covid19- ಯಲ್ಲಾಪುರದ ಮಾವಿನ್ಮನೆ ಗ್ರಾ.ಪಂ. ರಾಜ್ಯಕ್ಕೇ ಮಾದರಿ

ಕರ್ನಾಟಕದ ಈ ಪುಟ್ಟ ಗ್ರಾಮದಲ್ಲಿ ಈಗ ಕೋವಿಡ್ ಸಕ್ರಿಯ ಪ್ರಕರಣಗಳು ‘ಶೂನ್ಯ’: ಇದು ಹೇಗೆ ಸಾಧ್ಯವಾಯ್ತು ನೀವೇ ನೋಡಿ!

ಉತ್ತರ ಕನ್ನಡದ ಯಲ್ಲಾಪುರ ತಾಲ್ಲೂಕಿನ ಮಾವಿನ್ಮನೆ ಎಂಬ ಗ್ರಾಮ ಪಂಚಾಯಿತಿಯು ಸಾಮಾಜಿಕ ಅಂತರ ಮತ್ತು ಲಾಕ್‌ಡೌನ್ ಮಾನದಂಡಗಳನ್ನು ಕಠಿಣವಾಗಿ ಅನುಸರಿಸುವ ಮೂಲಕ ನಡೆಯುತ್ತಿರುವ ಕೋವಿಡ್ ಬಿಕ್ಕಟ್ಟನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ತೋರಿಸಿದೆ. 

task force of Mavina Mane Gram Panchayat

ಕಾರವಾರ: ಕೊರೋನಾ ಎರಡನೇ ಅಲೆ ಗ್ರಾಮಗಳಿಗೂ ದಾಂಗುಡಿ ಇಡುತ್ತಿದ್ದು ಭೀಕರತೆ ಸೃಷ್ಟಿಸುತ್ತಿದೆ. ಅಂತಹದರಲ್ಲಿ ಉತ್ತರ ಕನ್ನಡದ ಯಲ್ಲಾಪುರ ತಾಲ್ಲೂಕಿನ ಮಾವಿನ್ಮನೆ ಎಂಬ ಗ್ರಾಮ ಪಂಚಾಯಿತಿಯು ಸಾಮಾಜಿಕ ಅಂತರ ಮತ್ತು ಲಾಕ್‌ಡೌನ್ ಮಾನದಂಡಗಳನ್ನು ಕಠಿಣವಾಗಿ ಅನುಸರಿಸುವ ಮೂಲಕ ನಡೆಯುತ್ತಿರುವ ಕೋವಿಡ್ ಬಿಕ್ಕಟ್ಟನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ತೋರಿಸಿದೆ. 

100ಕ್ಕೂ ಹೆಚ್ಚು ಪ್ರಕರಣಗಳನ್ನು ಹೊಂದಿದ್ದ ಪಂಚಾಯತ್ ಈಗ ಕೋವಿಡ್‌ನಿಂದ ಮುಕ್ತವಾಗಿದೆ. ಇದರಿಂದ ಪ್ರಭಾವಿತರಾದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬರ್ ವೈಯಕ್ತಿಕವಾಗಿ ಪಂಚಾಯತ್‌ಗೆ ಭೇಟಿ ನೀಡಿ ಅಧಿಕಾರಿಗಳನ್ನು ಅಭಿನಂದಿಸಿದ್ದಾರೆ. ಕೇವಲ ಏಳು ಹಳ್ಳಿಗಳನ್ನು ಹೊಂದಿರುವ ಸಣ್ಣ ಪಂಚಾಯತ್, ಮಾವಿನ್ಮನೆ ಯಾವುದೇ ಸಹಾಯಕ್ಕಾಗಿ ಕಾಯದೆ ತನ್ನದೇ ಆದ ದಾರಿಯನ್ನು ಕಂಡುಕೊಳ್ಳುವ ಮೂಲಕ ಇತರರಿಗೆ ಉದಾಹರಣೆಯಾಗಿದೆ. ಪಶ್ಚಿಮ ಘಟ್ಟದಲ್ಲಿರುವ ಹಳ್ಳಿಗಳು ಸಾಮಾಜಿಕ ಅಂತರವನ್ನು ಹೇಗೆ ಅನುಸರಿಸಬೇಕು ಮತ್ತು ಪರಸ್ಪರ ಸಹಾಯ ಮಾಡುವ ಮೂಲಕ ಸಾಂಕ್ರಾಮಿಕ ರೋಗವನ್ನು ನಿವಾರಿಸ ಬಹುದು ಎಂಬುದನ್ನು ಇದು ತೋರಿಸಿದೆ.

‘ಉತ್ತರ ಕನ್ನಡದಿಂದ ಬೆಂಗಳೂರಿಗೆ ಹೋದರೆ ನನ್ನನ್ನು ಯಾವುದೇ ಟೋಲ್ ಬೂತ್ ಅಥವಾ ಚೆಕ್‌ಪೋಸ್ಟ್ ನಲ್ಲಿ ತಡೆಯುವುದಿಲ್ಲ, ಆದರೆ ಈ ಗ್ರಾಮ ಪಂಚಾಯಿತಿಯಲ್ಲಿ, ಆರು ಬಾರಿ ನನ್ನನ್ನು ನಿಲ್ಲಿಸುವಂತೆ ಕೇಳಿದರು. ಈ ರೀತಿಯಾಗಿ ಅವರು ಲಾಕ್‌ಡೌನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಾರೆ ಎಂದು ಹೆಬ್ಬರ್ತಿಳಿಸಿದರು. ಎಲ್ಲಾ ಗ್ರಾಮಗಳು ಕೋವಿಡ್ 19 ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ತಮಗೆ ಸಹಾಯ ಮಾಡಿದರೆ. ಸರ್ಕಾರದ ಮೇಲೆ ಬಹಳ ಕಡಿಮೆ ಹೊರೆ ಬೀಳುತ್ತದೆ ಎಂದರು. 

ಪಂಚಾಯತ್‌ನಲ್ಲಿ 500 ಮನೆಗಳಿಲ್ಲದಿದ್ದರೂ ಇಲ್ಲಿ 108 ಕೋವಿಡ್ ಪ್ರಕರಣಗಳು ದಾಖಲಾಗಿದ್ದವು. ಮೊದಲ ಅಲೆಯ ಸಮಯದಲ್ಲಿ ಸಾಂಕ್ರಾಮಿಕ ರೋಗವನ್ನು ದೂರವಿಡುವಲ್ಲಿ ಯಶಸ್ವಿಯಾಗಿದ್ದ ಗ್ರಾಮಸ್ಥರಿಗೆ ಎರಡನೇ ಅಲೆ ಆಘಾತ ತಂದಿತ್ತು. ‘ಏಪ್ರಿಲ್ 19ರಂದು ಮಲವಳ್ಳಿ ಗ್ರಾಮದಲ್ಲಿ ನಡೆದ ಮದುವೆ ಕಾರ್ಯಕ್ರಮದ ನಂತರ 15 ಅತಿಥಿಗಳಿಗೆ ರೋಗಲಕ್ಷಣಗಳು ಕಾಣಿಸಿಕೊಂಡವು. ಶೀಘ್ರದಲ್ಲೇ ಈ ಸಂಖ್ಯೆ 108ಕ್ಕೆ ಏರಿತು ಎಂದು ಇಲ್ಲಿನ ಕಾರ್ಯಪಡೆಯ ಸದಸ್ಯ ಗೋಪಾಲ್ ಕೃಷ್ಣ ಮಾಹಿತಿ ನೀಡಿದರು.

ಕೂಡಲೇ ಸಮಯವನ್ನು ವ್ಯರ್ಥ ಮಾಡದೆ, ಪಂಚಾಯತ್ ವ್ಯವಸ್ಥೆ ಕಾರ್ಯರೂಪಕ್ಕೆ ಬಂದು ರೋಗ ಹರಡದಂತೆ ನೋಡಿಕೊಳ್ಳಲು ತನ್ನದೇ ಜನರೊಂದಿಗೆ ಕಾರ್ಯಪಡೆ ರಚಿಸಿತು. ‘ಕಾರ್ಯಪಡೆ ಹಲವಾರು ಚೆಕ್ ಪೋಸ್ಟ್‌ಗಳನ್ನು ರಚಿಸಿತು. ಇದರಿಂದ ಜನರು ತಮ್ಮ ವಾಹನಗಳನ್ನು ಹೊರತೆಗೆಯಲು ಸಾಧ್ಯವಾಗುವುದಿಲ್ಲ. ಅಲ್ಲದೆ ತುರ್ತು ಪರಿಸ್ಥಿತಿ ಹೊರತು ಹೊರಗಿನವರು ತಮ್ಮ ಗ್ರಾಮಕ್ಕೆ ಪ್ರವೇಶಿಸುವುದಿಲ್ಲ. ಮಾವಿನ್ಮ ನೆ ಸಹಕಾರ ಸಂಘ, ಸಹಕಾರಿ ಸಮಾಜ ಮತ್ತು ಕೆಲವು ದಾನಿಗಳು ಒಗ್ಗೂಡಿ ದಿನಸಿ ಸಾಮಗ್ರಿಗಳು ಮತ್ತು ಇತರ ಅಗತ್ಯ ವಸ್ತುಗಳನ್ನು ಹಳ್ಳಿಗಳ ಪ್ರತಿಯೊಂದು ಮನೆಗೂ ಸರಬರಾಜು ಮಾಡಿದರು. ಇದರಿಂದ ಯಾರೂ ಹೊರಹೋಗುವ ಅಗತ್ಯವಿಲ್ಲ. ರೋಗಿಗಳ ವೈದ್ಯಕೀಯ ನೆರವು, ಪರೀಕ್ಷೆ ಮತ್ತು ನಿಯಮಿತ ಮೇಲ್ವಿಚಾರಣೆಯನ್ನು ನೋಡಿಕೊಳ್ಳಲು ಪಿಡಿಒಗಳು, ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಇತರರನ್ನು ಸಂಪರ್ಕಿಸಲಾಯಿತು ಎಂದು ಪಂಚಾಯತ್ ಅಧ್ಯಕ್ಷರು ಮಾಹಿತಿ ನೀಡಿದರು.

ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು ಮತ್ತು ಕೆಲವು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಪ್ರತಿದಿನವೂ ಮನೆಗಳಿಗೆ ಭೇಟಿ ನೀಡಿ ಆಮ್ಲಜನಕದ ಮಟ್ಟ, ದೇಹದ ತಾಪಮಾನ, ಯಾರಾದರೂ ಕೋವಿಡ್-ಸಂಬಂಧಿತ ರೋಗಲಕ್ಷಣಗಳನ್ನು ಹೊಂದಿದ್ದಾರಾ? ಎಂದು ಪರೀಕ್ಷಿಸುತ್ತಿದ್ದರು. ಈಗಾಗಲೇ ನೂರು ರೋಗಿಗಳು ಸಂಪೂರ್ಣ ಗುಣಮುಖರಾಗಿದ್ದಾರೆ. ಇನ್ನು ಕೊನೆಯ ಎಂಟು ಜನರು ಚೇತರಿಸಿಕೊಳ್ಳುವ ಹಾದಿಯಲ್ಲಿದ್ದಾರೆ ಎಂದು ಘೋಷಿಸಲಾಗಿದೆ. ಸದ್ಯಕ್ಕೆ ಪಂಚಾಯಿತಿಯನ್ನು ಕೋವಿಡ್ ಮುಕ್ತ ಎಂದು ಘೋಷಿಸಲಾಗಿದೆ. (kpc)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ...

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

kolsirsi vss issue…part -04 ನಾನೇ ಹೊಣೆ ನಾನೇ ಜವಾಬ್ದಾರಿ ಎಂದ ಸಿಇಒ ಮಾಳವಿ….

ಕೋಲ ಶಿರಸಿ vss ನ ಪ್ರಕರಣ ಹಗರಣದ ಸ್ವರೂಪ ಪಡೆದಿದೆ… ಈ ಅಪರಾ ತಪರಾ ರೂವಾರಿ ಸಿಇಒ/ ಸೆಕ್ರೆಟರಿ ಎಂಬುದು ನಿರ್ವಿವಾದ. ಈ ಬಗ್ಗೆ...

ಕೋಲಶಿರಸಿ vss ಆಡಳಿತ ಸಮೀತಿ & ಸಿಇಒ ವಿರುದ್ಧ ಇಲಾಖೆಗೆ ದೂರು

ಸಿದ್ದಾಪುರ ತಾಲೂಕಿನ ಕೋಲಶಿರಸಿ vss ನಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಹಿಂದೆ ಇರುವ ಹಾಲಿ ಆಡಳಿತ ಮಂಡಳಿ & ಸಿಇಒ/ ಕಾರ್ಯದರ್ಶಿ ಗಳ...

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರ ಜನಪರ ಎನ್ನುವ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಸಿದ್ದಾಪುರ ಕೋಲಶಿರ್ಸಿ ಸೇವಾ ಸಹಕಾರಿ ಸಂಘದ ಬಹುಕೋಟಿ ಹಗರಣದ ನಂತರ ಒಂದೊಂದೇ ಗುಟ್ಟುಗಳು ರಟ್ಟಾಗತೊಡಗಿವೆ. ಸಿದ್ದಾಪುರದ ಪ್ರಮುಖ ಸಹಕಾರಿಗಳು,...

Recommended For You

About the Author: Kanneshwar Naik

Leave a Reply

Your email address will not be published. Required fields are marked *