ಕೆಯಾಗಿದ್ದ ರಾಜು ಕಟ್ಟಿಮನೆ ಸ್ಫರ್ಧೆ ಗಮನಸೆಳೆದಿದೆ.

ಬಿಳಗಿ ಪಂಚಾಯತ್ ನಲ್ಲಿ ಹಿಂದಿನ ಅಧ್ಯಕ್ಷರಾಗಿದ್ದ ಆದರ್ಶಪೈ, ದಯಾನಂದ ಚಿನಿವಾರ ,ಕಲ್ಕಣಿಯ ಸುವರ್ಣಾ ನಾಯ್ಕ ಸೇರಿದ ಕೆಲವರ ಸ್ಫರ್ಧೆ ಕುತೂಹಲ ಕೆರಳಿಸಿದೆ.

ಕೋಲಶಿರ್ಸಿ ಪಂಚಾಯತ್ ನಲ್ಲಿ ಕಾಂಗ್ರೆಸ್ ಬೆಂಬಲಿತರಿಗೆ ಕಾಂಗ್ರೆಸ್ ಬಂಡಾಯ ಬಣ ಸೆಡ್ಡುಹೊಡೆದಿದೆ. ಗೋಪಾಲ ನಾಯ್ಕ, ಗೋವಿಂದ ನಾಯ್ಕ, ಮಮತಾ ನಾಯ್ಕ, ತಾಲೂಕಾ ಕಾಂಗ್ರೆಸ್ ಉಪಾಧ್ಯಕ್ಷ ಬಾಲಕೃಷ್ಣ ನಾಯ್ಕ, ವಿ.ಎಸ್.ಎಸ್. ಅಧ್ಯಕ್ಷ ಕೆ.ಆರ್. ವಿನಾಯಕ ರ ಸ್ಫರ್ಧೆ ಗಮನ ಸೆಳೆದಿದೆ.

ಬಿದ್ರಕಾನ ಪಂಚಾಯತ್ ನಲ್ಲಿ ರಾಮಚಂದ್ರ ಸದೆಗುಡ್ಡೆ, ಎನ್.ಬಿ.ಗೌಡ, ಜಯಂತ ಹೆಗಡೆ, ವಿ.ಎನ್.ಹೆಗಡೆ ಹಳದೋಟ, ಬಾಬುನಾಯ್ಕ ಸ್ಫರ್ಧೆ ಗಮನ ಸೆಳೆದಿದೆ.

ದೊಡ್ಮನೆಯಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಸುಬ್ರಾಯ ಭಟ್ ಗಡಿಹಿತ್ಲು ಗ್ರಾ.ಪಂ. ಚುನಾವಣೆಗೆ ಸ್ಫರ್ಧಿಸಿ ಜನರ ಗಮನ ಸೆಳೆದಿದ್ದಾರೆ. ಸಿದ್ಧಾಪುರ ಎ.ಪಿ.ಎಂ.ಸಿ. ಅಧ್ಯಕ್ಷರಾಗಿ ನಾಲ್ಕೈದು ದಶಕ ರಾಜಕೀಯದಲ್ಲಿರುವ ಭಟ್ ಈಗಿನ ದೊಡ್ಮನೆ ತಾ.ಪಂ. ಸದಸ್ಯ ವಿವೇಕ್ ಭಟ್ ರ ತಂದೆ.

ಮನೆಮನೆ ಗ್ರಾಮ ಪಂಚಾಯತ್ ನಿಂದ ರಾಜ್ಯ ರೈತ ಸಂಘದ ತಾಲೂಕಾ ಅಧ್ಯಕ್ಷ ವೀರಭದ್ರ ನಾಯ್ಕ ಸ್ಫರ್ಧಿಸಿದ್ದಾರೆ. ಇವರು ಈ ಹಿಂದೆ ಮನಮನೆ ಗ್ರಾ.ಪಂ. ಅಧ್ಯಕ್ಷರಾಗಿ,ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷರ ಸಂಘದ ಒಕ್ಕೂಟದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು.

ವಾಜಗೋಡು ಪಂಚಾಯತ್ ನಿಂದ ಗ್ರಾ.ಪಂ. ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ ನಾಯ್ಕ, ಎನ್.ಟಿ.ನಾಯ್ಕ ಸೇರಿದ ಕೆಲವರ ಸ್ಫರ್ಧೆ ಗಮನಸೆಳೆದಿದೆ.

ಬೇಡ್ಕಣಿ ಗ್ರಾಮ ಪಂಚಾಯತ್ ನಿಂದ ಈರಪ್ಪ ನಾಯ್ಕ, ಪುಷ್ಫಲತಾ ನಾಯ್ಕ, ನೀಲಕಂಠ ನಾಯ್ಕ, ಕೃಷ್ಣಮೂರ್ತಿ ಮಡಿವಾಳ, ಸೀತಾರಾಮ ನಾಯ್ಕರ ಸ್ಫರ್ಧೆ ಗಮನ ಸೆಳೆದಿದೆ. ಕ್ಯಾದಗಿ ಪಂಚಾಯತ್ ನ ಹೆಗ್ಗೇರಿ ಕೆ.ಟಿ. ನಾಯ್ಕ ,ಡಿ.ಎಸ್.ಎಸ್.ಮುಖಂಡ ಶಿವಾನಂದ ನಾಯ್ಕ,ಶಂಕರ್ ನಾಯ್ಕ, ನವೀನ್ ಅಲ್ಮೇಡಾ ಕಾನಗೋಡ ಪಂಚಾಯತ್ ನಿಂದ ಸ್ಫರ್ಧಿಸಿ ಕುತೂಹಲ ಹೆಚ್ಚಿಸಿದ್ದಾರೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ...

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

kolsirsi vss issue…part -04 ನಾನೇ ಹೊಣೆ ನಾನೇ ಜವಾಬ್ದಾರಿ ಎಂದ ಸಿಇಒ ಮಾಳವಿ….

ಕೋಲ ಶಿರಸಿ vss ನ ಪ್ರಕರಣ ಹಗರಣದ ಸ್ವರೂಪ ಪಡೆದಿದೆ… ಈ ಅಪರಾ ತಪರಾ ರೂವಾರಿ ಸಿಇಒ/ ಸೆಕ್ರೆಟರಿ ಎಂಬುದು ನಿರ್ವಿವಾದ. ಈ ಬಗ್ಗೆ...

ಕೋಲಶಿರಸಿ vss ಆಡಳಿತ ಸಮೀತಿ & ಸಿಇಒ ವಿರುದ್ಧ ಇಲಾಖೆಗೆ ದೂರು

ಸಿದ್ದಾಪುರ ತಾಲೂಕಿನ ಕೋಲಶಿರಸಿ vss ನಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಹಿಂದೆ ಇರುವ ಹಾಲಿ ಆಡಳಿತ ಮಂಡಳಿ & ಸಿಇಒ/ ಕಾರ್ಯದರ್ಶಿ ಗಳ...

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರ ಜನಪರ ಎನ್ನುವ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಸಿದ್ದಾಪುರ ಕೋಲಶಿರ್ಸಿ ಸೇವಾ ಸಹಕಾರಿ ಸಂಘದ ಬಹುಕೋಟಿ ಹಗರಣದ ನಂತರ ಒಂದೊಂದೇ ಗುಟ್ಟುಗಳು ರಟ್ಟಾಗತೊಡಗಿವೆ. ಸಿದ್ದಾಪುರದ ಪ್ರಮುಖ ಸಹಕಾರಿಗಳು,...

Recommended For You

About the Author: Kanneshwar Naik

Leave a Reply

Your email address will not be published. Required fields are marked *