Hrs poem -ನಿರೀಕ್ಷೆ

ಗೋಡೆಗಳೇ ಇಲ್ಲದ ದೇವರೊಬ್ಬ ಉದಯಿಸಲಿ
ತುಂಬು ಹುಣ್ಣಿಮೆಯ ತಂಪು ಚಂದಿರನಂತೆ
ಕಂಡ ಕಣ್ಣಲಿ ಕನಸಿನ ಹೂಟೆಯ ಮೀಟಲಿ
ಗುಡಿಸಿಲಿನ ಅಂಗಳದ ಅಂಬುಮಲ್ಲಿಗೆಗೂ
ಅರಮನೆಯ ಕಳಸಕ್ಕೂ ಒಂದೇ ಬೆಳಕ ಚೆಲ್ಲಲಿ

ದೇವಾ! ನೀನು ಸೆರೆಮನೆಯ ಕೈದಿಗಳ ಕಣ್ಣಲ್ಲಿಳಿದು
ಕಣ್ಣೀರ ಕರೆ, ಕದಡಿದ ಮನಸ್ಸುಗಳು ತಿಳಿಗೊಳ್ಳಲಿ
ಅನಾಥ ಮಕ್ಕಳ ಕೈಯಲ್ಲಾಡುವ ಆಟಿಕೆಯಾಗು
ಅವು ನಿನಗೆ ಕೀಲಿಕೊಟ್ಟು ಕಿಲಕಿಲನೆ ಕುಣಿಯಲಿ
ಬಿಗಿದ ಮನದಿ ಕಚಗುಳಿಯಿಟ್ಟು ಮನಬಿಚ್ಚಿ ನಗಲಿ

ಏಸುವಿನ ಕರುಣೆಯನ್ನೂ ನೋವನ್ನೂ ರಕ್ತವನ್ನೂ
ಪೈಗಂಬರರ ಸಾಧುಸಂತರ ದರ್ವೇಶಿಗಳ
ಹಳೆಯ ಬೇರುಗಳಲ್ಲುಳಿದ ಅವಮಾನಗಳನ್ನು ನುಂಗಿ ಕಾಮನಬಿಲ್ಲಿನ ಬಣ್ಣದ ಹೂವಂತೆ ಮಾತು ಹಗುರಾಗಲಿ
ಅವು
ಬುದ್ಧನ ಮೌನದ ಮುಗುಳು ನಗೆಯನ್ನು ಮರೆಯದೆ ಪೋಣಿಸಿಕೊಳ್ಳಲಿ

ಕುವೆಂಪು ಟಾಲಸ್ಟಾಯರ ರವೀಂದ್ರರ ಧ್ಯಾನದಲ್ಲಿ
ಶೇಕ್ಷಪೀಯರನ ರಾಜರ ರಕ್ತದಾಹವನಿಂಗಿಸು
ಗೊಮ್ಮಟನ ನಿರ್ವಾಣದಲ್ಲಿ ದಾಯಾದಿಯ ದಿಕ್ಕರಿಸು
ಗಾಂಧಿಯ ನಡಿಗೆಯಲಿ ಬಡವನುದ್ಧರಿಸು
ದಿನವಿಡೀ ಹೊಲಮನೆಯಲ್ಲಿ ಗೇದು ದಣಿದು
ಮಲಗಿದ ರೈತನಿಗೆ ನಡುಹಗಲಲ್ಲಿ ಮರದ ನೆರಳಾಗು….,

ನಂಬಿದ ದೇವರ ನೆಟ್ಟು ಬೆಳೆಸಿದ ದೇವನವನು
ನಿನ್ನ ನೆರಳಲ್ಲಿ ಸೊಂಪು ನಿದ್ದೆ ಆವರಿಸಲಿ
ಹಸಿದ ಹೊಟ್ಟೆಯನ್ನರಿತು ಬೆಳೆಸಾಗಲಿ
ಬೆಳಸು ಬಾಡದಂತೆ ಮಳೆರಾಯನಿಗೆ
ಕನಸಾಗಲಿ
ದುಡಿವ ಜೀವಗಳ ತುಂಬಿದ ಹೊಟ್ಟೆ ನೆಮ್ಮದಿಯ
ಕರೆದು ನಿದ್ರೆ ಕಣ್ತುಂಬಿಕೊಳ್ಳಲಿ

ಹೆಚ್. ಆರ್. ಸುಜಾತಾ
೧೮.೫.೧೯

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

1 Comment

Leave a Reply

Your email address will not be published. Required fields are marked *