maruti’s mobile school-ಸಂಚಾರಿ ಶಾಲೆ ಮಾರುತಿಯ ಮನೆಮನೆ ಶಿಕ್ಷಣ!

ಕೋವಿಡ್19 ಅಥವಾ ಕರೋನಾ ಎಷ್ಟೆಲ್ಲಾ ಸಾವು-ನೋವುಗಳಿಗೆ ಕಾರಣವಾಯಿತೆಂದರೆ…. ಈ ಶತಮಾನ ನೆನಪಿಡುವಂಥ ಹೊಡೆತ ಪಡೆದ ಮನುಕುಲದ ಚರಿತ್ರೆಯಲ್ಲಿ ಕರೋನಾ ಚಿರಸ್ಥಾಯಿ.

ಸಂಚಾರಿ ಶಿಕ್ಷಕ ಮಾರುತಿ ಉಪ್ಪಾರರ ಪಾಠದ ಸಮಯ

ಇದರೊಂದಿಗೆ ಕರೋನಾ ಎಷ್ಟೆಲ್ಲಾ ಸಾಧ್ಯತೆಗಳಿಗೆ ಮುನ್ನುಡಿ ಬರೆದಿದೆಯೆಂದರೆ…. ಅದೂ ಕೂಡಾ ಈ ಶತಮಾನ ದಾಖಲಿಸಿಡಬೇಕು. ಕರೋನಾ ಅವಧಿಯಲ್ಲಿ, ಲಾಕ್ ಡೌನ್ ಕಾಲದಲ್ಲಿ, ಕರೋನಾ ಕಾರಣಕ್ಕೆ ಹೆದರಿ ಮುದುರಿಕುಳಿತ ಻ಅವಧಿಯಲ್ಲಿ ಹೊಳೆದ ಯೋಚನೆ, ಯೋಜನೆಗಳು ಲಕ್ಷಾಂತರ. ಻

ಅಂಥ ಯೋಚನೆ, ಯೋಜನೆ ಸಾಕಾರ ಮಾಡಿದವರು ಕೆಲವರು ಮಾತ್ರ. ಎಂಥವರಲ್ಲಿ ಮಾರುತಿ ಉಪ್ಪಾರ ಒಬ್ಬರು. ಮಾರುತಿ ಉಪ್ಪಾರ ಕ್ರೀಯಾಶೀಲ, ಕಾಳಜಿಯ ಶಿಕ್ಷಕ ಎನ್ನುವುದು ಬಲ್ಲವರಿಗಷ್ಟೇ ತಿಳಿದ ವಿಷಯ. ಆದರೆ ನಾವು ಮಾರುತಿ ಉಪ್ಪಾರರನ್ನು ಭೇಟಿ ಮಾಡಲು ಹೋದರೆ ಅವರು ಸಿಗುವುದು ಮಕ್ಕಳೊಂದಿಗೆ. ಶಾಲೆ-ಗ್ರಾಮದಲ್ಲಿ ಅರಣ್ಯೀಕರಣ, ಬೀಜದುಂಡೆ ಬಿತ್ತುವ ಕಾರ್ಯಕ್ರಮ, ಚಿಂದಿ ಆಯುವ ಮಕ್ಕಳಿಗೆ ಶಿಕ್ಷಣ, ಟೆಂಟ್ ಸ್ಕೂಲ್ ಹೀಗೆ ಅನೇಕ ಪ್ರಯೋಗಗಳಿಂದ ಯಶಸ್ವಿಯಾದ ಮಾರುತಿ ಉಪ್ಪಾರ್ ಈ ಕರೋನಾ ಕಾಲದಲ್ಲಿ ಮೊಬೈಲ್ ಇಲ್ಲದ, ನೆಟ್ವರ್ಕ್ ಲಭ್ಯವಿಲ್ಲದ ಬಡ, ಉಪೇಕ್ಷಿತ ಮಕ್ಕಳ ಶಿಕ್ಷಣಕ್ಕೆ ಏನಾದರೂ ಮಾಡಬೇಕೆಂದುಕೊಂಡಾಗ ಻ಅವರಿಗೆ ಹೊಳೆದದ್ದು ಈ ಸಂಚಾರಿ ಶಾಲೆ.

ತನ್ನ ದ್ವಿಚಕ್ರವಾಹನದೊಂದಿಗೆ ಪಠ್ಯ-ಪ್ರಾತ್ಯಕ್ಷಿತೆಗಳ ಪೆಟ್ಟಿಗೆ ಹೊತ್ತು ಹೊರಟ ಮಾರುತಿ ಮಾಸ್ತರ್ ಗೆ ಮೊದಲೆರಡು ದಿನ ಻ಅನುಮಾನದ ಆತಿಥ್ಯ, ಸ್ವಾಗತವೇ ಸಿಕ್ಕಿದ್ದು. ಈಗ ಮಕ್ಕಳೊಂದಿಗೆ ಹಿರಿಯರೂ ಇವರ ಪಾಠ ಕೇಳುತ್ತಾರೆ. ಕರೋನಾ ಬಗ್ಗೆ ದೇಶದ ವಿದ್ಯಮಾನಗಳ ಬಗ್ಗೆ ಚರ್ಚಿಸುತ್ತಾರೆ. ಇವುಗಳೆಲ್ಲಾ ಸಾಧ್ಯವಾಗಿದ್ದು ಹೇಗೆಂದರೆ….. ಶಿರಸಿ ತಾಲೂಕಿನ ಗಡಿಗ್ರಾಮದ ಶಾಲೆ ತಿಗಣಿಯ ಶಿಕ್ಷಕರಾಗಿರುವ ಮಾರುತಿ ಉಪ್ಪಾರ್ ಕರೋನಾ ಕಾರಣಕ್ಕೆ ಮಕ್ಕಳ ಕಲಿಕೆ, ಶಿಕ್ಷಣ ನಿಲ್ಲಬಾರದೆಂದು ಸ್ವಯಂಪ್ರೇರಿತರಾಗಿ ಈ ಸಂಚಾರಿ ಶಾಲೆಯ ಪ್ರಯೋಗಕ್ಕಿಳಿದರು. ಇದರಿಂದ ಕರೋನಾ ರಜೆಯ ಻ಅವಧಿಯಲ್ಲೂ ತಿಗಣಿಶಾಲೆಯ ಮಕ್ಕಳು ಻಻ಅವರ ಮನೆ,ಗ್ರಾಮದಲ್ಲೇ ಕಲಿತರು, ಸಂಚಾರಿ ಶಿಕ್ಷಕ ಆರೋಗ್ಯ, ಶಿಕ್ಷಣ, ಭವಿಷ್ಯದ ಬಗ್ಗೆ ಮಕ್ಕಳ ಪಾಲಕರೊಂದಿಗೆ ಚರ್ಚಿಸಿದರು. ಜನ ಮತ್ತು ವಿದ್ಯಾರ್ಥಿಗಳ ಻ಅನುಭವದಲ್ಲಿ ಶಾಲೆಯ ಶಿಕ್ಷಣಕ್ಕಿಂತ ಈ ಸಂಚಾರಿ ಶಾಲೆಯ ಶಿಕ್ಷಣ ಪರಿಣಾಮಕಾರಿ. ವೇತನ-಻ಅನುಕೂಲ ಪಡೆದು ರಜಾಮಜಾದಲ್ಲಿರುವ ಻ಅಸಂಖ್ಯ ಶಿಕ್ಷಕರು, ಉಪನ್ಯಾಸಕರ ಮಧ್ಯೆ ಈ ಶಿಕ್ಷಕ ಮಾದರಿ ಎನಿಸುತ್ತಾರಲ್ಲವೆ? ಮಕ್ಕಳ ಶಿಕ್ಷಣ ಮನೇಲಲ್ವೆ ಎನ್ನೋಣವೆ?

ಕರೋನಾ, ಲಾಕ್ಡೌನ್ ಅವಧಿಯಲ್ಲಿ ಮಕ್ಕಳು ಕೂಲಿ ಕೆಲಸ, ಆಟ ಇತ್ಯಾದಿ ಚಟುವಟಿಕೆಗಳಿಂದ ಕಲಿಕೆ,ಶಿಕ್ಷಣ ಮರೆತದ್ದು ನಮ್ಮ ಗಮನಕ್ಕೆ ಬಂತು.ಆನ್ ಲೈನ್ ಶಿಕ್ಷಣದ ಮಿತಿ,ಬಡ ಪಾಲಕರ ದುಸ್ಥಿತಿ ಇವುಗಳ ಕಾರಣಕ್ಕೆ ಸಂಚಾರಿ ಶಾಲೆಯ ಯೋಚನೆ ಬಂತು. ಇಲಾಖೆಯ ಸೇತುಬಂಧ, ಜೀವನಶಿಕ್ಷಣ ಇವುಗಳ ರೀತಿ ಸಂಚಾರಿಶಾಲೆಯಿಂದಾಗಿ ನೂರಾರು ವಿದ್ಯಾರ್ಥಿಗಳಲ್ಲಿ ಬಹುತೇಕರಿಗೆ ಮಾರ್ಗದರ್ಶನ ಮಾಡಿ ಪರಿಣಾಮ ಪಡೆಯುತಿದ್ದೇವೆ. -ಮಾರುತಿ ಉಪ್ಪಾರ, ತಿಗಣಿ ಶಾಲೆ ಶಿಕ್ಷಕ

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *