ಪ್ರೀತಿ ಪದಗಳಲಿ ವಿಠ್ಠಲ ಮೇಷ್ಟ್ರು

ಭಾನುವಾರ ಡಾ.ವಿಠ್ಠಲ ಭಂಡಾರಿಯವರ ಜನ್ಮದಿನದ ಪ್ರಯುಕ್ತ ಅವರ ನೆನಪಿನಲ್ಲಿ ವಿದ್ಯಾರ್ಥಿ ಬಳಗ ‘ಚಿಗುರುಗಳು’ ತಮ್ಮ ಮೇಷ್ಟ್ರ ಜೊತೆಗಿನ ಒಡನಾಟದ ನೆನಪುಗಳ ಕಥನ-“ಪ್ರೀತಿ ಪದಗಳಲಿ ವಿಠ್ಠಲ ಮೇಷ್ಟ್ರು” ಸರಣಿಯ ಆನ್ಲೈನ್ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದಡಾ.ಎಂ.ಜಿ ಹೆಗಡೆ ಈ ಸ್ಮೃತಿ ಸರಣಿಯ ಮೂಲಕ ವಿಠ್ಠಲ ಭಂಡಾರಿಯವರ ಸಹಯಾನ, ಸಮುದಾಯಕರ್ನಾಟಕ, ಸಂವಿಧಾನಓದು ಮುಂತಾದ ಅನೇಕ ಹೋರಾಟ ಚಟುವಟಿಕೆಗಳ ಹೊರತಾಗಿ ವಿದ್ಯಾರ್ಥಿಗಳೊಂದಿಗೆ ಅವರಒಡನಾಟ ಹೇಗಿತ್ತು ಮತ್ತು ವಿದ್ಯಾರ್ಥಿಗಳನ್ನು ಸಮಾಜಮುಖಿಯಾಗಿಸಲು ಭಂಡಾರಿಯವರು ಯಾವ ರೀತಿಯಲ್ಲಿ ಶ್ರಮಿಸುತ್ತಿದ್ದರು ಎನ್ನುವ ಅಪರಿಚಿತ ಮುಖದ ಅನಾವರಣವಾಗಲಿ ಮತ್ತು ಈ ಕಾರ್ಯಕ್ರಮ ಧೀರ್ಘವಾಗಿ ಮೂಡಿಬರಲಿ ಎಂದು ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಮಾತನಾಡಿ ವಿಠ್ಠಲ ಭಂಡಾರಿಯವರೊಂದಿಗಿನತಮ್ಮ ನೆನಪುಗಳನ್ನು ಹಂಚಿಕೊಂಡ ವೈಜಯಂತಿ ಶಾನಭಾಗ್‍ ಡಾ.ಬಿ.ಅರ್‍ಅಂಬೇಡ್ಕರ್‍ರವರು ಸಂವಿಧಾನವನ್ನು ರಚಿಸಿ ಅದನ್ನು ರಾಷ್ಟ್ರಕ್ಕೆ ಅರ್ಪಿಸಿದರು. ಆದರೆ ವಿಠ್ಠಲ ಭಂಡಾರಿಯವರು ಸಂವಿಧಾನ ಓದು ಕಾರ್ಯಕ್ರಮಗಳ ಮೂಲಕ ಅದನ್ನು ಜನಸಾಮಾನ್ಯರಿಗೂ ಸಹ ಅರ್ಥಮಾಡಿಸಲು ಶ್ರಮಿಸಿದರು, ಈ ಕಾರಣಕ್ಕಾಗಿ ನಾನು ಅವರನ್ನು ಅಭಿನವ ಅಂಬೇಡ್ಕರ್ ಎಂದು ಕರೆಯುತ್ತೇನೆ ಎಂದರು.
ಪ್ರೊ.ವಿನಾಯಕ್‍ಎಂ.ಎಸ್‍ ಮಾತನಾಡಿತಾವು ಮಹಾವಿದ್ಯಾಲಯದ ನ್ಯಾಕ್ ಪ್ರೊಸೆ ಸೆಸ್ ನ ಜವಾಬ್ದಾರಿ ವಹಿಸಿಕೊಂಡಾಗ ವಿಠ್ಠಲ ಭಂಡಾರಿಯವರು ನೀಡಿದ ಸಹಕಾರವನ್ನು ಸ್ಮರಿಸಿಕೊಂಡರು. ಮುಂದುವರಿದು ಯಾವ ರೋಗದ ವಿರುದ್ಧ ಜನಜಾಗೃತಿಯನ್ನು ಮೂಡಿಸುತ್ತಿದ್ದರೋ, ಅದರಿಂದ ಸಂಕಷ್ಟಕ್ಕೆ ಒಳಗಾದವರಿಗೆ ಸ್ಪಂದಿಸುತ್ತಿದ್ದರೋ ಅದೇರೋಗದ ಕಬಂಧಬಾಹುವಿಗೆ ಅವರೂ ಸಹ ಸೇರಿದ್ದು ದುಃಖಕರ ಎಂದು ವಿವರಿಸಿದರು.
ಪ್ರೊ.ಜಗನ್ನಾಥ್ ಮೊಗೇರ ಮಾತನಾಡಿ ವಿಠ್ಠಲ ಭಂಡಾರಿಯವರು ಜನಶಿಕ್ಷಣ ಮತ್ತು ಶಿಕ್ಷಣದ ನಡುವಿನ ಸೇತುವೆ ಆಗಿದ್ದರು ಎಂಬುದನ್ನು ತಿಳಿಸುತ್ತ ಭಂಡಾರಿಯವರು ಸಾಮಾಜಿಕ ಮತ್ತು ರಾಜಕೀಯ ಚಿಂತನೆಗಳನ್ನು ಹೇಗೆ ವಿವರಿಸುತ್ತಿದ್ದರು ಮತ್ತು ಅದರಲ್ಲಿ ತೊಡಗಿಸಿಕೊಳ್ಳುತ್ತಿದ್ದರು ಎಂದು ತಿಳಿಸಿದರು. ಜೊತೆಗೆ ತಮ್ಮ ಮತ್ತುಅವರ ನಡುವಿನ ಬಾಂಧವ್ಯದಕುರಿತು ತಿಳಿಸುತ್ತಾ ಭಂಡಾರಿಯವರ ವ್ಯಕ್ತಿತ್ವ ಹೇಗೆ ಅನುಕರಣಿಯವಾಗಿತ್ತುಎಂದು ವಿವರಿಸಿದರು.

ಸುಬ್ರಾಯ ಮತ್ತಿಹಳ್ಳಿಯವರು ಮಾತನಾಡಿ ವಿಠ್ಠಲ ಭಂಡಾರಿಯವರು ತಮ್ಮ ಸಾಹಿತ್ಯಕ್ಕೆ ಕಟುವಾಗಿ ವಿಮರ್ಶೆ ಮಾಡುತ್ತಿದ್ದುದನ್ನು ತಿಳಿಸಿ ಹೇಗೆ ತಮ್ಮ ಸಾಹಿತ್ಯಕ್ಕೆ ಹೊಸ ಚಿಗುರನ್ನು ಮೂಡಿಸುತ್ತಿದ್ದರು ಎಂದು ತಿಳಿಸಿದರು. ವಿಠ್ಠಲ ಭಂಡಾರಿಯವರು ಕೇವಲ ನಾಲ್ಕು ಗೋಡೆಯ ಮಧ್ಯದ ಶಿಕ್ಷಕರಲ್ಲ ಬದಲಾಗಿ ಇಡೀ ಸಮಾಜದ ಶಿಕ್ಷಕರು ಎಂದು ತಿಳಿಸಿದರು.

ವಿಮಲಾ ಕೆ ಎಸ್‍. ಮಾತನಾಡಿ ವಿಠ್ಠಲ ಭಂಡಾರಿಯವರಿಗೆ ಜಿಲ್ಲೆಯ ಸಾಂಸ್ಕೃ ತಿಕ ಬೇರುಗಳ ಬಗೆಗೆ ತುಂಬಾ ಕನಸುಗಳಿದ್ದವು, ಆ ಕನಸುಗಳನ್ನು ಈಡೇರಿಸುವ ನಿಟ್ಟಿನಲ್ಲಿ ಅವರು ಭರವಸೆಯನ್ನು ಇಟ್ಟುಕೊಂಡಿದ್ದ ಯುವತಲೆಮಾರಿನ ಚಿಗುರುಗಳು ಕೆಲಸ ಮಾಡಲಿ ಮತ್ತು ಈ ಚಿಗುರುಗಳು ಬೆಳೆದು ಆಕಾಶದೆತ್ತರಕ್ಕೆ ಮುಟ್ಟಲಿ ಎಂದು ಹಾರೈಸಿದರು.
ಕಿರಣ್ ಭಟ್, ಶ್ರೀಪಾದ್ ಭಟ್, ಯಮುನಾಗಾಂವ್ಕರ್ ಮತ್ತು ನವೀನ್‍ಕುಮಾರ್ ಮಾತನಾಡಿ ವಿಠ್ಠಲ್ ಭಂಡಾರಿಯವರನ್ನು ಜೀವಂತವಾಗಿಡುತ್ತಿರುವ ವಿದ್ಯಾರ್ಥಿಗಳ ಈ ಕೆಲಸಕ್ಕೆ ಶುಭಕೋರಿದರು. ಮಾಧವಿ ಭಂಡಾರಿ,ಶ್ರೀಪಾದ ಭಟ್,ಪ್ರೊ ರಾಜೇಂದ್ರ ಚೆನ್ನಿ, ವಿಜಯ ಹೆಗಡೆ ದೊಡ್ಮನೆ,ಡಾ.ಸಬಿತಾ ಬನ್ನಾಡಿ,ಪ್ರೊ.ಫಣಿರಜ್ ಸೇರಿದಂತೆ ವಿವಿಧ ವಿಶ್ವವಿದ್ಯಾಲಯಗಳ ಅಧ್ಯಾಪಕರು, ಹಲವು ಕ್ಷೇತ್ರಗಳ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ರೈತರಿಗಾಗಿ ಪ್ರಕಟಣೆ- ಸಿದ್ದಾಪುರ
ತಾಲೂಕಿನ ಹಾರ್ಸಿಕಟ್ಟಾ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಸಾಮಾನ್ಯ ಸೇವಾ ಕೇಂದ್ರದ ಮೂಲಕ ಬೆಳೆ ಸಾಲಗಾರರಲ್ಲದ ಅಡಕೆ ಹಾಗೂ ಕಾಳುಮೆಣಸಿನ ರೈತರು ಹವಾಮಾನ ಆಧಾರಿತ ಪ್ರಧಾನಮಂತ್ರಿ ಫಸಲ ಭಿಮಾ ಯೋಜನೆಗೆ ಜೂ.30ರೊಳಗೆ ನೋಂದಾಯಿಸಿಕೊಳ್ಳಲು ಅವಕಾಶ ನೀಡಿದೆ.
ಆಧಾರ್ ಕಾರ್ಡ ಪ್ರತಿ,ಬ್ಯಾಂಕ್ ಪಾಸ್ ಪುಸ್ತಕ,ಮೊಬೈಲ್ ನಂಬರ್,ಫಹಣಿ ಪತ್ರಿಕೆ ಹಾಗೂ ಪ್ರೀಮಿಯಂ ಹಣವನ್ನು ನೀಡಬೇಕಾಗಿದ್ದು ಹೆಚ್ಚಿನ ಮಾಹಿತಿಗಾಗಿ 8762835573ಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ...

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

kolsirsi vss issue…part -04 ನಾನೇ ಹೊಣೆ ನಾನೇ ಜವಾಬ್ದಾರಿ ಎಂದ ಸಿಇಒ ಮಾಳವಿ….

ಕೋಲ ಶಿರಸಿ vss ನ ಪ್ರಕರಣ ಹಗರಣದ ಸ್ವರೂಪ ಪಡೆದಿದೆ… ಈ ಅಪರಾ ತಪರಾ ರೂವಾರಿ ಸಿಇಒ/ ಸೆಕ್ರೆಟರಿ ಎಂಬುದು ನಿರ್ವಿವಾದ. ಈ ಬಗ್ಗೆ...

ಕೋಲಶಿರಸಿ vss ಆಡಳಿತ ಸಮೀತಿ & ಸಿಇಒ ವಿರುದ್ಧ ಇಲಾಖೆಗೆ ದೂರು

ಸಿದ್ದಾಪುರ ತಾಲೂಕಿನ ಕೋಲಶಿರಸಿ vss ನಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಹಿಂದೆ ಇರುವ ಹಾಲಿ ಆಡಳಿತ ಮಂಡಳಿ & ಸಿಇಒ/ ಕಾರ್ಯದರ್ಶಿ ಗಳ...

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರ ಜನಪರ ಎನ್ನುವ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಸಿದ್ದಾಪುರ ಕೋಲಶಿರ್ಸಿ ಸೇವಾ ಸಹಕಾರಿ ಸಂಘದ ಬಹುಕೋಟಿ ಹಗರಣದ ನಂತರ ಒಂದೊಂದೇ ಗುಟ್ಟುಗಳು ರಟ್ಟಾಗತೊಡಗಿವೆ. ಸಿದ್ದಾಪುರದ ಪ್ರಮುಖ ಸಹಕಾರಿಗಳು,...

Recommended For You

About the Author: Kanneshwar Naik

Leave a Reply

Your email address will not be published. Required fields are marked *