ಹೊನ್ನಾವರ ಕೆಕ್ಕಾರ ನ ವಿನಾಯಕ ಗೌಡ ರ ಸಾಧನೆ

ಅಯೋಧ್ಯೆ ರಾಮಮಂದಿರಕ್ಕೆ ಮತ್ತೊಬ್ಬ ಕನ್ನಡಿಗನ ಅಳಿಲು ಸೇವೆ: ಕೆಕ್ಕಾರ ಹುಡುಗ ಕೆತ್ತಿದ ಗಣೇಶನ ಶಿಲ್ಪಕ್ಕೆ ದೇವಾಲಯದಲ್ಲಿ ಸ್ಥಾನ!

ಮೈಸೂರು ಮೂಲದ ಅರುಣ್‌ ಯೋಗಿರಾಜ್‌ ಅವರು ಕೆತ್ತಿದ ಬಾಲರಾಮನ ಮೂರ್ತಿ ಅಯೋಧ್ಯೆ ರಾಮ ಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಟಾಪನೆಯಾಗಿದ್ದು, ಇದರ ಬೆನ್ನಲ್ಲೇ ಮತ್ತೊಬ್ಬ ಕನ್ನಡಿಗ ಕೆತ್ತಿದ ಮತ್ತೊಂದು ಮೂರ್ತಿಯೂ ನೆಲೆಯಾಗುತ್ತಿದೆ.

Vinayak Gouda Kekkara

ಹೊನ್ನಾವರ (ಉತ್ತರ ಕನ್ನಡ): ಮೈಸೂರು ಮೂಲದ ಅರುಣ್‌ ಯೋಗಿರಾಜ್‌ ಅವರು ಕೆತ್ತಿದ ಬಾಲರಾಮನ ಮೂರ್ತಿ ಅಯೋಧ್ಯೆ ರಾಮ ಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಟಾಪನೆಯಾಗಿದ್ದು, ಇದರ ಬೆನ್ನಲ್ಲೇ ಮತ್ತೊಬ್ಬ ಕನ್ನಡಿಗ ಕೆತ್ತಿದ ಮತ್ತೊಂದು ಮೂರ್ತಿಯೂ ನೆಲೆಯಾಗುತ್ತಿದೆ.

ಉತ್ತರ ಕನ್ನಡದ ಹೊನ್ನಾವರ ಮೂಲದ ಯುವ ಶಿಲ್ಪಿ ವಿನಾಯಕ ಗೌಡ ಕೆಕ್ಕಾರ ಅವರು ಕೆತ್ತಿರುವ ಗಣಪತಿ ಪ್ರತಿಮೆ ಜನವರಿ 22ರಂದು ಪ್ರಾಣ ಪ್ರತಿಷ್ಠಾನದ ಸಂದರ್ಭದಲ್ಲಿ ಅಯೋಧ್ಯೆಯ ರಾಮಮಂದಿರದಲ್ಲಿ ಸ್ಥಾಪನೆಗೊಳ್ಳಲಿದೆ.

ಮಂದಿರದ ರಂಗಮಂಟಪವನ್ನು ರಚಿಸುವ ಹೊಣೆಯನ್ನು ಇವರಿದ್ದ ತಂಡಕ್ಕೆ ವಹಿಸಲಾಗಿತ್ತು. ಅದರಲ್ಲಿ ಇವರು ರಚಿಸಿದ ಗಣಪತಿ ಮೂರ್ತಿ ಹಾಗೂ ಕೆತ್ತನೆಗಳು ಸೇರಿರಲಿವೆ ಎಂದು ತಿಳಿದುಬಂದಿದೆ.

ಉತ್ತರ ಕನ್ನಡವು ತನ್ನ ವಿಶಿಷ್ಟ ಗಣಪತಿ ಪ್ರತಿಮೆಗಳಿಗೆ ಹೆಸರುವಾಸಿಯಾಗಿದೆ. ಅವುಗಳಲ್ಲಿ ಹಲವು ಸಾವಿರ ವರ್ಷಗಳ ಹಿಂದಿನ ಇತಿಹಾಸವನ್ನು ಹೊಂದಿವೆ. ಅದರಂತೆ ಹೊನ್ನಾವರದ ಯುವ ಶಿಲ್ಪಿ ವಿನಾಯಕ ಗೌಡ ಕೆಕ್ಕಾರ ಅವರಿಗೆ ರಾಮಮಂದಿರದಲ್ಲಿ ಪ್ರತಿಷ್ಠಾಪಿಸಲು ಗಣಪತಿ ವಿಗ್ರಹವನ್ನು ಕೆತ್ತುವ ಜವಾಬ್ದಾರಿಯನ್ನು ನೀಡಲಾಗಿದ್ದು, ಈ ಶಿಲ್ಪ ಶೀಘ್ರದಲ್ಲೇ ಮಂದಿರದಲ್ಲಿ ಪ್ರತಿಷ್ಟಾಪನೆಗೊಳ್ಳಲಿದೆ.

ಸಾಧಾರಣ ಕುಟುಂಬದಲ್ಲಿ ಜನಿಸಿದ ವಿನಾಯಕ ಗೌಡ ಅವರು, ಹೆಚ್ಚು ಶಿಕ್ಷಣ ಪಡೆದಿಲ್ಲ. ಇವರು ಚಹಾ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಶಿಲ್ಪಕಲೆಯ ಬಗ್ಗೆ ಉತ್ಸಾಹ ಹೊಂದಿದ್ದ ಇವರು, ಬಿಡುವಿನ ವೇಳೆಯಲ್ಲಿ ಅದನ್ನು ಕಲಿತಿದ್ದರು.

ನಂತರ 18 ತಿಂಗಳ ಕಾಲ ಶಿಲ್ಪಕಲೆಯನ್ನು ಅಧಿಕೃತವಾಗಿ ಕಲಿತರು. ಪ್ರಸಿದ್ಧ ಶಿಲ್ಪಿಗಳಾದ ಸುರೇಶ್ ಗುಡಿಗಾರ್ ಮತ್ತು ಅಶೋಕ್ ಗುಡಿಗಾರ್ ಅವರಲ್ಲಿ ವಿಶೇಷ ತರಬೇತಿ ಪಡೆದರು. ವಿವಿಧ ಮಾಧ್ಯಮಗಳನ್ನು ಬಳಸಿಕೊಂಡು ವಿವಿಧ ಕೃತಿಗಳನ್ನು ರಚಿಸಿದರು.

“ಹುಬ್ಬಳ್ಳಿ ಮೂಲದ ರವೀಂದ್ರ ಆಚಾರ್ ಅವರ ಸಹಾಯದಿಂದ ಅಯೋಧ್ಯೆಯಲ್ಲಿ ಗಣಪತಿ ಪ್ರತಿಮೆಯನ್ನು ಕೆತ್ತಲು ನನಗೆ ಅವಕಾಶ ಸಿಕ್ಕಿತು. ಈ ಗೌರವವನ್ನು ನಾನು ನಿರೀಕ್ಷಿಸಿರಲಿಲ್ಲ. “ನಮಗೆ ರಂಗಮಂಟಪದ ರಚನೆಯನ್ನು ಒಪ್ಪಿಸಲಾಯಿತು. ಅಲ್ಲಿ ನಾವು 68 ಗಣಪತಿಗಳನ್ನು ವಿವಿಧ ವಿನ್ಯಾಸಗಳು ಮತ್ತು ರೂಪಗಳಲ್ಲಿ ಕೆತ್ತಬೇಕಾಗಿತ್ತು.

ಕರ್ನಾಟಕದ ಐವರು ಕಲಾವಿದರು- ನಾನು, ಚಿತ್ರದುರ್ಗದ ಕೀರ್ತಿ ಮತ್ತು ಶಿವಮೊಗ್ಗದ ರಾಜೇಶ್ ನಾಲ್ಕು ಗಣಪತಿಗಳನ್ನು ಕೆತ್ತಿದ್ದೇವೆ. ರಮೇಶ್ ಗದಗ, ನಾಗಮೂರ್ತಿ ಗದಗ, ರವೀಂದ್ರ ಆಚಾರ್ ಅವರ ಬಳಿ ಕೆಲಸ ಮಾಡಿದ್ದೇವೆ. ಅವರು ಚಿತ್ರ ಬಿಡಿಸುತ್ತಿದ್ದರು. ನಾವು ಅವುಗಳನ್ನು ಕೆತ್ತಿದ್ದೇವೆ. ನಾನು ಎರಡು ವಿಗ್ರಹಗಳನ್ನು ಕೆತ್ತಿದ್ದೇನೆ. ರಮೇಶ್ ಮತ್ತು ನಾಗಮೂರ್ತಿ ದೇವಸ್ಥಾನದ ವಿನ್ಯಾಸಗಳನ್ನು ಕೆತ್ತಿದ್ದಾರೆ” ಎಂದು ವಿನಾಯಕ್ ಹೇಳಿದ್ದಾರೆ.

“ಈ ದೇವಾಲಯವು ಎಲ್ಲಾ ಭಾರತೀಯ ಕಲಾ ಪ್ರಕಾರಗಳ ಪರಾಕಾಷ್ಠೆಯಾಗಿದೆ. ದೇವಾಲಯವು ಮೊದಲ ಮಹಡಿಯಲ್ಲಿ ಸುಮಾರು 160 ಕಂಬಗಳಿದ್ದು, ಇದು ಸಿಂಹ ದ್ವಾರ, ರಂಗಮಂಟಪ ಮತ್ತು ಇತರ ದ್ವಾರಗಳನ್ನು ಒಳಗೊಂಡಿದೆ ಎಂದು ತಿಳಿಸಿದ್ದಾರೆ. (kpc)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *