ಸಾಮಾನ್ಯ ಮನುಷ್ಯನಿಂದ ಪವರ್ ಟಿ.ವಿ. ವರೆಗೆ….. ಏನು ನಡೆಯುತ್ತಿದೆ.

ಸುಮಾರು ಒಂದೂವರೆ ವರ್ಷ, ಅದಕ್ಕಿಂತ ಹಿಂದೆ ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಅದಕ್ಕಿಂತ ಹಿಂದೆ ಸಿದ್ಧರಾಮಯ್ಯ ಮುಖ್ಯಮಂತ್ರಿ ಆಗಲೆಲ್ಲಾ ರಾಜ್ಯದಾದ್ಯಂತ ಪ್ರತಿಭಟನೆ ನಡೆಯುತಿತ್ತು, ಚರ್ಚೆ ನಡೆಯುತಿತ್ತು ಇಂದಿರಾ ಕ್ಯಾಂಟೀನ್ ಯಾಕೆ? ಬಡವರಿಗೆ ಅಕ್ಕಿ, ಹಾಲು, ಮೊಟ್ಟೆ, ಸಬ್ಸಿಡಿ ಎಲ್ಲವೂ ಯಾಕೆ ಎಂದು ಪರಿವಾರದ ಜನ ಪ್ರಶ್ನಿಸುತಿದ್ದರು. ಹಾಲು, ಮೊಟ್ಟೆ, ಅಕ್ಕಿ ಫಲಾನುಭವಿಗಳಿಗೆ ಕೂಡಾ ಅಂದಿನ ಸರ್ಕಾರ, ಮುಖ್ಯಮಂತ್ರಿ, ವ್ಯವಸ್ಥೆ ಬಗ್ಗೆ ಖಾರವಾಗಿ ಮಾತನಾಡುವಂತೆ ಉತ್ತೇಜಿಸಲಾಗುತಿತ್ತು. ಮುಂದೆ 2019 ರ ಮೊದಲು ಅನೇಕ ಶಾಸಕರನ್ನು ಖರೀದಿಸಿ ಸರ್ಕಾರ ರಚಿಸಲಾಯಿತು. ಆ ಅವಧಿಯಲ್ಲಿ ಸರ್ಕಾರಕ್ಕಾಗಿ ಪ್ರಯತ್ನಿಸಿದ ಪ್ರಮುಖರಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ವಿಜಯೇಂದ್ರ ಪ್ರಮುಖರು. ಈ ವಿಜಯೇಂದ್ರ ಶಾಸಕರೋ? ಮಂತ್ರಿಯೋ? ಸರ್ಕಾರದ , ಪ್ರಜಾಪ್ರಭುತ್ವ ವ್ಯವಸ್ಥೆಯ ಯಾವ ಸ್ಥಾನ-ಮಾನದಲ್ಲಿದ್ದಾರೋ ತಿಳಿದಿಲ್ಲ. ಆದರೆ ಪ್ರತಿದಿನದ ವಿದ್ಯಮಾನದಲ್ಲಿ ಕಾಣಿಸಿಕೊಳ್ಳುವ ವ್ಯಕ್ತಿ.

ಇಂಥ ಬೇನಾಮಿ, ಅತಿಪ್ರಮುಖ ವ್ಯಕ್ತಿಗಳು ಎಸ್.ಎಂ. ಕೃಷ್ಣ, ದೇವೇಗೌಡ, ಬಂಗಾರಪ್ಪ, ಕುಮಾರಸ್ವಾಮಿ, ಸಿದ್ಧರಾಮಯ್ಯ, ರಾಮಕೃಷ್ಣ ಹೆಗಡೆ ಇವರೆಲ್ಲಾ ಮುಖ್ದಯಮಂತ್ರಿಗಳಿದ್ದಾಗಲೂ ಇರುತಿದ್ದರೊ? ಇದ್ದರೊ ಬಹುಶ: ಯಾರಿಗೂ ಗೊತ್ತಿಲ್ಲ. ಆದರೆ ಸ್ವಯಂ ಘೋಷಿತ ರಾಷ್ರೀಯವಾದಿಗಳೂ, ದೇಶಭಕ್ತರೂ, ಹಿಂದುತ್ವವಾದಿಗಳೂ ಆಗಿರುವ ಬಿ.ಜೆ.ಪಿ. ಆಡಳಿತದಲ್ಲಿ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಮಾಡಿದ ಅವರ ಮಗ ವಿಜಯೇಂದ್ರ ಜಿಲ್ಲಾಧಿಕಾರಿಗಳೊಂದಿಗೆ ನೇರವಾಗಿ ಮಾತನಾಡುತ್ತಾರೆ. ಸಂಬರಗಿಯಂಥ ಯಡಿಯೂರಪ್ಪ ಪಾಳಯದ ವ್ಯಕ್ತಿಗಳು ಸರ್ಕಾರದ ಒಳ ಹೊರಗೆಲ್ಲಾ ವ್ಯವಹರಿಸುತ್ತಾರೆ. ಈ ವಿದ್ಯಮಾನ ನಡೆಯುತ್ತಿರುವಂತೆಯೇ ವಿಜಯೇಂದ್ರನವರ ಮೇಲೆ ಐದು ಸಾವಿರ ಕೋಟಿಯ ಆರೋಪ ಕೇಳಿ ಬರುತ್ತದೆ.

ನಂತರ ದಿಢೀರಾಗಿ ಸುದ್ದಿಯಾದ ಗಾಂಜಾ-ಡ್ರಗ್ಸ್ ವ್ಯವಹಾರದಲ್ಲಿ ಇದೇ ವಿಜಯೇಂದ್ರರ ಆಪ್ತರೆನ್ನುವ ಸಂಬರಗಿ, ಇಂದ್ರಜಿತ್ ರಂಥವರೆಲ್ಲಾ ಸುದ್ದಿಯ ಕೇಂದ್ರ ಬಿಂದುವಾಗುತ್ತಾರೆ. ಇದನ್ನೆಲ್ಲಾ ಬಹಿರಂಗಮಾಡುತಿದ್ದ ಪವರ್ ಟಿ.ವಿ. ಪ್ರಸಾರ ನಿಲ್ಲಿಸಲಾಗುತ್ತದೆ. ವಾಸ್ತವದಲ್ಲಿ ವಿಜಯೇಂದ್ರ ಯಡಿಯೂರಪ್ಪ ಶಕ್ತಿವಂತರು, ಇವರನ್ನು ಬೆಂಬಲಿಸುವ ಪರಿವಾರ ರಾಷ್ಟ್ರೀಯವಾದಿಗಳು, ದೇಶಭಕ್ತರು! ಇವರ ಬೆಂಬಲಕ್ಕೆ ಎಂದಿನಂತೆ ಮಾಧ್ಯಮಸಮೂಹ. ಇಂಥ ವ್ಯವಸ್ಥೆಯನ್ನು ರಾಮರಾಜ್ಯ,ಪ್ರಜಾಪ್ರಭುತ್ವ ಎನ್ನಲಾಗುತ್ತದೆ. ಇಂಥದ್ದೊಂದು ಫ್ಯಾಸಿಸ್ಟ್ ವ್ಯವಸ್ಥೆ ರೂಪಿಸಲು ಪ್ರಯತ್ನಿಸುತ್ತಿರುವ ಪರಿವಾರದ ಜನ ಸದಾ ಕಾಂಗ್ರೆಸ್, ನೆಹರೂ ವಿರೋಧ ಮಾಡುತ್ತಾ ಇರುತ್ತಾರೆ. ಇವರೆಲ್ಲರಿಗೆ ನಾಯಕ ಪ್ರಧಾನಿ ನರೇಂದ್ರಮೋದಿ.

ಈಗ ಜನ ಈ ವಿದ್ಯಮಾನವನ್ನೂ ಸೇರಿ ಕೃಷಿ ಉತ್ಫನ್ನ ಮಾರುಕಟ್ಟೆ ನಿಯಮ ತಿದ್ದುಪಡಿ ಯಾಕೆ? ಭೂಸುಧಾರಣೆ ಮಸೂದೆ ತಿದ್ದುಪಡಿ ರೈತರಿಗೆ ಹೇಗೆ ಪೂರಕ. ಕಾರ್ಮಿಕ ಕಾನೂನುಗಳ ತಿದ್ದುಪಡಿ ಯಾಕೆ ಬೇಕು? ಮುಂದುವರಿದು ಸರ್ಕಾರ, ಆಡಳಿತ ನಿಮ್ಮ ಮೂಗಿನ ನೇರಕ್ಕೆ ನಡೆಯುತ್ತಿದೆ ಎಂದು ಪವರ್ ಟಿ.ವಿ. ಪ್ರಸಾರ ನಿಲ್ಲಿಸಿದರಲ್ಲ ಕರೋನಾ ಸಮಸ್ಯೆಯಿಂದ ಬಳಲುತ್ತಿರುವ ಜನರನ್ನು ಕೇಳದ ಆಸ್ಫತ್ರೆಗಳನ್ನೂ ನಿಲ್ಲಿಸಿಬಿಡಿ ನಂತರ ರೇಷನ್,ಪೆಟ್ರೋಲ್ ಎಲ್ಲಾ… ಕಡೆಗೆ ರಾಮನ ರಾಮಾಯಣ, ಮಹಾಭಾರತ ಕಾಲದಲ್ಲಿ ಇವೆಲ್ಲಾ ಇತ್ತೆ? ಎಂದು ಕೇಳಿ.

ಅಂದಹಾಗೆ ಬಿ.ಜೆ.ಪಿ. ಒಳಜಗಳದಿಂದಾಗಿ, ಯಡಿಯೂರಪ್ಪ ಮತ್ತವರ ಕುಟುಂಬವನ್ನು ನಿಯಂತ್ರಿಸುವ ಕಾರಣಕ್ಕಾಗಿ ಬಿ.ಜೆ.ಪಿ.ಯ ಸನಾತನವಾದಿ ವಲಸೆ ಆರ್ಯರ ಗುಂಪು ಇಂಥ ಆಟಗಳನ್ನೆಲ್ಲಾ ಆಡುತ್ತಿದೆಯಾ? ಇಂಥ ಅನೇಕ ಸಂಕಟದ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಕನಿಷ್ಟ ಒಂದು ವರ್ಷದಿಂದ ಕಳೆಯುತ್ತಿರುವ ದುರ್ದಿನಗಳನ್ನು ವಿರೋಧಿಸುತ್ತಾ ಇಂಥ ಅವ್ಯವಸ್ಥೆಯ ಅಚ್ಚೆದಿನ, ರಾಮರಾಜ್ಯ ಭಾರತಕ್ಕೆ, ಕರ್ನಾಟಕಕ್ಕೆ ಬೇಕಿತ್ತಾ? ಎಂದು ಪ್ರಶ್ನಿಸುತ್ತಾ ಹೌದೆಂದಾದರೆ….. ತಾಲೂಕಾ ಮಟ್ಟದ ಅವ್ಯವಸ್ಥಿತ ಆಸ್ಫತ್ರೆ, ಬಸ್ ನಿಲ್ಧಾಣಗಳಿಂದ ಪ್ರಾರಂಭವಾಗಿ ಬೆಂಗಳೂರು, ದೆಹಲಿಯ ಶಕ್ತಿ ಕೇಂದ್ರಗಳು ಅಲ್ಲಿಯ 10 ಜನಪಥ್ ಗಳು ಎಲ್ಲವೂ ಸರಿ ಯಾಕೆಂದರೆ ಇಂಥ ವ್ಯವಸ್ಥೆಯನ್ನು ಶತಮಾನಗಳಷ್ಟು ಹಿಂದೆ ನೀಷೆ, ಬ್ರೆಕ್ಟ್ ಸೇರಿದಂತೆ ಅನೇಕ ಸಾಹಿತಿಗಳು, ಕವಿಗಳು ಪ್ರಶ್ನಿಸಿದ್ದರು. ಅಂದಹಾಗೆ ಈ ವ್ಯವಸ್ಥೆಯನ್ನೂ ಉಪಾಯದಿಂದ ಸಮರ್ಥಿಸುತ್ತಾ ಮತ್ತೆ ಇವರೇ ಧರ್ಮವಂತರು, ದೇಶಪ್ರೇಮಿಗಳು, ರಾಷ್ಟ್ರೀಯವಾದಿಗಳೆಂದು ಪ್ರಚಾರ ಕೊಡುವವರು ಅಂಥವರನ್ನು ಬೆಂಬಲಿಸುವವರನ್ನು ಜನ ಎಲ್ಲಿಡಬೇಕು? ಎಂಥಾ ಗೌರವ ಕೊಡಬೇಕು ಎನ್ನುವುದನ್ನು ಮತಗಳಿಂದ ನಿರ್ಧರಿಸಬೇಕು.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ...

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

kolsirsi vss issue…part -04 ನಾನೇ ಹೊಣೆ ನಾನೇ ಜವಾಬ್ದಾರಿ ಎಂದ ಸಿಇಒ ಮಾಳವಿ….

ಕೋಲ ಶಿರಸಿ vss ನ ಪ್ರಕರಣ ಹಗರಣದ ಸ್ವರೂಪ ಪಡೆದಿದೆ… ಈ ಅಪರಾ ತಪರಾ ರೂವಾರಿ ಸಿಇಒ/ ಸೆಕ್ರೆಟರಿ ಎಂಬುದು ನಿರ್ವಿವಾದ. ಈ ಬಗ್ಗೆ...

ಕೋಲಶಿರಸಿ vss ಆಡಳಿತ ಸಮೀತಿ & ಸಿಇಒ ವಿರುದ್ಧ ಇಲಾಖೆಗೆ ದೂರು

ಸಿದ್ದಾಪುರ ತಾಲೂಕಿನ ಕೋಲಶಿರಸಿ vss ನಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಹಿಂದೆ ಇರುವ ಹಾಲಿ ಆಡಳಿತ ಮಂಡಳಿ & ಸಿಇಒ/ ಕಾರ್ಯದರ್ಶಿ ಗಳ...

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರ ಜನಪರ ಎನ್ನುವ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಸಿದ್ದಾಪುರ ಕೋಲಶಿರ್ಸಿ ಸೇವಾ ಸಹಕಾರಿ ಸಂಘದ ಬಹುಕೋಟಿ ಹಗರಣದ ನಂತರ ಒಂದೊಂದೇ ಗುಟ್ಟುಗಳು ರಟ್ಟಾಗತೊಡಗಿವೆ. ಸಿದ್ದಾಪುರದ ಪ್ರಮುಖ ಸಹಕಾರಿಗಳು,...

Recommended For You

About the Author: Kanneshwar Naik

Leave a Reply

Your email address will not be published. Required fields are marked *